ಮಂಗಳೂರು: ‘ಆಗಷ್ಟೇ ರಂಜಾನ್ ಉಪವಾಸ ಮುಗಿದಿತ್ತು. ನನಗೆ ಮತ್ತು ಪತ್ನಿಗೆ ತೀವ್ರ ತಲೆಸಿಡಿತ, ಕೆಮ್ಮು, ಜ್ವರ. ಆಸ್ಪತ್ರೆಗೆ ಹೋಗಲು ಸುತಾರಾಂ ಮನಸ್ಸಿಲ್ಲ. ಪ್ರಾಣ ಹೋದರೂ ಚಿಂತೆಯಿಲ್ಲ, ಮನೆಯಲ್ಲೇ ಚಿಕಿತ್ಸೆ ಪಡೆಯವುದೆಂದು ನಿರ್ಧರಿಸಿ, ಐಸೊಲೇಟ್ ಆದೆವು. ಪತ್ನಿಯ ಆರೋಗ್ಯ ಸ್ಥಿತಿ ಬಿಗಡಾಯಿಸಿತು. ಸ್ನೇಹಿತನಿಗೆ ಕರೆ ಮಾಡಿ, ಆತ ದೇವರಂತೆ ಬಂದು ನಮ್ಮನ್ನು ಕಾಪಾಡಿದ’ ಎನ್ನುತ್ತ ಮಾತಿಗಿಳಿದರು ಹಿರಿಯರಾದ ಮೊಹಮ್ಮದ್ ಬಡ್ಡೂರು.