ನಗರದ ಹೊರವಲಯದ ಬನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬುರ್ಗ ಎಂಬಲ್ಲಿ ವಾಸವಿರುವ ಗೋಪಾಲ ಶೆಟ್ಟಿ ಅವರದ್ದು ತೀರಾ ಬಡ ಕುಟುಂಬ. ಕುಸಿಯುವ ಹಂತದಲ್ಲಿರುವ ಹೆಂಚಿನ ಮಾಡಿಗೆ ಪ್ಲಾಸ್ಟಿಕ್ ಹೊದಿಕೆ ಮಾಡಿದ ಜೋಪಡಿಯಲ್ಲಿ ಈ ಕುಟುಂಬ ನೆಲೆಸಿತ್ತು. ದುಡಿಯ
ಲಾಗದೆ ಅಸಹಾಯಕ ಸ್ಥಿತಿಯಲ್ಲಿರುವ ಯಜಮಾನ, ಪತ್ನಿ ಶಾರದಾ ಬೀಡಿ ಸುತ್ತಿ ಇಬ್ಬರು ಮಕ್ಕಳ ವಿದ್ಯಾಭ್ಯಾಸ, ಮನೆ ನಿರ್ವಹಣೆ ಮಾಡುತ್ತಿದ್ದರು.