ಆರೋಗ್ಯದಲ್ಲಿ ಚೇತರಿಕೆ: ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಸುಕ್ರಜ್ಜಿ ಅವರನ್ನು ಅಂಕೋಲಾದಿಂದ ಶನಿವಾರ ಮಂಗಳೂರಿಗೆ ಕರೆತಂದು, ಕೆಎಂಸಿಯಲ್ಲಿ ದಾಖಲಿಸಲಾಗಿತ್ತು. ಭಾನುವಾರ ಅವರಿಗೆ ನಾಲ್ಕು ಸ್ಟಂಟ್ ಅಳವಡಿಸಿದ್ದು, ಚಿಕಿತ್ಸೆಗೆ ಶೀಘ್ರ ಸ್ಪಂದಿಸಿದ ಕಾರಣ, ಸೋಮವಾರ ಸಂಜೆ ಅವರನ್ನು ಐಸಿಯುದಿಂದ ಸಾಮಾನ್ಯ ವಾರ್ಡ್ಗೆ ಸ್ಥಳಾಂತರಿಸಲಾಗಿದೆ. ಮಂಗಳವಾರ ಎಲ್ಲರೊಡನೆ ಮಾತನಾಡಿದ ಅವರು, ಆಹಾರ ಸೇವಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ವಿಶ್ವಾಸವನ್ನೂ ಸುಕ್ರಜ್ಜಿ ವ್ಯಕ್ತಪಡಿಸಿದ್ದಾರೆ.