ಕರ್ನಾಟಕ ಬ್ಯಾಂಕಿನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಬಾಲಚಂದ್ರ ವೈ.ವಿ, ‘ಮುಂದಿನ ದಶಕ ಮಾತ್ರವಲ್ಲ, ಮುಂದಿನ ಶತಮಾನವೇ ಭಾರತದ್ದು. ದಶಕದ ಹಿಂದೆ ಪದವೀಧರರು ಕೆಲಸಕ್ಕಾಗಿ ಹುಡುಕುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದ್ದು, ಹೆಚ್ಚು ಹೆಚ್ಚು ಯುವಜನರು ಉದ್ಯಮಿಗಳಾಗುವತ್ತ ಹೆಜ್ಜೆ ಇಡುತ್ತಿದ್ದಾರೆ. ಉದ್ಯಮಕ್ಕೆ ಸಾಲ ಪಡೆಯುವ ಅವಕಾಶಗಳೂ ಹೆಚ್ಚಾಗಿವೆ. ತಂತ್ರಜ್ಞಾನದ ಬೆಳವಣಿಗೆಗಳಿಂದಾಗಿ, ಸಾಲ ಮರುಪಾತಿಗೆ ಸಂಬಂಧಿಸಿದ ಹಿನ್ನೆಲೆ ಪರಿಶೀಲನೆಯೂ ಈಗ ಸುಲಭ. ಸೋತರೂ ಛಲಬಿಡದ, ಅದಮ್ಯ ಉತ್ಸಾಹವಿರುವ ಉದಯೋನ್ಮುಖ ಉದ್ಯಮಿಗಳಿಗೆ ಸಾಲ ನೀಡಲು ಬ್ಯಾಂಕ್ಗಳೂ ತುದಿಗಾಲಲ್ಲಿ ನಿಂತಿವೆ’ ಎಂದರು.