ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಯೋಗೇಶ್, ‘ನಾನು ಕೇಂದ್ರ ಸ್ಥಾನದಲ್ಲೇ ಇದ್ದೆ. ಆದರೆ, ಯಾರೋ ದುರುದ್ದೇಶದಿಂದ ದೂರು ನೀಡಿದ್ದಾರೆ. ಈ ಕುರಿತು ಹೆಚ್ಚುವರಿ ಜಿಲ್ಲಾಧಿಕಾರಿಯವರು ಕರೆ ಮಾಡಿದಾಗ ಉರ್ವದಲ್ಲೇ ಇದ್ದೆ. ನಾನು ಬಳಸುತ್ತಿರುವ ಸರ್ಕಾರಿ ವಾಹನ ಅಪಘಾತಕ್ಕೀಡಾಗಿ ಎದುರಿನ ನಂಬರ್ ಪ್ಲೇಟ್ಗೆ ಹಾನಿಯಾಗಿತ್ತು. ಅದರ ಚಿತ್ರವನ್ನು ದೂರಿನ ಜೊತೆ ನೀಡಿರಬಹುದು. ಈಗ ವಾಹನಕ್ಕೆ ಹೊಸ ನಂಬರ್ ಪ್ಲೇಟ್ ಅಳವಡಿಸಲಾಗಿದೆ’ ಎಂದರು.