‘ದ್ವೇಷ, ಅಸೂಯೆ, ಕೋಮು ವರ್ಗೀಕರಣದ ಮಧ್ಯೆ ಶಾಂತಿ, ಸಹನೆ, ಸಮಾಧಾನದ ರಂಜಾನ್ ಹಬ್ಬವನ್ನು ಆಚರಿಸಲಾಗುತ್ತದೆ. ಕರುಣೆಯ ಸಂದೇಶ ಸಾರುವ ಈದ್–ಉಲ್ ಫಿತ್ರ್ ಸರ್ವರಿಗೂ ಒಳಿತನ್ನು ಕರುಣಿಸಲಿ. ಜಾತಿ ಧ್ರುವೀಕರಣದ ಮೂಲಕ ಸಮಾಜವನ್ನು ಒಡೆಯುವ ವಿಚ್ಛಿದ್ರಕಾರಿ ಶಕ್ತಿಗಳ ಯತ್ನವನ್ನು ವಿಫಲಗೊಳಿಸಿ, ಕಾರುಣ್ಯದ, ಸಹಬಾಳ್ವೆಯ ಸುಂದರ ನಾಡನ್ನು ಕಟ್ಟಲು ಎಲ್ಲರೂ ಕೈ ಜೋಡಿಸೋಣ’ ಎಂದು ನಗರದ ಮಸ್ಜಿದ್ ಝೀನತ್ ಬಕ್ಷ್ ಹಾಗೂ ಈದ್ಗಾ ಮಸೀದಿ ಕೋಶಾಧಿಕಾರಿ ಸೈಯದ್ ಅಹ್ಮದ್ ಬಾಷಾ ತಂಙಳ್ ಮನವಿ ಮಾಡಿದ್ದಾರೆ.