<p><strong>ಧರ್ಮಸ್ಥಳ</strong>: ಉಜಿರೆಯಲ್ಲಿರುವ ಎಸ್ಡಿಎಂ ಆಸ್ಪತ್ರೆಯಲ್ಲಿ ಮುಂದಿನ ವರ್ಷ ಜನವರಿ ಒಂದರಿಂದ ಉಚಿತ ಡಯಾಲಿಸಿಸ್ ವ್ಯವಸ್ಥೆ ಇರಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು.</p>.<p>ಧರ್ಮಸ್ಥಳ ಲಕ್ಷ ದೀಫೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ನಡೆದ ಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಉಚಿತ ಡಯಾಲಿಸಿಸ್ಗೆ ವರ್ಷಕ್ಕೆ ಅಂದಾಜು ₹1 ಕೋಟಿ ವೆಚ್ಚ ಆಗಲಿದೆ ಎಂದರು.</p>.<p>ಒಂದು ಧರ್ಮದ ವೈಶಿಷ್ಟ್ಯವನ್ನು ಮತ್ತೊಂದು ಧರ್ಮದವರು ತಿಳಿದಾಗ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಇಲ್ಲದಿದ್ದರೆ ತಿಕ್ಕಾಟ ನಡೆಯುತ್ತದೆ ಎಂದ ಅವರು ಧರ್ಮವನ್ನು ವಿಶಾಲ ದೃಷ್ಟಿಯಿಂದ ನೋಡುವಂತೆ ಮಾಡುವುದೇ ಸರ್ವಧರ್ಮ ಸಮ್ಮೇಳನದ ಉದ್ದೇಶ ಎಂದರು. ಧರ್ಮದ ಬಗ್ಗೆ ಸಾಕಷ್ಟು ತಿಳಿದಿದ್ದರೂ ಜೀವನದಲ್ಲಿ ಅಳವಡಿಸದೇ ಇರುವುದು ಸಮಸ್ಯೆಗಳಿಗೆ ಕಾರಣ ಎಂದು ಅವರು ಅಭಿಪ್ರಾಯಪಟ್ಟರು.</p>.<p>ಸಮ್ಮೇಳನ ಉದ್ಘಾಟಿಸಿದ ಗೃಹ ಸಚಿವ ಜಿ.ಪರಮೇಶ್ವರ್, ಚುನಾಯಿತ ಸರ್ಕಾರಕ್ಕೆ ಮಾಡಲು ಸಾಧ್ಯವಾಗದ ಕೆಲಸ ಧರ್ಮಸ್ಥಳದಲ್ಲಿ ಆಗುತ್ತಿರುವುದು ಹೆಮ್ಮೆಯ ವಿಷಯ. ಸಂವಿಧಾನವೇ ಅಸ್ತಿತ್ವದಲ್ಲಿ ಇಲ್ಲದಿದ್ದ 1933ರಲ್ಲಿ ಮಂಜಯ್ಯ ಹೆಗ್ಗಡೆ ಅವರು ಸರ್ವಧರ್ಮ ಸಮನ್ವಯದ ಮಾತುಗಳನ್ನು ಆಡಿದ್ದರು. ಆ ನಂತರ ಅಂಬೇಡ್ಕರ್ ಅವರು ಸಂವಿಧಾನದಲ್ಲೂ ಎಲ್ಲ ಧರ್ಮಾಚರಣೆಗೆ ಅವಕಾಶ ನೀಡಿದರು ಎಂದು ಪರಮೇಶ್ವರ ಹೇಳಿದರು.</p>.<p>ಆಶೀರ್ವಚನ ನೀಡಿದ ಬೆಂಗಳೂರು ರಾಜರಾಜೇಶ್ವರಿ ನಗರದ ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನದ ಜಯೇಂದ್ರಪುರಿ ಸ್ವಾಮೀಜಿ, ಜಗತ್ತಿನಲ್ಲಿ ಎಲ್ಲವೂ ಪರಮೇಶ್ವರ ಸ್ವರೂಪಿ. ಆದರೆ ಅದು ಕೆಲವರಿಗೆ ಮಾತ್ರ ಗೊತ್ತಿದೆ. ಅದನ್ನು ಅರ್ಥ ಮಾಡಿಕೊಳ್ಳದವರಲ್ಲಿ ವೈಮನಸ್ಯ ಇರುತ್ತದೆ ಎಂದರು.</p>.<p>ಜನರನ್ನು ದೂರ ಮಾಡುವ ಯಾವ ಧರ್ಮಕ್ಕೂ ಧರ್ಮ ಎಂದು ಕರೆಸಿಕೊಳ್ಳುವ ಅರ್ಹತೆ ಇಲ್ಲ. ವಿಭಜನೆಯ ಭಾವನೆ ಇರುವ ಧರ್ಮವನ್ನು ದೂರ ಇರಿಸಬೇಕಾಗಿದೆ. ಭಗವದ್ಗೀತೆ ಸೇರಿದಂತೆ ಧರ್ಮಗಳೆಲ್ಲವೂ ಪರಮಾತ್ಮನನ್ನು ಹೊಗಳುತ್ತವೆ. ಆದ್ದರಿಂದ ಧರ್ಮವನ್ನು ಅನುಸರಿಸಿದರೆ ಕ್ಷೇಮ ಎಂದು ಅವರು ಹೇಳಿದರು.</p>.<p>ಸಂಶೋಧಕ, ಬೆಂಗಳೂರಿನ ಜಿ.ಬಿ.ಹರೀಶ, ನಿವೃತ್ತ ಪ್ರಾಂಶುಪಾಲ, ಮಡಂತ್ಯಾರಿನ ಜೋಸೆಫ್ ಎನ್.ಎಂ ಹಾಗೂ ವಿಜಯಪುರದ ಶಿಕ್ಷಕ ಮೆಹತಾಬ್ ಇಬ್ರಾಹಿಂ ಸಾಬ್ ಕಾಗವಾಡ ಉಪನ್ಯಾಸ ನೀಡಿದರು.</p>.<p>ಮಂಜೂಷಾ ವಸ್ತು ಸಂಗ್ರಹಾಲಯಕ್ಕೆ ಲಭಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಮಾಣಪತ್ರವನ್ನು ಮುಖ್ಯ ತೀರ್ಪುಗಾರ ಪ್ರದೀಪ್ ಭಾರದ್ವಾಜ್ ಧರ್ಮಾಧಿಕಾರಿಗೆ ಹಸ್ತಾಂತರಿಸಿದರು.</p>.<p>ಸ್ವಾಗತ ಸಮತಿ ಉಪಾಧ್ಯಕ್ಷ ಡಿ.ಸುರೇಂದ್ರ ಇದ್ದರು. ಶ್ರೀಧರ ಭಟ್ ನಿರೂಪಿಸಿದರು. ಅಜಯ್ ವಂದಿಸಿದರು. ಆನೆ, ವಾದ್ಯಘೋಷಗಳೊಂದಿಗೆ ಮೆರವಣಿಗೆಯಲ್ಲಿ ಅತಿಥಿಗಳನ್ನು ಕರೆತರಲಾಗಿತ್ತು.</p>.<p>ಶ್ರೇಯಸ್ ಅವರ ಮೃದಂಗ ಸಹಕಾರದಲ್ಲಿ ಶ್ರೀವಿದ್ಯಾ ಐತಾಳ ಹಾಡಿದ ಪ್ರಾರ್ಥನಾ ಗೀತೆ ಅತಿಥಿಗಳು ಮತ್ತು ಸಭಿಕರ ಮೈಜುಮ್ಮೆನಿಸಿತು. ಅಮೃತವರ್ಷಿಣಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆದಿತ್ತು. ಈ ಸಭಾಂಗಣದ ಬಗ್ಗೆ ಹೇಮಾವತಿ ಹೆಗ್ಗಡೆ ಅವರು ರಚಿಸಿದ 'ಏನು ರಮ್ಯ, ಏನು ಸೌಮ್ಯ ಅಮಮ ಸಭಾಭವನವು...' ಎಂಬ ಗೀತೆಯನ್ನು ಶ್ರೀವಿದ್ಯಾ ಹಾಡಿದರು.</p>.<p>ಕಲ್ಯಾಣಿ ರಾಗದಲ್ಲಿ ಶ್ಲೋಕವನ್ನು ಆಲಾಪಿಸಿದ ನಂತರ ಅಭೇರಿ ರಾಗದಲ್ಲಿ, ಯಕ್ಷಗಾನ ಶೈಲಿಯಲ್ಲಿ ಶ್ರೀವಿದ್ಯಾ ಹಾಡು ಪ್ರಸ್ತುತಪಡಿಸಿದರು. ಧರ್ಮಸ್ಥಳದ ಸೊಬಗು, ಮಂಜುನಾಥನ ಮಹಿಮೆ, ಕಾರ್ತಿಕೋತ್ಸವ, ಲಕ್ಷದೀಪೋತ್ಸವ ಮುಂತಾದ ಎಲ್ಲವೂ ಹಾಡಿನಲ್ಲಿ ಮಿಳಿತವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧರ್ಮಸ್ಥಳ</strong>: ಉಜಿರೆಯಲ್ಲಿರುವ ಎಸ್ಡಿಎಂ ಆಸ್ಪತ್ರೆಯಲ್ಲಿ ಮುಂದಿನ ವರ್ಷ ಜನವರಿ ಒಂದರಿಂದ ಉಚಿತ ಡಯಾಲಿಸಿಸ್ ವ್ಯವಸ್ಥೆ ಇರಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು.</p>.<p>ಧರ್ಮಸ್ಥಳ ಲಕ್ಷ ದೀಫೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ನಡೆದ ಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಉಚಿತ ಡಯಾಲಿಸಿಸ್ಗೆ ವರ್ಷಕ್ಕೆ ಅಂದಾಜು ₹1 ಕೋಟಿ ವೆಚ್ಚ ಆಗಲಿದೆ ಎಂದರು.</p>.<p>ಒಂದು ಧರ್ಮದ ವೈಶಿಷ್ಟ್ಯವನ್ನು ಮತ್ತೊಂದು ಧರ್ಮದವರು ತಿಳಿದಾಗ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಇಲ್ಲದಿದ್ದರೆ ತಿಕ್ಕಾಟ ನಡೆಯುತ್ತದೆ ಎಂದ ಅವರು ಧರ್ಮವನ್ನು ವಿಶಾಲ ದೃಷ್ಟಿಯಿಂದ ನೋಡುವಂತೆ ಮಾಡುವುದೇ ಸರ್ವಧರ್ಮ ಸಮ್ಮೇಳನದ ಉದ್ದೇಶ ಎಂದರು. ಧರ್ಮದ ಬಗ್ಗೆ ಸಾಕಷ್ಟು ತಿಳಿದಿದ್ದರೂ ಜೀವನದಲ್ಲಿ ಅಳವಡಿಸದೇ ಇರುವುದು ಸಮಸ್ಯೆಗಳಿಗೆ ಕಾರಣ ಎಂದು ಅವರು ಅಭಿಪ್ರಾಯಪಟ್ಟರು.</p>.<p>ಸಮ್ಮೇಳನ ಉದ್ಘಾಟಿಸಿದ ಗೃಹ ಸಚಿವ ಜಿ.ಪರಮೇಶ್ವರ್, ಚುನಾಯಿತ ಸರ್ಕಾರಕ್ಕೆ ಮಾಡಲು ಸಾಧ್ಯವಾಗದ ಕೆಲಸ ಧರ್ಮಸ್ಥಳದಲ್ಲಿ ಆಗುತ್ತಿರುವುದು ಹೆಮ್ಮೆಯ ವಿಷಯ. ಸಂವಿಧಾನವೇ ಅಸ್ತಿತ್ವದಲ್ಲಿ ಇಲ್ಲದಿದ್ದ 1933ರಲ್ಲಿ ಮಂಜಯ್ಯ ಹೆಗ್ಗಡೆ ಅವರು ಸರ್ವಧರ್ಮ ಸಮನ್ವಯದ ಮಾತುಗಳನ್ನು ಆಡಿದ್ದರು. ಆ ನಂತರ ಅಂಬೇಡ್ಕರ್ ಅವರು ಸಂವಿಧಾನದಲ್ಲೂ ಎಲ್ಲ ಧರ್ಮಾಚರಣೆಗೆ ಅವಕಾಶ ನೀಡಿದರು ಎಂದು ಪರಮೇಶ್ವರ ಹೇಳಿದರು.</p>.<p>ಆಶೀರ್ವಚನ ನೀಡಿದ ಬೆಂಗಳೂರು ರಾಜರಾಜೇಶ್ವರಿ ನಗರದ ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನದ ಜಯೇಂದ್ರಪುರಿ ಸ್ವಾಮೀಜಿ, ಜಗತ್ತಿನಲ್ಲಿ ಎಲ್ಲವೂ ಪರಮೇಶ್ವರ ಸ್ವರೂಪಿ. ಆದರೆ ಅದು ಕೆಲವರಿಗೆ ಮಾತ್ರ ಗೊತ್ತಿದೆ. ಅದನ್ನು ಅರ್ಥ ಮಾಡಿಕೊಳ್ಳದವರಲ್ಲಿ ವೈಮನಸ್ಯ ಇರುತ್ತದೆ ಎಂದರು.</p>.<p>ಜನರನ್ನು ದೂರ ಮಾಡುವ ಯಾವ ಧರ್ಮಕ್ಕೂ ಧರ್ಮ ಎಂದು ಕರೆಸಿಕೊಳ್ಳುವ ಅರ್ಹತೆ ಇಲ್ಲ. ವಿಭಜನೆಯ ಭಾವನೆ ಇರುವ ಧರ್ಮವನ್ನು ದೂರ ಇರಿಸಬೇಕಾಗಿದೆ. ಭಗವದ್ಗೀತೆ ಸೇರಿದಂತೆ ಧರ್ಮಗಳೆಲ್ಲವೂ ಪರಮಾತ್ಮನನ್ನು ಹೊಗಳುತ್ತವೆ. ಆದ್ದರಿಂದ ಧರ್ಮವನ್ನು ಅನುಸರಿಸಿದರೆ ಕ್ಷೇಮ ಎಂದು ಅವರು ಹೇಳಿದರು.</p>.<p>ಸಂಶೋಧಕ, ಬೆಂಗಳೂರಿನ ಜಿ.ಬಿ.ಹರೀಶ, ನಿವೃತ್ತ ಪ್ರಾಂಶುಪಾಲ, ಮಡಂತ್ಯಾರಿನ ಜೋಸೆಫ್ ಎನ್.ಎಂ ಹಾಗೂ ವಿಜಯಪುರದ ಶಿಕ್ಷಕ ಮೆಹತಾಬ್ ಇಬ್ರಾಹಿಂ ಸಾಬ್ ಕಾಗವಾಡ ಉಪನ್ಯಾಸ ನೀಡಿದರು.</p>.<p>ಮಂಜೂಷಾ ವಸ್ತು ಸಂಗ್ರಹಾಲಯಕ್ಕೆ ಲಭಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಮಾಣಪತ್ರವನ್ನು ಮುಖ್ಯ ತೀರ್ಪುಗಾರ ಪ್ರದೀಪ್ ಭಾರದ್ವಾಜ್ ಧರ್ಮಾಧಿಕಾರಿಗೆ ಹಸ್ತಾಂತರಿಸಿದರು.</p>.<p>ಸ್ವಾಗತ ಸಮತಿ ಉಪಾಧ್ಯಕ್ಷ ಡಿ.ಸುರೇಂದ್ರ ಇದ್ದರು. ಶ್ರೀಧರ ಭಟ್ ನಿರೂಪಿಸಿದರು. ಅಜಯ್ ವಂದಿಸಿದರು. ಆನೆ, ವಾದ್ಯಘೋಷಗಳೊಂದಿಗೆ ಮೆರವಣಿಗೆಯಲ್ಲಿ ಅತಿಥಿಗಳನ್ನು ಕರೆತರಲಾಗಿತ್ತು.</p>.<p>ಶ್ರೇಯಸ್ ಅವರ ಮೃದಂಗ ಸಹಕಾರದಲ್ಲಿ ಶ್ರೀವಿದ್ಯಾ ಐತಾಳ ಹಾಡಿದ ಪ್ರಾರ್ಥನಾ ಗೀತೆ ಅತಿಥಿಗಳು ಮತ್ತು ಸಭಿಕರ ಮೈಜುಮ್ಮೆನಿಸಿತು. ಅಮೃತವರ್ಷಿಣಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆದಿತ್ತು. ಈ ಸಭಾಂಗಣದ ಬಗ್ಗೆ ಹೇಮಾವತಿ ಹೆಗ್ಗಡೆ ಅವರು ರಚಿಸಿದ 'ಏನು ರಮ್ಯ, ಏನು ಸೌಮ್ಯ ಅಮಮ ಸಭಾಭವನವು...' ಎಂಬ ಗೀತೆಯನ್ನು ಶ್ರೀವಿದ್ಯಾ ಹಾಡಿದರು.</p>.<p>ಕಲ್ಯಾಣಿ ರಾಗದಲ್ಲಿ ಶ್ಲೋಕವನ್ನು ಆಲಾಪಿಸಿದ ನಂತರ ಅಭೇರಿ ರಾಗದಲ್ಲಿ, ಯಕ್ಷಗಾನ ಶೈಲಿಯಲ್ಲಿ ಶ್ರೀವಿದ್ಯಾ ಹಾಡು ಪ್ರಸ್ತುತಪಡಿಸಿದರು. ಧರ್ಮಸ್ಥಳದ ಸೊಬಗು, ಮಂಜುನಾಥನ ಮಹಿಮೆ, ಕಾರ್ತಿಕೋತ್ಸವ, ಲಕ್ಷದೀಪೋತ್ಸವ ಮುಂತಾದ ಎಲ್ಲವೂ ಹಾಡಿನಲ್ಲಿ ಮಿಳಿತವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>