ಯಾವುದೇ ಆತಿರೇಖಗಳಿಲ್ಲದ ತಿಳಿಯ ಅನುಭವಗಳನ್ನು ನೀಡುವ ನಾಲ್ಕೈದು ಕಥೆಗಳನ್ನು ರಂಗರೂಪಕ್ಕೆ ತರುವ ಪ್ರಯತ್ನ ಇಲ್ಲಿ ನಡೆದಿದೆ. ಒಬ್ಬ ಮನುಷ್ಯನ ಜೀವನಶೈಲಿ, ಕಟ್ಟುಕಥೆಯಂತೆ ಕಾಣುವ ಒಂದು ಘಟನೆ, ಬಾಲ್ಯದ ತೀರದ ಆಸೆ, ಬದುಕು ಕಟ್ಟುವರೀತಿ ಈ ನಾಟಕದ ಹೂರಣ. ಈ ಕಥೆಗಳ ವಿಶೇಷವೆಂದರೆ ಯಾವುದೇ ತಾರ್ಕಿಕ ಚೌಕಟ್ಟುಗಳಿಗೆ ಒಳಪಡದೆ, ಸಾಮಾನ್ಯ ವ್ಯಕ್ತಿಯ ಬದುಕಿನ ಸೂಕ್ಷ್ಮಗಳನ್ನು ಎತ್ತಿಹಿಡಿದು ಗೌರವಿಸುವ ಪ್ರಯತ್ನ.‘ನೆಮ್ಮದಿಯ ಜೀವನವು ಒಂದು ಸಾಧನೆ’ ಎಂದು ಬಿಂಬಿಸುವ ಇಚ್ಚೆ.