ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಯಾಚನೆಗೆ ದೇವಳ, ಚರ್ಚ್‌ ಗುರಿ

ಕ್ಷೇತ್ರದಾದ್ಯಂತ ಮತ ಬೇಟೆ ಆರಂಭಿಸಿದ ಶಾಸಕ ಸೊರಕೆ
Last Updated 28 ಏಪ್ರಿಲ್ 2018, 13:43 IST
ಅಕ್ಷರ ಗಾತ್ರ

ಕಾಪು (ಪಡುಬಿದ್ರಿ): ಕಾರ್ಯ ಕರ್ತರೊಂದಿಗೆ ಕಿರು ಚರ್ಚೆ, ದೇವಳದಲ್ಲಿ ಪೂಜೆ, ಮನೆ ಮನೆ ತೆರಳಿ ಸ್ಥಳೀಯರೊಂದಿಗೆ ಮತಯಾಚನೆ, ಪ್ರಚಾರ ಕಾರ್ಯದಲ್ಲಿ ಕಾರ್ಯಕರ್ತರ ಭಾಗವಹಿಸುವಿಕೆ. ಜನರ ಸಮಸ್ಯೆ ಆಲಿಸುವುದು, ಮತ್ತೆ ಮತಯಾಚನೆ ದೃಶ್ಯಗಳು ಸಾಮಾನ್ಯವಾಗಿದ್ದವು.

ಕಾಪು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವಿನಯಕುಮಾರ್ ಸೊರಕೆ ಅವರು ಜತೆ 'ಪ್ರಜಾವಾಣಿ' ಸಾಗಿದಾಗ ಕಂಡು ಬಂದ ದೃಶ್ಯಗಳ ಚಿತ್ರಣ.

ಬೆಳಿಗ್ಗೆ 6 ಗಂಟೆಗೆ ಯೋಗ ಮಾಡಿ, ಪೂಜೆ ಸಲ್ಲಿಸಿ 7.45 ಕ್ಕೆ ಬೆಳಗಿನ ಉಪಹಾರ ಸೇವಿಸಿ, ಒಂದಿಷ್ಟು ಸಮಯ ಪತ್ರಿಕೆಗಳತ್ತ ಕಣ್ಣಾಡಿಸಿ, 8.30 ಕ್ಕೆ ಮನೆಗೆ ಬರುವಂತಹ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚೆಯಲ್ಲಿ ಪಾಲುದಾರರಾಗುವುದು ಸೊರಕೆ ಅವರ ಅಭ್ಯಾಸ. ಮನೆ ಬಿಡು ವಾಗ ಪ್ರಚಾರದ ವೇಳೆ ಮನೆಯಿಂದ ತರುವ ನೀರು, ಮಜ್ಜಿಗೆ ಮಾತ್ರ ಸೇವನೆ ಮಾಡುವ ರೂಢಿ ಇಟ್ಟುಕೊಂಡಿದ್ದಾರೆ. ಮಧ್ಯಾಹ್ನದ ಊಟ ಲೆಕ್ಕಿಸದೆ ಮತ ಯಾಚನೆ ಓಡಾಟದಲ್ಲಿ ಬ್ಯೂಸಿ ಆಗಿದ್ದಾರೆ.

8.30ಕ್ಕೆ ತನ್ನ ಕಾರಿನಲ್ಲಿ ಕಾಪುವಿಗೆ ತೆರಳಿದ ಅವರು ಕಾಪು ಜನಾರ್ದನ ದೇವಸ್ಥಾನದಲ್ಲಿ ನಡೆಯುತ್ತಿದ್ದ ರಾಶಿ ಪೂಜೆಯಲ್ಲಿ ಪಾಲ್ಗೊಂಡು, ಬಳಿಕ ದೇವರ ದರ್ಶನ ಪಡೆದರು. ಈ ವೇಳೆ ದೇವಳದಲ್ಲಿ ಕೆಲವು ಮುಖಂಡ ರೊಂದಿಗೆ ಕುಶಲೋಪಹಾರಿ ನಡೆಸಿ ಅಲ್ಲಿಂದ ಉಚ್ಚಿಲಕ್ಕೆ ತೆರಳಿದರು. ಉಚ್ಚಿ ಲ್ ದಲ್ಲಿ 18 ವರ್ಷದ  ಸುಹೈಲ್ ಎನ್ನುವ ಯುವಕ ಮೃತಪಟ್ಟಿದ್ದಲ್ಲಿಗೆ ತೆರಳಿ, ಅಂತಿಮ ದರ್ಶನ ಪಡೆದು ಕೊಂಡರು. ಕುಟುಂಬಕ್ಕೆ ಸಾಂತ್ವನ ಹೇಳಿದರು.

ಅಲ್ಲಿಂದ 9.45 ಕ್ಕೆ ನೇರ ತೆರ ಳಿದ್ದು ಪಾಂಗಾಳಗುಡ್ಡೆಗೆ, ಅಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಸರಸು ಡಿ. ಬಂಗೇರ ಏರ್ಪಡಿಸಿದ್ದ ಸ್ಥಳೀಯರ ಜತೆಗಿನ ಮುಖಾಮುಖಿ ಸಂವಾದದಲ್ಲಿ ಸೊರಕೆ ಪಾಲ್ಗೊಂಡರು. ಈ ಭಾಗದಲ್ಲಿ ರಸ್ತೆ ಸಮಸ್ಯೆ ಬಗ್ಗೆ ಮಾತುಕತೆ ನಡೆಸಿದರು. 10.30ರಿಂದ 3ಗಂಟೆಯವರೆಗೆ ಶಿರ್ವ ಪರಿಸರದ 10 ಕಡೆಗಳಲ್ಲಿ ಕಾಪು ದಿವಾಕರ ಶೆಟ್ಟಿ ನೇತೃತ್ವದಲ್ಲಿ ಕಾರ್ಯಕರ್ತರ ಮನೆಗಳಿಗೆ ತೆರಳಿ ಚರ್ಚೆ ನಡೆಸಿದರು. ಆ ಬಳಿಕ ಅಲ್ಲಿಂದ ಮೂಡುಬೆಳ್ಳೆಗೆ ತೆರಳಿ 3.15ರಿಂದ ರಾತ್ರಿ 10ರವರೆಗೂ ತನ್ನ ಪ್ರಚಾರ ಕಾರ್ಯ ನಡೆಸಿದರು.

ಮನೆಗಳಿಗೆ ತೆರಳಿ ಅಲ್ಲಿನ ಹಿರಿಯ ರೊಂದಿಗೆ ಮಾತುಕತೆ ನಡೆಸುವ ಅವರು, ಬಳಿಕ ಪರಿಸರದಲ್ಲಿ ಏನಾ ದರೂ ಸಮಸ್ಯೆಗಳಿವೆಯೇ ಎಂದು ಕೇಳಿ ತಿಳಿದುಕೊಂಡರು. ಕೆಲವು  ರಸ್ತೆ, ಚರಂಡಿ, ವಿದ್ಯುತ್ ದೀಪಗಳ ಬಗ್ಗೆ, ಕಡಿವ ನೀರಿನ ಸಮಸ್ಯೆ ಜನರು ಶಾಸಕರು ಎದುರು ಅನಾವರಣ ಮಾಡಿದರು. ಪ್ರಚಾರದ ವೇಳೆ ಮಾತನಾಡಿದ ಅವರು, ‘ಕಾಪು ಕ್ಷೇತ್ರದಲ್ಲಿ ತಮ್ಮ ಶಾಸಕತ್ವದ ಅವಧಿಯಲ್ಲಿ ಪ್ರತಿ ಗ್ರಾಮ ಪಂಚಾಯ್ತಿಗಳಿಗೆ ತಲಾ 9 ಬಾರಿ ಭೇಟಿ ನೀಡಿ ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ರಾಜ್ಯ ಸರ್ಕಾರದ ಜನೋಪಯೋಗಿ ಅಭಿವೃದ್ಧಿ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ತೃಪ್ತಿ ನನಗಿದೆ. ಇನ್ನೂ ಕಾಪು ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸ ಬಾಕಿ ಇವೆ. ಇನ್ನೊಮ್ಮೆ ಆಯ್ಕೆ ಮಾಡಿ ಅವುಗಳನ್ನು ಪೂರ್ಣಗೊಳಿಸಲು ಸಹಕಾರ ನೀಡಿ. ಕೆಲ ಪಕ್ಷಗಳು ಅಪಪ್ರಚಾರ ಮಾಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಯಾವುದೇ ಅಪಪ್ರಚಾರಕ್ಕೆ ಬಲಿಯಾಗಬೇಡಿ’ ಎಂದರು.

ಹಮೀದ್‌ ಪಡುಬಿದ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT