ಕೆಎಸ್ಆರ್ಟಿಸಿಯ ಆಂತರಿಕ ನಿಯತಕಾಲಿಕ ‘ಸಾರಿಗೆ ಸಂಪದ’ಕ್ಕೆ ಬೆಳ್ಳಿ ಮತ್ತು ಅಪಘಾತ ತಡೆಗಟ್ಟಲು ಜನಜಾಗೃತಿ ಮೂಡಿಸುವ ‘ರೇಡಿಯೋ ಜಿಂಗಲ್ಸ್’ಗೆ ಕಂಚಿನ ಪದಕ ಲಭಿಸಿದೆ. ಮಹಾರಾಷ್ಟ್ರದ ಪುಣೆಯಲ್ಲಿ ನಡೆದ 12ನೇ ವಿಶ್ವ ಸಾರ್ವಜನಿಕ ಸಂವಹನ ಸಮ್ಮೇಳನದಲ್ಲಿ ಅಲ್ಲಿನ ಸಮಾಜ ಕಲ್ಯಾಣ ಸಚಿವ ದಿಲೀಪ್ ಕಾಂಬ್ಳೆ ಪ್ರಶಸ್ತಿ ಪ್ರದಾನ ಮಾಡಿದರು ಎಂದು ಕೆಎಸ್ಆರ್ಟಿಸಿ ತಿಳಿಸಿದೆ.