ಬಹುವರ್ಣದ ವಸ್ತ್ರ ಬೇಕು: ಮೂರು ದಿನಗಳ ಕಾಲ ನಡೆದ ಈ ಸಮ್ಮೇಳನ ಕರ್ನಾಟಕ ಮತ್ತು ಭಾರತದ ಬಹುರೂಪಿ ಪರಂಪರೆಗಳನ್ನು ತೆರೆದಿಟ್ಟಿತು. ಇಲ್ಲಿ ಬಹುವರ್ಣದ ವಸ್ತ್ರವೊಂದನ್ನು ಕಾಣಲು ಸಾಧ್ಯವಾಯಿತು. ಇಂತಹ ವಸ್ತ್ರವೇ ಈಗ ಕರ್ನಾಟಕ, ಭಾರತ ಮತ್ತು ಜಗತ್ತಿಗೆ ಬೇಕಿರುವುದು. ಜಗತ್ತು ಬಹುತ್ವವನ್ನು ಸದಾಕಾಲವೂ ಬಯಸುತ್ತದೆ ಎಂಬುದನ್ನು ಮತೀಯ ವಿಷ ಬೀಜ ಬಿತ್ತುವ ಸಾಹಿತಿಗಳು, ಕಲಾವಿದರು ಮತ್ತು ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.