ಈ ಬಗ್ಗೆ ಟ್ವೀಟ್ ಮಾಡಿರುವ ವಿಧಾನ ಪರಿಷತ್ ವಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಅವರು, ‘ಕೊಲೆಗಾರನನ್ನು ಆರಾಧಿಸುವುದು, ಕೊಲೆಗಡುಕರ ಸಂಸ್ಕೃತಿ..! ಮಹಾತ್ಮ ಗಾಂಧಿಯ ಕೊಲೆಗಾರ ಗೋಡ್ಸೆಯ ಆರಾಧಕರಿಗೆ ಹೀಗೆ ಬಹಿರಂಗವಾಗಿ ಫ್ಲೆಕ್ಸ್ ಹಾಕಲು ಒಪ್ಪಿಗೆ ನೀಡಿದವರಾರು? ಮಂಗಳೂರು ಪೊಲೀಸ್ ಕಮಿಷನರ್ ಕೂಡಲೇ ದುಷ್ಕೃರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿ, ಫ್ಲೆಕ್ಸ್ ನೆಪದಲ್ಲಿ ಅಶಾಂತಿ ಸೃಷ್ಟಿಸಲು ಹೊಂಚು ಹಾಕುತ್ತಿರುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕು’ ಎಂದಿದ್ದಾರೆ.