‘ಬುಧವಾರ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಕರೆ ಮಾಡಿ ಪ್ರಾದೇಶಿಕ ಆಯುಕ್ತನೆಂದು ಪರಿಚಯಿಸಿಕೊಂಡು, ಕಾರು ಪಡೆದು ವಿರಾಜಪೇಟೆಯ ರೆಸಾರ್ಟ್ಯಲ್ಲಿ ತಂಗಿದ್ದ. ಡಿವೈಎಸ್ಪಿ ನಾಗಪ್ಪ ಅವರಿಗೆ ಕರೆ ಮಾಡಿ, ಪ್ರವಾಸಕ್ಕೆ ಬಂದಿದ್ದು ಭದ್ರತೆಗಾಗಿ ಗನ್ಮ್ಯಾನ್ ಒದಗಿಸುವಂತೆ ಬೇಡಿಕೆಯಿಟ್ಟಿದ್ದ. ಅಲ್ಲದೇ, ಜಿಲ್ಲಾಧಿಕಾರಿ ಸಹಾಯಕರಾದ ಶ್ರೀವಿದ್ಯಾ ಅವರಿಗೂ ಕರೆ ಮಾಡಿ, ಸರ್ಕಾರಿ ಸೌಲಭ್ಯ ಪಡೆಯಲು ಯತ್ನಿಸಿದ್ದ. ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ವಂಚನೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ.