<p><strong>ಮಂಗಳೂರು:</strong> ಚೆನ್ನೈನ ಹೈನಾಸ್ ಏರ್ಬೋರ್ನ್ ವನ್ ತಂಡವು ಆಲ್ ಇಂಡಿಯಾ ಅಲ್ಟಿಮೇಟ್ ಬೀಚ್ ನ್ಯಾಷನಲ್ಸ್ನ ಮುಕ್ತ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. </p>.<p>ಇಂಡಿಯಾ ಅಲ್ಟಿಮೇಟ್ ಸಹಯೋಗದಲ್ಲಿ ಕರ್ನಾಟಕ ಅಲ್ಟಿಮೇಟ್ ಪ್ಲೇಯರ್ಸ್ ಅಸೋಸಿಯೇಷನ್ (ಕೆಯುಪಿಎ) ನಗರದ ತಣ್ಣೀರುಬಾವಿಯ ಬ್ಲೂ ಬೇ ಇಕೊ ಬೀಚ್ನಲ್ಲಿ ಆಯೋಜಿಸಿದ್ದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಹೈನಾಸ್ ಏರ್ಬೋರ್ನ್ ವನ್ ತಂಡವು 11–10ರಿಂದ ಚೆನ್ನೈನ ಸ್ಟಾಲ್ 7 (2) ತಂಡವನ್ನು ಭಾನುವಾರ ಮಣಿಸಿತು. </p>.<p>ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಪುಯಲ್ 4 ತಂಡವು 12–9ರಿಂದ ಕಲ್ಲಹನ್ಸ್ ಓಪನ್ಸ್ 3 ತಂಡವನ್ನು ಸೋಲಿಸಿತು. </p>.<p>ಚೆನ್ನೈನ ವಲೈ ತಂಡ ಅಜೇಯರಾಗಿ ಉಳಿದು ಇಂಡಿಯಾ ಅಲ್ಟಿಮೇಟ್ ಬೀಚ್ ನ್ಯಾಷನಲ್ಸ್ನ ಮಹಿಳೆಯರ ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿತು. ಫೈನಲ್ನಲ್ಲಿ ಈ ತಂಡವು ಬೆಂಗಳೂರಿನ ಏರ್ ಬೆಂಡರ್ಸ್ ಒನ್ ತಂಡವನ್ನು 9–8ರಿಂದ ಸೋಲಿಸಿತು. </p>.<p>ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಥಳೀಯ ಉದ್ಯಮಿ ಯತೀಶ್ ಬೈಕಂಪಾಡಿ, ಯಂಗ್ ಇಂಡಿಯನ್ಸ್ನ ಶರಣ್ ಶೆಟ್ಟಿ, ಇಂಡಿಯಾ ಅಲ್ಟಿಮೇನ್ನ ಅಲೆಕ್ಸ್ ಸೆಬಾಸ್ಟಿಯನ್, ಕೆಯುಪಿಎಯ ಅಭಿಜಿತ್ ಕುಮಾರ್ ಭಾಗವಹಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಚೆನ್ನೈನ ಹೈನಾಸ್ ಏರ್ಬೋರ್ನ್ ವನ್ ತಂಡವು ಆಲ್ ಇಂಡಿಯಾ ಅಲ್ಟಿಮೇಟ್ ಬೀಚ್ ನ್ಯಾಷನಲ್ಸ್ನ ಮುಕ್ತ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. </p>.<p>ಇಂಡಿಯಾ ಅಲ್ಟಿಮೇಟ್ ಸಹಯೋಗದಲ್ಲಿ ಕರ್ನಾಟಕ ಅಲ್ಟಿಮೇಟ್ ಪ್ಲೇಯರ್ಸ್ ಅಸೋಸಿಯೇಷನ್ (ಕೆಯುಪಿಎ) ನಗರದ ತಣ್ಣೀರುಬಾವಿಯ ಬ್ಲೂ ಬೇ ಇಕೊ ಬೀಚ್ನಲ್ಲಿ ಆಯೋಜಿಸಿದ್ದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಹೈನಾಸ್ ಏರ್ಬೋರ್ನ್ ವನ್ ತಂಡವು 11–10ರಿಂದ ಚೆನ್ನೈನ ಸ್ಟಾಲ್ 7 (2) ತಂಡವನ್ನು ಭಾನುವಾರ ಮಣಿಸಿತು. </p>.<p>ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಪುಯಲ್ 4 ತಂಡವು 12–9ರಿಂದ ಕಲ್ಲಹನ್ಸ್ ಓಪನ್ಸ್ 3 ತಂಡವನ್ನು ಸೋಲಿಸಿತು. </p>.<p>ಚೆನ್ನೈನ ವಲೈ ತಂಡ ಅಜೇಯರಾಗಿ ಉಳಿದು ಇಂಡಿಯಾ ಅಲ್ಟಿಮೇಟ್ ಬೀಚ್ ನ್ಯಾಷನಲ್ಸ್ನ ಮಹಿಳೆಯರ ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿತು. ಫೈನಲ್ನಲ್ಲಿ ಈ ತಂಡವು ಬೆಂಗಳೂರಿನ ಏರ್ ಬೆಂಡರ್ಸ್ ಒನ್ ತಂಡವನ್ನು 9–8ರಿಂದ ಸೋಲಿಸಿತು. </p>.<p>ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಥಳೀಯ ಉದ್ಯಮಿ ಯತೀಶ್ ಬೈಕಂಪಾಡಿ, ಯಂಗ್ ಇಂಡಿಯನ್ಸ್ನ ಶರಣ್ ಶೆಟ್ಟಿ, ಇಂಡಿಯಾ ಅಲ್ಟಿಮೇನ್ನ ಅಲೆಕ್ಸ್ ಸೆಬಾಸ್ಟಿಯನ್, ಕೆಯುಪಿಎಯ ಅಭಿಜಿತ್ ಕುಮಾರ್ ಭಾಗವಹಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>