ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನಿಂದ ಬಂದಿದ್ದ ಸುಕ್ರಿ ಗೌಡ ತಂಡದವರು ಜನಪದ ಹಾಡು, ಹಾಲಕ್ಕಿ ತಾರ್ಲೆ ನೃತ್ಯ ಪ್ರದರ್ಶಿಸಿದರು. ಲೋಕ ಕಲ್ಯಾಣಕ್ಕಾಗಿ ಮತ್ತು ಸದ್ಯದ ಸಾಂಕ್ರಾಮಿಕ, ಪ್ರಾಕೃತಿಕ ದುರಂತಗಳು ಕೊನೆಯಾಗಿ ಶಾಂತಿ, ನೆಮ್ಮದಿ, ಆರೋಗ್ಯ ಲಭಿಸಲೆಂದು ಪ್ರಾರ್ಥಿಸಿ, ಭಜನೆ, ವೇದ, ಪ್ರಾರ್ಥನೆ ನಡೆಸಲಾಯಿತು. ಹಾಲಕ್ಕಿಗರ ತಾರ್ಲೆ ನೃತ್ಯ ಮಂಗಳೂರಿಗರ ಮನಸೆಳೆಯಿತು.