ಮಂಗಳೂರು: ಮೈಸೂರು ಜಿಲ್ಲೆ ಕೆ.ಆರ್.ನಗರದ ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಕೊಡಮಾಡುವ ‘ಪ್ರೇಮಕವಿ ಕೆಎಸ್ನ ಕಾವ್ಯ ಪುರಸ್ಕಾರ’ಕ್ಕೆ ನಗರದ ಮಂಗಳಾ ಆಸ್ಪತ್ರೆಯ ಡಾ.ಸುರೇಶ ನೆಗಳಗುಳಿ ಅವರು ಆಯ್ಕೆಯಾಗಿದ್ದಾರೆ.
ಮೈಸೂರಿನಲ್ಲಿ ಸೆಪ್ಟೆಂಬರ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಮುಖ್ಯಸ್ಥ ಭೇರ್ಯ ರಾಮಕುಮಾರ್ ತಿಳಿಸಿದ್ದಾರೆ.