ಮಂಗಳೂರು: ವಯಸ್ಸಾಗಿರುವುದು, ಆರ್ಥಿಕ ಸಂಕಷ್ಟ, ಅನಾರೋಗ್ಯ, ಕಾರ್ಮಿಕರ ಕೊರತೆಯಂತಹ ಗಂಭೀರ ಸಮಸ್ಯೆಗಳ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಮೀನುಗಳನ್ನು ಹಡೀಲು ಬಿಟ್ಟವರಿಗೆ ರೈತ ಉತ್ಪಾದಕರ ಸಂಘದ ಮೂಲಕ ಕೃಷಿ ಇಲಾಖೆ ನೆರವಾಗುತ್ತಿದೆ. ಹಡೀಲು ಬಿಟ್ಟಿದ್ದ ಜಮೀನುಗಳಲ್ಲಿ ಇಲಾಖೆಯ ಪ್ರಯತ್ನದಿಂದ ಭತ್ತದ ಕೃಷಿ ಆರಂಭವಾಗಿದೆ.