ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಶಶಿಕುಮಾರ್, ‘ಕೆಎಂಸಿ ಪ್ರಾಂಗಣದಲ್ಲಿ ಮಾದಕ ಪದಾರ್ಥಗಳ ಸೇವನೆ ಹಾಗೂ ಮಾರಾಟಕ್ಕೆ ಆಸ್ಪದವನ್ನೇ ನೀಡದಿರಲು ‘ಶೂನ್ಯ ಸಹನೆ ನೀತಿ’ ಅಳವಡಿಸಿಕೊಂಡಿರುವುದನ್ನು ಖಾತರಿಪಡಿಸುವ ಪತ್ರವನ್ನು ಸಂಸ್ಥೆಯ ಡೀನ್ ನೀಡಿದ್ದಾರೆ. ವಿದ್ಯಾರ್ಥಿಗಳ ಲಾಕರ್ಗಳು, ಬ್ಯಾಗ್ಗಳನ್ನು ಕಾಲೇಜಿನ ಅಧಿಕಾರಿಗಳೇ ಆಗಾಗ ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಮಾದಕ ಪದಾರ್ಥ ಸೇವನೆ ತಡೆಯಲು ಕಾಲೇಜು ಕಠಿಣ ಕ್ರಮಕೈಗೊಂಡಿದ್ದಾರೆ’ ಎಂದು ತಿಳಿಸಿದರು.