ದೆಹಲಿಯ ಸೀಮಾ ಪಾಂಡೆ ಅವರು ಭೂದೃಶ್ಯಗಳನ್ನು ಅಮೂರ್ತ ಶೈಲಿಯಲ್ಲಿ ಮೂಡಿಸಿದ್ದರು. ಒಡಿಶಾದ ಕಲಾವಿದ ಬಲದೇವ ಮಹಾರಥಾ ಅವರು ಸಾಂಪ್ರದಾಯಿಕ ಪಟಚಿತ್ರ ಮುಖೇನ ದಿನದಿಂದ ದಿನಕ್ಕೆ ತನ್ನ ನೈಜ ಸೌಂದರ್ಯವನ್ನು ಕಳೆದುಕೊಳ್ಳುತ್ತಿರುವ ಪ್ರಕೃತಿ, ಗಗನಚುಂಬಿ ಕಟ್ಟಡಗಳ ನಡುವೆ ಮರೆಯಾಗುತ್ತಿರುವ ಮಾನವೀಯತೆಯನ್ನು ಬಿಂಬಿಸಿದ್ದರು. ಯುವತಿಯೋಬ್ಬಳ ಅರ್ಧ ದೇಹವನ್ನು ಆಧುನಿಕತೆಯ ಸ್ಪರ್ಶದೊಂದಿಗೆ ಮತ್ತರ್ಧ ಭಾಗವನ್ನು ಸಾಂಪ್ರದಾಯಿಕ ಸ್ಪರ್ಶದೊಂದಿಗೆ ಚಿತ್ರಿಸಿದ್ದರು. ಸಾಂಪ್ರದಾಯಿಕ ಶೈಲಿಯಲ್ಲಿ ಆಕೆ ನವಿಲಿನಂತೆ ನಲಿಯುತ್ತಿದ್ದರೆ, ಆಧುನಿಕತೆಯ ಭರಾಟೆಯಲ್ಲಿ ನಲುಗಿಹೋಗಿರುವುದನ್ನು ಅರ್ಥಪೂರ್ಣವಾಗಿ ದಾಟಿಸಿದ್ದರು. ಕಾಳಿದಾಸನ ಮೇಘ ಸಂದೇಶಗಳು ಚಿತ್ರ ರೂಪ ತಾಳಿದ್ದವು.