<p><strong>ಮಂಗಳೂರು</strong>: ‘ಮ್ಯೂಚುವಲ್ ಫಂಡ್ಗಳಲ್ಲಿ ಜಾಸ್ತಿ ಪ್ರತಿಫಲ ಪಡೆಯಬೇಕಾದರೆ ದೀರ್ಘಾವಧಿ ಹೂಡಿಕೆಯನ್ನು ಆಯ್ಕೆ ಮಾಡುವುದು ಉತ್ತಮ. ದೇಶದಲ್ಲಿರುವ ಸದ್ಯದ ಪರಿಸ್ಥಿತಿಯಲ್ಲಿ ಈಕ್ವಿಟಿ ಮೇಲೆ ದೀರ್ಘಾವಧಿ ಹೂಡಿಕೆ ಮಾಡುವುದು ಉತ್ತಮ’ ಎಂದು ಹಣಕಾಸು ಯೋಜನೆಯ ಸಲಹೆಗಾರ ಕೆ.ಆರ್.ವಿಶ್ವನಾಥ ಕೊನಾರೆ ಸಲಹೆ ನೀಡಿದರು.</p>.<p>‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’, ಭಾರತೀಯ ಮ್ಯೂಚುವಲ್ ಫಂಡ್ಸ್ ಅಸೋಸಿಯೇಷನ್ (ಎಎಂಎಫ್ಐ) ಸಹಯೋಗದಲ್ಲಿ ಇಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಹೂಡಿಕೆಗಳು ಮತ್ತು ನೀವು’ ಹೂಡಿಕೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮ್ಯೂಚುವಲ್ ಫಂಡ್ಗಳ ಮೇಲಿನ ಹೂಡಿಕೆಯ ಮಹತ್ವವನ್ನು ವಿವರಿಸಿದರು.</p>.<p>ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಲು ಇರುವ ಹೇರಳ ಆಯ್ಕೆಗಳು, ಹೂಡಿಕೆಯ ವೇಳೆ ಪ್ರದರ್ಶಿಸುವ ಜಾಣ್ಮೆ ಹಾಗೂ ಮಾರುಕಟ್ಟೆಯ ಬೆಳವಣಿಗೆಗಳ ಕುರಿತ ತಿಳಿವಳಿಕೆಯು ಹೇಗೆ ಹೆಚ್ಚಿನ ವರಮಾನ ತಂದುಕೊಡಬಹುದು ಎಂಬುದನ್ನು ಅವರು ವಿಶ್ಲೇಷಿಸಿದರು.</p>.<p>‘ಯಾವ ಉದ್ದೇಶಕ್ಕೆ ಹೂಡಿಕೆ ಮಾಡುತ್ತಿದ್ದೇವೆ, ಯಾವಾಗ ಹೂಡಿಕೆ ಮಾಡುತ್ತಿದ್ದೇವೆ ಮತ್ತು ಇದಕ್ಕೆ ಯಾವ ವಿಧಾನವನ್ನು ಅನುಸರಿಸಬೇಕು ಎಂಬ ಬಗ್ಗೆ ಹೂಡಿಕೆದಾರರಿಗೆ ಖಚಿತತೆ ಇರಬೇಕು. ಹೂಡಿಕೆಯಲ್ಲಿ ಶಿಸ್ತು ಪಾಲಿಸಬೇಕು. ಹೂಡಿಕೆಯಿಂದ ನಿರೀಕ್ಷಿತ ಪ್ರತಿಫಲ ಪಡೆಯಲು ಇದು ಬಲುಮುಖ್ಯ’ ಎಂದರು.</p>.<p>‘ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವಾಗ ಬೇರೆ ಬೇರೆ ಅಸೆಟ್ ಕ್ಲಾಸ್ಗಳನ್ನು ಆಯ್ಕೆ ಮಾಡಿಕೊಳ್ಳುವುದು ಸುರಕ್ಷಿತ ವಿಧಾನ. ಹೂಡಿಕೆಗೆ ಪ್ರತಿಫಲ ಜಾಸ್ತಿ ಸಿಗಬೇಕಾದರೆ ಹೆಚ್ಚು ಅಪಾಯವಿರುವ ಫಂಡ್ಗಳಿಗೂ ದೀರ್ಘಾವಧಿ ಹೂಡಿಕೆ ಮಾಡಬಹುದು. ಭಾರತವು ₹ 338 ಲಕ್ಷ ಕೋಟಿ (4 ಟ್ರಿಲಿಯನ್ ಡಾಲರ್) ಆರ್ಥಿಕತೆಯಿಂದ ₹ 846 ಲಕ್ಷ ಕೋಟಿ ( 10 ಟ್ರಿಲಿಯನ್ ಡಾಲರ್) ಆರ್ಥಿಕತೆಯಾಗುವತ್ತ ಹೆಜ್ಜೆಹಾಕುತ್ತಿದ್ದು, ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಗಾತ್ರ ಹೆಚ್ಚಾಗಲಿದೆ. ಹಾಗಾಗಿ ಈಕ್ವಿಟಿ ಮೇಲಿನ ಹೂಡಿಕೆಯಿಂದ ಪ್ರತಿಫಲ ಪಡೆಯುವ ಅವಕಾಶಗಳು ಜಾಸ್ತಿ’ ಎಂದರು. </p>.<p>‘ಉಳಿತಾಯದ ಮೊತ್ತವನ್ನು ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಿದರೆ ಹಣದುಬ್ಬರ ಮೀರಿ ಲಾಭ ಗಳಿಸಬಹುದು. ಹೂಡಿಕೆಗೆ ನಿರ್ದಿಷ್ಟ ಯೋಜನೆಯನ್ನು ಆಯ್ಕೆ ಮಾಡುವ ಮುನ್ನ ಅದರಿಂದ ಎದುರಾಗಬಹುದಾದ ಅಪಾಯಗಳ ಬಗ್ಗೆಯೂ ತಿಳಿದುಕೊಳ್ಳಬೇಕು. ಇದು ನಷ್ಟ ಅನುಭವಿಸುವ ಸಾಧ್ಯತೆಯನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ. ರೆಗ್ಯುಲರ್ ಹೂಡಿಕೆ ( ತಜ್ಞರ ನೆರವಿನೊಂದಿಗೆ) ಹಾಗೂ ನೇರ ಹೂಡಿಕೆಯ ಆಯ್ಕೆಗಳಿವೆ. ಆರ್ಥಿಕ ಸಾಕ್ಷರತೆ ಇಲ್ಲದವರು ತಜ್ಞರ ನೆರವು ಪಡೆದು ಹೂಡಿಕೆ ಮಾಡುವುದು ಒಳ್ಳೆಯದು’ ಎಂದರು.</p>.<p>‘ಯಾವುದೇ ಸಮಯದಲ್ಲಿ ಬೇಕಾದರೂ ಹೂಡಿಕೆ ಆರಂಭಿಸಬಹುದು. ಕನಿಷ್ಠ ₹ 500ರಿಂದ ಗರಿಷ್ಠ ಎಷ್ಟು ಮೊತ್ತವನ್ನು ಬೇಕಾದರೂ ಹೂಡಿಕೆ ಮಾಡಬಹುದು. ಹೂಡಿಕೆಯ ಹಣವನ್ನು ಯಾವಾಗ ಬೇಕಾದರೂ ಹಿಂಪಡೆಯಬಹುದು. ಹೂಡಿಕೆಯಿಂದ ಬರುವ ₹ 1.5 ಲಕ್ಷದವರೆಗಿನ ಲಾಭಕ್ಕೆ ತೆರಿಗೆ ವಿನಾಯಿತಿ ಇದೆ. ಅದಕ್ಕಿಂತ ಹೆಚ್ಚು ಲಾಭ ಬಂದರೆ ದೀರ್ಘಾವಧಿ ಹೂಡಿಕೆಗೆ ಶೇ 12.5ರಷ್ಟು ಹಾಗೂ ಅಲ್ಪಾವಧಿ ಹೂಡಿಕೆಗೆ ಶೇ 20ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ’ ಎಂದು ಅವರು ವಿವರಿಸಿದರು.</p>.<p>‘ಯಾವತ್ತೂ ಒಂದೇ ಆದಾಯದ ಮೂಲವನ್ನು ನೆಚ್ಚಿಕೊಳ್ಳಬಾರದು. ಮತ್ತೊಂದು ಆದಾಯದ ಮೂಲವನ್ನು ಕಂಡುಕೊಳ್ಳಲು ನಮ್ಮ ಗಳಿಕೆಯ ಒಂದು ಭಾಗವನ್ನು ಹೂಡಿಕೆ ಮಾಡುವುದು ಸರಿಯಾದ ಮಾರ್ಗ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ‘ಮ್ಯೂಚುವಲ್ ಫಂಡ್ಗಳಲ್ಲಿ ಜಾಸ್ತಿ ಪ್ರತಿಫಲ ಪಡೆಯಬೇಕಾದರೆ ದೀರ್ಘಾವಧಿ ಹೂಡಿಕೆಯನ್ನು ಆಯ್ಕೆ ಮಾಡುವುದು ಉತ್ತಮ. ದೇಶದಲ್ಲಿರುವ ಸದ್ಯದ ಪರಿಸ್ಥಿತಿಯಲ್ಲಿ ಈಕ್ವಿಟಿ ಮೇಲೆ ದೀರ್ಘಾವಧಿ ಹೂಡಿಕೆ ಮಾಡುವುದು ಉತ್ತಮ’ ಎಂದು ಹಣಕಾಸು ಯೋಜನೆಯ ಸಲಹೆಗಾರ ಕೆ.ಆರ್.ವಿಶ್ವನಾಥ ಕೊನಾರೆ ಸಲಹೆ ನೀಡಿದರು.</p>.<p>‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’, ಭಾರತೀಯ ಮ್ಯೂಚುವಲ್ ಫಂಡ್ಸ್ ಅಸೋಸಿಯೇಷನ್ (ಎಎಂಎಫ್ಐ) ಸಹಯೋಗದಲ್ಲಿ ಇಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಹೂಡಿಕೆಗಳು ಮತ್ತು ನೀವು’ ಹೂಡಿಕೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮ್ಯೂಚುವಲ್ ಫಂಡ್ಗಳ ಮೇಲಿನ ಹೂಡಿಕೆಯ ಮಹತ್ವವನ್ನು ವಿವರಿಸಿದರು.</p>.<p>ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಲು ಇರುವ ಹೇರಳ ಆಯ್ಕೆಗಳು, ಹೂಡಿಕೆಯ ವೇಳೆ ಪ್ರದರ್ಶಿಸುವ ಜಾಣ್ಮೆ ಹಾಗೂ ಮಾರುಕಟ್ಟೆಯ ಬೆಳವಣಿಗೆಗಳ ಕುರಿತ ತಿಳಿವಳಿಕೆಯು ಹೇಗೆ ಹೆಚ್ಚಿನ ವರಮಾನ ತಂದುಕೊಡಬಹುದು ಎಂಬುದನ್ನು ಅವರು ವಿಶ್ಲೇಷಿಸಿದರು.</p>.<p>‘ಯಾವ ಉದ್ದೇಶಕ್ಕೆ ಹೂಡಿಕೆ ಮಾಡುತ್ತಿದ್ದೇವೆ, ಯಾವಾಗ ಹೂಡಿಕೆ ಮಾಡುತ್ತಿದ್ದೇವೆ ಮತ್ತು ಇದಕ್ಕೆ ಯಾವ ವಿಧಾನವನ್ನು ಅನುಸರಿಸಬೇಕು ಎಂಬ ಬಗ್ಗೆ ಹೂಡಿಕೆದಾರರಿಗೆ ಖಚಿತತೆ ಇರಬೇಕು. ಹೂಡಿಕೆಯಲ್ಲಿ ಶಿಸ್ತು ಪಾಲಿಸಬೇಕು. ಹೂಡಿಕೆಯಿಂದ ನಿರೀಕ್ಷಿತ ಪ್ರತಿಫಲ ಪಡೆಯಲು ಇದು ಬಲುಮುಖ್ಯ’ ಎಂದರು.</p>.<p>‘ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವಾಗ ಬೇರೆ ಬೇರೆ ಅಸೆಟ್ ಕ್ಲಾಸ್ಗಳನ್ನು ಆಯ್ಕೆ ಮಾಡಿಕೊಳ್ಳುವುದು ಸುರಕ್ಷಿತ ವಿಧಾನ. ಹೂಡಿಕೆಗೆ ಪ್ರತಿಫಲ ಜಾಸ್ತಿ ಸಿಗಬೇಕಾದರೆ ಹೆಚ್ಚು ಅಪಾಯವಿರುವ ಫಂಡ್ಗಳಿಗೂ ದೀರ್ಘಾವಧಿ ಹೂಡಿಕೆ ಮಾಡಬಹುದು. ಭಾರತವು ₹ 338 ಲಕ್ಷ ಕೋಟಿ (4 ಟ್ರಿಲಿಯನ್ ಡಾಲರ್) ಆರ್ಥಿಕತೆಯಿಂದ ₹ 846 ಲಕ್ಷ ಕೋಟಿ ( 10 ಟ್ರಿಲಿಯನ್ ಡಾಲರ್) ಆರ್ಥಿಕತೆಯಾಗುವತ್ತ ಹೆಜ್ಜೆಹಾಕುತ್ತಿದ್ದು, ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಗಾತ್ರ ಹೆಚ್ಚಾಗಲಿದೆ. ಹಾಗಾಗಿ ಈಕ್ವಿಟಿ ಮೇಲಿನ ಹೂಡಿಕೆಯಿಂದ ಪ್ರತಿಫಲ ಪಡೆಯುವ ಅವಕಾಶಗಳು ಜಾಸ್ತಿ’ ಎಂದರು. </p>.<p>‘ಉಳಿತಾಯದ ಮೊತ್ತವನ್ನು ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಿದರೆ ಹಣದುಬ್ಬರ ಮೀರಿ ಲಾಭ ಗಳಿಸಬಹುದು. ಹೂಡಿಕೆಗೆ ನಿರ್ದಿಷ್ಟ ಯೋಜನೆಯನ್ನು ಆಯ್ಕೆ ಮಾಡುವ ಮುನ್ನ ಅದರಿಂದ ಎದುರಾಗಬಹುದಾದ ಅಪಾಯಗಳ ಬಗ್ಗೆಯೂ ತಿಳಿದುಕೊಳ್ಳಬೇಕು. ಇದು ನಷ್ಟ ಅನುಭವಿಸುವ ಸಾಧ್ಯತೆಯನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ. ರೆಗ್ಯುಲರ್ ಹೂಡಿಕೆ ( ತಜ್ಞರ ನೆರವಿನೊಂದಿಗೆ) ಹಾಗೂ ನೇರ ಹೂಡಿಕೆಯ ಆಯ್ಕೆಗಳಿವೆ. ಆರ್ಥಿಕ ಸಾಕ್ಷರತೆ ಇಲ್ಲದವರು ತಜ್ಞರ ನೆರವು ಪಡೆದು ಹೂಡಿಕೆ ಮಾಡುವುದು ಒಳ್ಳೆಯದು’ ಎಂದರು.</p>.<p>‘ಯಾವುದೇ ಸಮಯದಲ್ಲಿ ಬೇಕಾದರೂ ಹೂಡಿಕೆ ಆರಂಭಿಸಬಹುದು. ಕನಿಷ್ಠ ₹ 500ರಿಂದ ಗರಿಷ್ಠ ಎಷ್ಟು ಮೊತ್ತವನ್ನು ಬೇಕಾದರೂ ಹೂಡಿಕೆ ಮಾಡಬಹುದು. ಹೂಡಿಕೆಯ ಹಣವನ್ನು ಯಾವಾಗ ಬೇಕಾದರೂ ಹಿಂಪಡೆಯಬಹುದು. ಹೂಡಿಕೆಯಿಂದ ಬರುವ ₹ 1.5 ಲಕ್ಷದವರೆಗಿನ ಲಾಭಕ್ಕೆ ತೆರಿಗೆ ವಿನಾಯಿತಿ ಇದೆ. ಅದಕ್ಕಿಂತ ಹೆಚ್ಚು ಲಾಭ ಬಂದರೆ ದೀರ್ಘಾವಧಿ ಹೂಡಿಕೆಗೆ ಶೇ 12.5ರಷ್ಟು ಹಾಗೂ ಅಲ್ಪಾವಧಿ ಹೂಡಿಕೆಗೆ ಶೇ 20ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ’ ಎಂದು ಅವರು ವಿವರಿಸಿದರು.</p>.<p>‘ಯಾವತ್ತೂ ಒಂದೇ ಆದಾಯದ ಮೂಲವನ್ನು ನೆಚ್ಚಿಕೊಳ್ಳಬಾರದು. ಮತ್ತೊಂದು ಆದಾಯದ ಮೂಲವನ್ನು ಕಂಡುಕೊಳ್ಳಲು ನಮ್ಮ ಗಳಿಕೆಯ ಒಂದು ಭಾಗವನ್ನು ಹೂಡಿಕೆ ಮಾಡುವುದು ಸರಿಯಾದ ಮಾರ್ಗ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>