ಶಿಶಿಲದಲ್ಲಿ ಜೈನ ಅರಸರ ಆಳ್ವಿಕೆ ಇದ್ದು ಅರಮನೆ, ಕೋಟೆ, ಕೊತ್ತಳದ ಕುರುಹುಗಳು ಪತ್ತೆಯಾಗಿವೆ ಎಂದು ಡಾ. ಎಸ್.ಡಿ. ಶೆಟ್ಟಿ ತಿಳಿಸಿದ್ದಾರೆ. 15ನೇ ಶತಮಾನಕ್ಕೂ ಮೊದಲೇ ಶಿಶಿಲದಲ್ಲಿ ನಿರ್ಮಾಣವಾಗಿದ್ದ 6 ರಿಂದ 8 ಬಸದಿಗಳ ಅವಶೇಷಗಳು ಪತ್ತೆಯಾಗಿವೆ. ಆದರೆ ಪ್ರಸ್ತುತ ಶಿಶಿಲದಲ್ಲಿ ಒಂದು ಕೂಡಾ ಜೈನರ ಮನೆ ಇಲ್ಲ. ಬಸದಿಯು ₹28 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿದ್ದು, ಮಾರ್ಚ್ 8 ರಿಂದ 12ರ ವರೆಗೆ ಪಂಚಲ್ಯಾಣ ಮಹೋತ್ಸವ ನಡೆಯಲಿದೆ.