ಸುಬ್ರಹ್ಮಣ್ಯ ರೋಡ್-ನೆಟ್ಟಣ ರೈಲು ನಿಲ್ದಾಣ -ಸಕಲೇಶಪುರ ನಡುವಿನ ಎಡಕುಮೇರಿ ಸಮೀಪದ ಸಿರಿಬಾಗಿಲಿನ ಕೊಡಗರವಳ್ಳಿ ಎಂಬಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಗುಡ್ಡ ದ ಭಾಗ, ಮಣ್ಣಿನೊಂದಿಗೆ ಭಾರಿ ಗಾತ್ರದ ಬಂಡೆ ಹಳಿ ಮೇಲೆ ಕುಸಿದು ಬಿದ್ದಿದೆ.ಇದರಿಂದಾಗಿ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ನೆಟ್ಟಣ ರೈಲು ನಿಲ್ದಾಣದಿಂದ ರೈಲು ದೂರ ಸುಮಾರು 65 ಕಿ.ಮೀ ವ್ಯಾಪ್ತಿಯಲ್ಲಿ ಕುಸಿತ ಸಂಭವಿಸಿದೆ. ರೈಲು ಪ್ರಯಾಣಿಕರು ಸಂಕಷ್ಠ ಎದುರಿಸುವಂತಾಯಿತು.