ಸಾಮಾಜಿಕ ಕಾರ್ಯರ್ತೆಯೊಬ್ಬರು ಇತ್ತೀಚಿನ ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿ ಹೇಳಿಕೆಯೊಂದನ್ನು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ವ್ಯಕ್ತಿಯೊಬ್ಬ ಇಂಥವರನ್ನು ಗ್ಯಾಂಗ್ರೇಪ್ ಮಾಡಬೇಕು. ‘ಎಲ್ಲಾ ಹಿಂದೂ ಅಭಿಮಾನಿಗಳ ಅಭಿಪ್ರಾಯ ತಪ್ಪು. ತನ್ನದೇ ಅಭಿಪ್ರಾಯ ನಿಜ ಎಂದು ದೇಶದ್ರೋಹಿ ತರಹ ಮಾತನಾಡುತ್ತಾಳೆ’ ಎಂಬ ಮಾತಿನೊಂದಿಗೆ ಅವಾಚ್ಯ ಶಬ್ದಗಳನ್ನು ಉಪಯೋಗಿಸಿ ನಿಂದನಾತ್ಮಕ ಹೇಳಿಕೆಯನ್ನು ಹಾಕಿದ್ದಾನೆ.