ನವಯುಗ್ ಕಂಪನಿಗೆ ಈಗಾಗಲೇ ಅನೇಕ ಎಚ್ಚರಿಕೆಗಳನ್ನು ನೀಡಲಾಗಿದೆ. ಅದಾಗ್ಯೂ ಕೊನೆಯ ಎಚ್ಚರಿಕೆಯನ್ನು ಈಗ ನೀಡಲಾಗುತ್ತಿದ್ದು, ಅದಕ್ಕೂ ಸ್ಪಂದಿಸದೇ ಇದ್ದರೆ, ಕಾನೂನು ಹೋರಾಟವನ್ನೂ ನಡೆಸುತ್ತೇವೆ ಎಂದು ತಿಳಿಸಿದರು. ತಲಪಾಡಿ ಟೋಲ್ ಬಳಿ ಅವೈಜ್ಞಾನಿಕ ಚರಂಡಿ, ಕಸದ ರಾಶಿ, ರಿಲಯನ್ಸ್ ಪೆಟ್ರೋಲ್ ಬಂಕ್ ಸಮೀಪದ ಅಂಡರ್ಪಾಸ್ ಬಳಿ ನೀರು ಹರಿಯಲು ತಡೆಯಾಗಿರುವುದು, ಬೀರಿ ಜಂಕ್ಷನ್, ತೊಕ್ಕೊಟ್ಟು ಫ್ಲೈಓವರ್ ಪಕ್ಕದ ಚರಂಡಿ, ಜಪ್ಪಿನಮೊಗರು, ಪಂಪ್ವೆಲ್, ನಂತೂರು, ಕೊಟ್ಟಾರ, ಕೂಳೂರು, ಬೈಕಂಪಾಡಿ ಹಾಗೂ ಸುರತ್ಕಲ್ನಲ್ಲಿ ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆಯನ್ನು ನಳಿನ್ಕುಮಾರ್ ಪರಿಶೀಲಿಸಿದರು.