<p><strong>ಮಂಗಳೂರು</strong>: ತಿಂಗಳ ಕಾಲ ಉಪವಾಸ ಮತ್ತು ವೃತಾಚರಣೆ ಮಾಡಿ ಕೃತಾರ್ಥರಾದ ಮುಸ್ಲಿಮರು ಜಿಲ್ಲೆಯಲ್ಲಿ ಶುಕ್ರವಾರ ಈದ್–ಉಲ್–ಫಿತೃ ಹಬ್ಬದ ಸಂಭ್ರಮದ ಅಲೆಯಲ್ಲಿ ಮಿಂದರು. ಗುರುವಾರ ಚಂದ್ರದರ್ಶನವಾದ ಕಾರಣ ಶುಕ್ರವಾರ ದಕ್ಷಿಣ ಕನ್ನಡದಲ್ಲಿ ಹಬ್ಬ ಆಚರಿಸಲು ನಿರ್ಧರಿಸಲಾಗಿತ್ತು. ಜಿಲ್ಲೆಯ ಎಲ್ಲ ಮಸೀದಿಗಳಲ್ಲೂ ಬೆಳಿಗ್ಗೆ ವಿಶೇಷ ಪ್ರಾರ್ಥನೆ, ನಮಾಜ್ ನಡೆಯಿತು. ನಂತರ ಶುಭಾಶಯಗಳನ್ನು ಹೇಳಿಕೊಂಡು ಅಪ್ಪುಗೆಯ ಮೂಲಕ ಪರಸ್ಪರ ಸ್ನೇಹ ಹಂಚಿಕೊಂಡರು. </p>.<p>ಮಂಗಳೂರು ನಗರದ ಜುಮಾ ಮಸೀದಿ, ಈದ್ಗಾಗಳಲ್ಲಿ ನಡೆದ ಸಾಮೂಹಿಕ ನಮಾಜ್ ಭಕ್ತಿ–ಭಾವದ ಅಲೆ ಎಬ್ಬಿಸಿತು. ಖುತ್ಬಾ, ಸಂದೇಶ, ಪ್ರವಚನ ಮುಂತಾದವು ಸಂಭ್ರಮವನ್ನು ಹೆಚ್ಚಿಸಿದವು. ಹೊಸಬಟ್ಟೆಯ ಘಮ, ಅತ್ತರ್ನ ಸುವಾಸನೆಯ ನಡುವೆ ಪ್ರಾರ್ಥನೆಯಲ್ಲಿ ಪಾಲ್ಗೊಂಡವರ ಪೈಕಿ ಹಲವರು ಆಪ್ತರ ಮನೆಗಳಿಗೂ ಭೇಟಿ ನೀಡಿದರು. ದಫನ ಭೂಮಿಗೆ ಹೋಗಿ ಅಗಲಿದ ಕುಟುಂಬದ ಸದಸ್ಯರ ಮಗ್ಫಿರತ್ಗಾಗಿ ಪ್ರಾರ್ಥಿಸಿದರು.</p>.<p>ಬಾವುಟಗುಡ್ಡದ ಈದ್ಗಾ ಜುಮಾ ಮಸ್ಜಿದ್ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಖುತ್ಬಾ ಪಾರಾಯಣ ಮಾಡಿದರು. ಬಂದರ್ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬ್ ಸೈಯದ್ ಶಂಸುದ್ದೀನ್ ಬಾಸಿತ್ ಬಾ ಅಲವಿ ತಂಙಳ್ ಅಲ್ ಅನ್ಸಾರಿ ನೇತೃತ್ವದಲ್ಲಿ ನಮಾಝ್ ನೆರವೇರಿತು.</p>.<p>ಈದ್ಗಾ ಜುಮಾ ಮಸೀದಿಯ ಅಧ್ಯಕ್ಷ ಯೆನೆಪೊಯ ಅಬ್ದುಲ್ಲ ಕುಂಞಿ, ಉಪಾಧ್ಯಕ್ಷ ಕೆ. ಅಶ್ರಫ್, ಕೋಶಾಧಿಕಾರಿ ಎಸ್.ಎಂ ರಶೀದ್ ಪಾಲ್ಗೊಂಡಿದ್ದರು. ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಕೂಡ ಇಲ್ಲಿ ಪ್ರರ್ಥನೆ ನೆರವೇರಿಸಿದರು. ಶಾಸಕ ಐವನ್ ಡಿಸೋಜ ಹಾಗೂ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಭೇಟಿ ನೀಡಿದರು. </p>.<p>ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್ನಲ್ಲಿ ಖತೀಬ್ ಹಾಫಿಲ್ ಅಬ್ದುಲ್ ಮಜೀದ್ ಫಾಳಿಲಿ ಹಿಕಮಿ ಸಖಾಫಿ ನೇತೃತ್ವದಲ್ಲಿ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಿತು. ಉಳ್ಳಾಲ ರ್ಗಾ ಅಧ್ಯಕ್ಷ ಬಿ.ಜೆ ಹನೀಫ್ ಪಾಲ್ಗೊಂಡಿದ್ದರು. ಪಂಪ್ವೆಲ್ನ ತಕ್ವಾ ಜುಮಾ ಮಸ್ಜಿದ್, ಕಂಕನಾಡಿಯ ರಹಮಾನಿಯ ಜುಮಾ ಮಸ್ಜಿದ್, ಬದ್ರಿಯಾ ಜುಮಾ ಮಸ್ಜಿದ್, ಬೋಳಾರ ಜಾಮಿಯಾ ಮಸ್ಜಿದ್, ಬೋಳಾರ ಶಾದಿ ಮಹಲ್ ಸಮೀಪದ ಇಸ್ಲಾಮಿಕ್ ಸೆಂಟರ್, ಕಪ್ರಿಗುಡ್ಡದ ಮಸ್ಜಿದ್ ಅಲ್ ಜಲಾಲ್, ಕುದ್ರೋಳಿ ಈದ್ಗಾ ಮೈದಾನ, ಮಸ್ಜಿದ್ ಅಲ್ ಎಹ್ಸಾನ್, ವಾಸ್ ಲೇನ್ ಜಾಮಿಯ ಮಸ್ಜಿದ್ನಲ್ಲೂ ಸಡಗರ ಕಂಡುಬಂತು. </p>.<p>ಬಾವುಟಗುಡ್ಡ ಜುಮಾ ಮಸ್ಜಿದ್ನಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಯು.ಟಿ ಖಾದರ್ ಶಾಂತಿ, ಪ್ರೀತಿ ಮತ್ತು ಸೌಹೌರ್ದವೇ ಎಲ್ಲ ಹಬ್ಬಗಳ ಸಂದೇಶವಾಗಿದ್ದು ಕರ್ನಾಟಕದಿಂದ ಹಿಡಿದು ವಿಶ್ವದ ವರೆಗೆ ಶಾಂತಿ ಹಬ್ಬಲಿ ಎಂದು ಇಂದು ಪ್ರಾರ್ಥಿಸಲಾಗಿದೆ. ಜಗತ್ತಿನ ಯಾವುದೇ ಭಾಗದಲ್ಲಿ ಯುದ್ಧ ಸಂಭವಿಸಿದರೂ ಎಲ್ಲ ಕಡೆಯಲ್ಲಿ ಅದರ ದುಷ್ಪರಿಣಾಮ ಆಗುತ್ತದೆ. ಆದ್ದರಿಂದ ಶಾಂತಿಗಾಗಿ ಪ್ರಾರ್ಥಿಸಬೇಕಾದ ಕಾಲವಿದು ಎಂದರು.</p>.<p>ನಂತೂರಿನ ಬದ್ರಿಯಾ ಜುಮಾ ಮಸ್ಜಿದ್ನಲ್ಲಿ ಸಂದೇಶ ನೀಡಿದ ಖತೀಬ್ ಅಬ್ದುಲ್ ನಾಸಿರ್ ಸಾಅದಿ ಬಡವರು ಮತ್ತು ಅನಾಥರಿಗೆ ನೆರವು ನೀಡುವುದನ್ನು ಪ್ರತಿಯೊಬ್ಬರೂ ಕರ್ತವ್ಯದಂತೆ ಪಾಲಿಸಬೇಕು. ಸಂಭ್ರಮದ ಹಬ್ಬವಾಗಿ ಈದ್ ಉಲ್ ಫಿತ್ರ್ ಆಚರಿಸುವುದರೊಂದಿಗೆ ತ್ಯಾಗಕ್ಕೂ ಸಿದ್ಧರಾಗಬೇಕು ಎಂದು ಹೇಳಿದರು. </p>.<p>ಅಲ್ಲಾಹು ನೀಡಿದ ಆರೋಗ್ಯ ಸಂಪತ್ತು ಮತ್ತು ಸಮಯವನ್ನು ಜೂಜಾಡುತ್ತ ಮದ್ಯ ಸೇವಿಸುತ್ತ ಅನೈತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತ ಹಾಳುಗೆಡವಬಾರದು. ಬೇಧ ಮತ್ತು ಸಂಘರ್ಷ ಮರೆತು ಸೌಹಾರ್ದದಿಂದ ಬಾಳಬೇಕು.</p><p><strong>–ಅಬ್ದುಲ್ ನಾಸಿರ್ ಸಾಅದಿ ನಂತೂರಿನ ಬದ್ರಿಯಾ ಜುಮಾ ಮಸ್ಜಿದ್ ಖತೀಬ್</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ತಿಂಗಳ ಕಾಲ ಉಪವಾಸ ಮತ್ತು ವೃತಾಚರಣೆ ಮಾಡಿ ಕೃತಾರ್ಥರಾದ ಮುಸ್ಲಿಮರು ಜಿಲ್ಲೆಯಲ್ಲಿ ಶುಕ್ರವಾರ ಈದ್–ಉಲ್–ಫಿತೃ ಹಬ್ಬದ ಸಂಭ್ರಮದ ಅಲೆಯಲ್ಲಿ ಮಿಂದರು. ಗುರುವಾರ ಚಂದ್ರದರ್ಶನವಾದ ಕಾರಣ ಶುಕ್ರವಾರ ದಕ್ಷಿಣ ಕನ್ನಡದಲ್ಲಿ ಹಬ್ಬ ಆಚರಿಸಲು ನಿರ್ಧರಿಸಲಾಗಿತ್ತು. ಜಿಲ್ಲೆಯ ಎಲ್ಲ ಮಸೀದಿಗಳಲ್ಲೂ ಬೆಳಿಗ್ಗೆ ವಿಶೇಷ ಪ್ರಾರ್ಥನೆ, ನಮಾಜ್ ನಡೆಯಿತು. ನಂತರ ಶುಭಾಶಯಗಳನ್ನು ಹೇಳಿಕೊಂಡು ಅಪ್ಪುಗೆಯ ಮೂಲಕ ಪರಸ್ಪರ ಸ್ನೇಹ ಹಂಚಿಕೊಂಡರು. </p>.<p>ಮಂಗಳೂರು ನಗರದ ಜುಮಾ ಮಸೀದಿ, ಈದ್ಗಾಗಳಲ್ಲಿ ನಡೆದ ಸಾಮೂಹಿಕ ನಮಾಜ್ ಭಕ್ತಿ–ಭಾವದ ಅಲೆ ಎಬ್ಬಿಸಿತು. ಖುತ್ಬಾ, ಸಂದೇಶ, ಪ್ರವಚನ ಮುಂತಾದವು ಸಂಭ್ರಮವನ್ನು ಹೆಚ್ಚಿಸಿದವು. ಹೊಸಬಟ್ಟೆಯ ಘಮ, ಅತ್ತರ್ನ ಸುವಾಸನೆಯ ನಡುವೆ ಪ್ರಾರ್ಥನೆಯಲ್ಲಿ ಪಾಲ್ಗೊಂಡವರ ಪೈಕಿ ಹಲವರು ಆಪ್ತರ ಮನೆಗಳಿಗೂ ಭೇಟಿ ನೀಡಿದರು. ದಫನ ಭೂಮಿಗೆ ಹೋಗಿ ಅಗಲಿದ ಕುಟುಂಬದ ಸದಸ್ಯರ ಮಗ್ಫಿರತ್ಗಾಗಿ ಪ್ರಾರ್ಥಿಸಿದರು.</p>.<p>ಬಾವುಟಗುಡ್ಡದ ಈದ್ಗಾ ಜುಮಾ ಮಸ್ಜಿದ್ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಖುತ್ಬಾ ಪಾರಾಯಣ ಮಾಡಿದರು. ಬಂದರ್ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬ್ ಸೈಯದ್ ಶಂಸುದ್ದೀನ್ ಬಾಸಿತ್ ಬಾ ಅಲವಿ ತಂಙಳ್ ಅಲ್ ಅನ್ಸಾರಿ ನೇತೃತ್ವದಲ್ಲಿ ನಮಾಝ್ ನೆರವೇರಿತು.</p>.<p>ಈದ್ಗಾ ಜುಮಾ ಮಸೀದಿಯ ಅಧ್ಯಕ್ಷ ಯೆನೆಪೊಯ ಅಬ್ದುಲ್ಲ ಕುಂಞಿ, ಉಪಾಧ್ಯಕ್ಷ ಕೆ. ಅಶ್ರಫ್, ಕೋಶಾಧಿಕಾರಿ ಎಸ್.ಎಂ ರಶೀದ್ ಪಾಲ್ಗೊಂಡಿದ್ದರು. ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಕೂಡ ಇಲ್ಲಿ ಪ್ರರ್ಥನೆ ನೆರವೇರಿಸಿದರು. ಶಾಸಕ ಐವನ್ ಡಿಸೋಜ ಹಾಗೂ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಭೇಟಿ ನೀಡಿದರು. </p>.<p>ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್ನಲ್ಲಿ ಖತೀಬ್ ಹಾಫಿಲ್ ಅಬ್ದುಲ್ ಮಜೀದ್ ಫಾಳಿಲಿ ಹಿಕಮಿ ಸಖಾಫಿ ನೇತೃತ್ವದಲ್ಲಿ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಿತು. ಉಳ್ಳಾಲ ರ್ಗಾ ಅಧ್ಯಕ್ಷ ಬಿ.ಜೆ ಹನೀಫ್ ಪಾಲ್ಗೊಂಡಿದ್ದರು. ಪಂಪ್ವೆಲ್ನ ತಕ್ವಾ ಜುಮಾ ಮಸ್ಜಿದ್, ಕಂಕನಾಡಿಯ ರಹಮಾನಿಯ ಜುಮಾ ಮಸ್ಜಿದ್, ಬದ್ರಿಯಾ ಜುಮಾ ಮಸ್ಜಿದ್, ಬೋಳಾರ ಜಾಮಿಯಾ ಮಸ್ಜಿದ್, ಬೋಳಾರ ಶಾದಿ ಮಹಲ್ ಸಮೀಪದ ಇಸ್ಲಾಮಿಕ್ ಸೆಂಟರ್, ಕಪ್ರಿಗುಡ್ಡದ ಮಸ್ಜಿದ್ ಅಲ್ ಜಲಾಲ್, ಕುದ್ರೋಳಿ ಈದ್ಗಾ ಮೈದಾನ, ಮಸ್ಜಿದ್ ಅಲ್ ಎಹ್ಸಾನ್, ವಾಸ್ ಲೇನ್ ಜಾಮಿಯ ಮಸ್ಜಿದ್ನಲ್ಲೂ ಸಡಗರ ಕಂಡುಬಂತು. </p>.<p>ಬಾವುಟಗುಡ್ಡ ಜುಮಾ ಮಸ್ಜಿದ್ನಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಯು.ಟಿ ಖಾದರ್ ಶಾಂತಿ, ಪ್ರೀತಿ ಮತ್ತು ಸೌಹೌರ್ದವೇ ಎಲ್ಲ ಹಬ್ಬಗಳ ಸಂದೇಶವಾಗಿದ್ದು ಕರ್ನಾಟಕದಿಂದ ಹಿಡಿದು ವಿಶ್ವದ ವರೆಗೆ ಶಾಂತಿ ಹಬ್ಬಲಿ ಎಂದು ಇಂದು ಪ್ರಾರ್ಥಿಸಲಾಗಿದೆ. ಜಗತ್ತಿನ ಯಾವುದೇ ಭಾಗದಲ್ಲಿ ಯುದ್ಧ ಸಂಭವಿಸಿದರೂ ಎಲ್ಲ ಕಡೆಯಲ್ಲಿ ಅದರ ದುಷ್ಪರಿಣಾಮ ಆಗುತ್ತದೆ. ಆದ್ದರಿಂದ ಶಾಂತಿಗಾಗಿ ಪ್ರಾರ್ಥಿಸಬೇಕಾದ ಕಾಲವಿದು ಎಂದರು.</p>.<p>ನಂತೂರಿನ ಬದ್ರಿಯಾ ಜುಮಾ ಮಸ್ಜಿದ್ನಲ್ಲಿ ಸಂದೇಶ ನೀಡಿದ ಖತೀಬ್ ಅಬ್ದುಲ್ ನಾಸಿರ್ ಸಾಅದಿ ಬಡವರು ಮತ್ತು ಅನಾಥರಿಗೆ ನೆರವು ನೀಡುವುದನ್ನು ಪ್ರತಿಯೊಬ್ಬರೂ ಕರ್ತವ್ಯದಂತೆ ಪಾಲಿಸಬೇಕು. ಸಂಭ್ರಮದ ಹಬ್ಬವಾಗಿ ಈದ್ ಉಲ್ ಫಿತ್ರ್ ಆಚರಿಸುವುದರೊಂದಿಗೆ ತ್ಯಾಗಕ್ಕೂ ಸಿದ್ಧರಾಗಬೇಕು ಎಂದು ಹೇಳಿದರು. </p>.<p>ಅಲ್ಲಾಹು ನೀಡಿದ ಆರೋಗ್ಯ ಸಂಪತ್ತು ಮತ್ತು ಸಮಯವನ್ನು ಜೂಜಾಡುತ್ತ ಮದ್ಯ ಸೇವಿಸುತ್ತ ಅನೈತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತ ಹಾಳುಗೆಡವಬಾರದು. ಬೇಧ ಮತ್ತು ಸಂಘರ್ಷ ಮರೆತು ಸೌಹಾರ್ದದಿಂದ ಬಾಳಬೇಕು.</p><p><strong>–ಅಬ್ದುಲ್ ನಾಸಿರ್ ಸಾಅದಿ ನಂತೂರಿನ ಬದ್ರಿಯಾ ಜುಮಾ ಮಸ್ಜಿದ್ ಖತೀಬ್</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>