<p><strong>ಕಡಬ (ಉಪ್ಪಿನಂಗಡಿ):</strong> ಬಿಸಿಲಿನ ತಾಪಕ್ಕೆ ಕಡಬ ತಾಲ್ಲೂಕು ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕುಮಾರಧಾರಾ ಮತ್ತು ಗುಂಡ್ಯ ಹೊಳೆಯಲ್ಲಿ ನೀರಿನ ಒಳ ಹರಿವು ಕಡಿಮೆಯಾಗುತ್ತಿದ್ದು, ಕಡಬ ಪೇಟೆಗೆ ಹೊಂದಿಕೊಂಡಿರುವ ಹೊಸಕೆರೆ ಹಾಗೂ ಅಮೃತ ಸರೋವರದಲ್ಲಿ ನೀರು ಆವಿಯಾಗುತ್ತಿದೆ.</p>.<p>ನೂರಾರು ವರ್ಷಗಳ ಇತಿಹಾಸದ ಈ ಕೆರೆಗಳು ಸುತ್ತಮುತ್ತಲಿನ ನೂರಾರು ಎಕರೆ ಭೂಮಿಯ ಅಂತರ್ಜಜಲವನ್ನು ಕಾಯ್ದುಕೊಂಡು ಬರುತ್ತಿದ್ದವು. ಆದರೆ, ಈ ವರ್ಷ ಹೊಸಕೆರೆಯಲ್ಲಿ ನೀರು ಬತ್ತಿಹೋಗಿದೆ. ಇದೇ ಕೆರೆಯ ಇನ್ನೊಂದು ಮಗ್ಗಲಲ್ಲಿರುವ ಅಮೃತ ಸರೋವರದ ತಳವೂ ಕಾಣುತ್ತಿದೆ.</p>.<p>ತಾಲ್ಲೂಕಿನ ಕೆರೆಗಳಲ್ಲಿ ಅತಿ ದೊಡ್ಡ ಕೆರೆ ಇದಾಗಿದ್ದು, ಸುಮಾರು 100 ಮೀಟರ್ ಉದ್ದ ಹಾಗೂ 200 ಮೀಟರ್ ಅಗಲವಿದೆ. ಕುಟ್ರುಪ್ಪಾಡಿ ಗ್ರಾಮದ ಹಳೆ ಸ್ಟೇಷನ್ ಬಳಿ ಸುಮಾರು 7 ಎಕರೆಯಲ್ಲಿರುವ ಹೊಸಕೆರೆಯನ್ನು ಈ ಹಿಂದೆ ಜಿಲ್ಲಾ ಪಂಚಾಯಿತಿಯಿಂದ ಅಭಿವೃದ್ಧಿಪಡಿಸಲಾಗಿತ್ತು. ಅಲ್ಲಿಂದ ಇದುವರೆಗೆ ಸಮೃದ್ಧ ನೀರು ಸಂಗ್ರಹವಾಗುತ್ತಿತ್ತು.</p>.<p>ಪೊಟ್ಟುಕೆರೆ ಅಮೃತ ಸರೋವರ ಆಗಿದ್ದು: ಹೊಸಕೆರೆಗೆ ಹೊಂದಿಕೊಂಡಿರುವ ಅಮೃತ ಸರೋವರ ಕೆರೆಗೆ ಈ ಹಿಂದೆ ಪೊಟ್ಟುಕೆರೆ ಎಂದು ಹೆಸರಿತ್ತು. ಕಡಬ ಸಮೀಪದ ಹಳೆ ಸ್ಟೇಷನ್ನಲ್ಲಿರುವ ಪೊಟ್ಟುಕರೆಯನ್ನು ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ಅಭಿವೃದ್ಧಿಪಡಿಸಿ ಅಮೃತ ಸರೋವರ ಎಂದು ನಾಮಕರಣ ಮಾಡಲಾಗಿತ್ತು. 2023ರಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಯ ‘ನಮ್ಮೂರು ನಮ್ಮ ಕೆರೆ’ ಯೋಜನೆ ಯಡಿ ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ಪಾಲುದಾರಿಕೆಯಲ್ಲಿ ಸುಮಾರು ₹ 15 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಕೆರೆ ಅಭಿವೃದ್ಧಿಯ ಬಳಿಕ ಕೆರೆಯ ಕೆಳಗಿನ ಭಾಗ, ಕೆರೆ ಸುತ್ತ ಅಂತರ್ಜಲ ಹೆಚ್ಚಾಗಿತ್ತು.</p>.<p>ಮೀನುಗಳು ನಾಶವಾಗುತ್ತಿವೆ: ಕೆರೆಯಲ್ಲಿ ಹಲವು ಜಾತಿ ಮೀನುಗಳಿದ್ದು, ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ಅಧೀನದ ಈ ಕೆರೆಯಲ್ಲಿ ಪಿಲೋಸಿಯ ಜಾತಿಯ ಮೀನುಗಳನ್ನು ಪಂಚಾಯಿತಿ ವತಿಯಿಂದ ಸಾಕಾಣೆ ಮಾಡಲಾಗುತ್ತಿದೆ. ಈಚೆಗೆ ಸುಮಾರು 18 ಸಾವಿರ ಮೀನು ಮರಿಗಳನ್ನು ಕೆರೆಗೆ ಬಿಡಲಾಗಿತ್ತು. ಆದರೆ, ಕೆರೆಯಲ್ಲಿ ನೀರು ತಳಹಿಡಿದು ಕೆಲವು ಮೀನುಗಳು ಮೃತಪಟ್ಟಿವೆ. ಬದುಕಿರುವ ಮೀನುಗಳು ಪಕ್ಷಿಗಳಿಗೆ ಆಹಾರವಾಗುತ್ತಿವೆ.</p>.<p>ಅಭಿವೃದ್ಧಿ ಪಡಿಸುವ ಬಗ್ಗೆ ಸರ್ಕಾರಕ್ಕೆ ಪತ್ರ: ಪೊಟ್ಟುಕೆರೆ, ಹೊಸಕೆರೆಯಲ್ಲಿ ನೀರು ಬರಿದಾಗುದೆ. ಹೂಳೆತ್ತಿ ಅಭಿವೃದ್ಧಿಪಡಿಸುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಭವಿಷ್ಯದಲ್ಲಿ ಕೆರೆಯಲ್ಲಿ ನೀರನ್ನು ಉಳಿಸಿಕೊಳ್ಳುವ ಸಂಬಂಧ ಹೆಚ್ಚುವರಿ ನೀರು ಹರಿದು ಹೋಗುವ ಘಟಕವನ್ನು ಎತ್ತರಿಸಲಾಗುತ್ತಿದೆ ಎಂದು ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ಪಿಡಿಒ ಆನಂದ ಗೌಡ ಪಿಜಕಳ ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260510-29-2039351951</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡಬ (ಉಪ್ಪಿನಂಗಡಿ):</strong> ಬಿಸಿಲಿನ ತಾಪಕ್ಕೆ ಕಡಬ ತಾಲ್ಲೂಕು ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕುಮಾರಧಾರಾ ಮತ್ತು ಗುಂಡ್ಯ ಹೊಳೆಯಲ್ಲಿ ನೀರಿನ ಒಳ ಹರಿವು ಕಡಿಮೆಯಾಗುತ್ತಿದ್ದು, ಕಡಬ ಪೇಟೆಗೆ ಹೊಂದಿಕೊಂಡಿರುವ ಹೊಸಕೆರೆ ಹಾಗೂ ಅಮೃತ ಸರೋವರದಲ್ಲಿ ನೀರು ಆವಿಯಾಗುತ್ತಿದೆ.</p>.<p>ನೂರಾರು ವರ್ಷಗಳ ಇತಿಹಾಸದ ಈ ಕೆರೆಗಳು ಸುತ್ತಮುತ್ತಲಿನ ನೂರಾರು ಎಕರೆ ಭೂಮಿಯ ಅಂತರ್ಜಜಲವನ್ನು ಕಾಯ್ದುಕೊಂಡು ಬರುತ್ತಿದ್ದವು. ಆದರೆ, ಈ ವರ್ಷ ಹೊಸಕೆರೆಯಲ್ಲಿ ನೀರು ಬತ್ತಿಹೋಗಿದೆ. ಇದೇ ಕೆರೆಯ ಇನ್ನೊಂದು ಮಗ್ಗಲಲ್ಲಿರುವ ಅಮೃತ ಸರೋವರದ ತಳವೂ ಕಾಣುತ್ತಿದೆ.</p>.<p>ತಾಲ್ಲೂಕಿನ ಕೆರೆಗಳಲ್ಲಿ ಅತಿ ದೊಡ್ಡ ಕೆರೆ ಇದಾಗಿದ್ದು, ಸುಮಾರು 100 ಮೀಟರ್ ಉದ್ದ ಹಾಗೂ 200 ಮೀಟರ್ ಅಗಲವಿದೆ. ಕುಟ್ರುಪ್ಪಾಡಿ ಗ್ರಾಮದ ಹಳೆ ಸ್ಟೇಷನ್ ಬಳಿ ಸುಮಾರು 7 ಎಕರೆಯಲ್ಲಿರುವ ಹೊಸಕೆರೆಯನ್ನು ಈ ಹಿಂದೆ ಜಿಲ್ಲಾ ಪಂಚಾಯಿತಿಯಿಂದ ಅಭಿವೃದ್ಧಿಪಡಿಸಲಾಗಿತ್ತು. ಅಲ್ಲಿಂದ ಇದುವರೆಗೆ ಸಮೃದ್ಧ ನೀರು ಸಂಗ್ರಹವಾಗುತ್ತಿತ್ತು.</p>.<p>ಪೊಟ್ಟುಕೆರೆ ಅಮೃತ ಸರೋವರ ಆಗಿದ್ದು: ಹೊಸಕೆರೆಗೆ ಹೊಂದಿಕೊಂಡಿರುವ ಅಮೃತ ಸರೋವರ ಕೆರೆಗೆ ಈ ಹಿಂದೆ ಪೊಟ್ಟುಕೆರೆ ಎಂದು ಹೆಸರಿತ್ತು. ಕಡಬ ಸಮೀಪದ ಹಳೆ ಸ್ಟೇಷನ್ನಲ್ಲಿರುವ ಪೊಟ್ಟುಕರೆಯನ್ನು ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ಅಭಿವೃದ್ಧಿಪಡಿಸಿ ಅಮೃತ ಸರೋವರ ಎಂದು ನಾಮಕರಣ ಮಾಡಲಾಗಿತ್ತು. 2023ರಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಯ ‘ನಮ್ಮೂರು ನಮ್ಮ ಕೆರೆ’ ಯೋಜನೆ ಯಡಿ ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ಪಾಲುದಾರಿಕೆಯಲ್ಲಿ ಸುಮಾರು ₹ 15 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಕೆರೆ ಅಭಿವೃದ್ಧಿಯ ಬಳಿಕ ಕೆರೆಯ ಕೆಳಗಿನ ಭಾಗ, ಕೆರೆ ಸುತ್ತ ಅಂತರ್ಜಲ ಹೆಚ್ಚಾಗಿತ್ತು.</p>.<p>ಮೀನುಗಳು ನಾಶವಾಗುತ್ತಿವೆ: ಕೆರೆಯಲ್ಲಿ ಹಲವು ಜಾತಿ ಮೀನುಗಳಿದ್ದು, ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ಅಧೀನದ ಈ ಕೆರೆಯಲ್ಲಿ ಪಿಲೋಸಿಯ ಜಾತಿಯ ಮೀನುಗಳನ್ನು ಪಂಚಾಯಿತಿ ವತಿಯಿಂದ ಸಾಕಾಣೆ ಮಾಡಲಾಗುತ್ತಿದೆ. ಈಚೆಗೆ ಸುಮಾರು 18 ಸಾವಿರ ಮೀನು ಮರಿಗಳನ್ನು ಕೆರೆಗೆ ಬಿಡಲಾಗಿತ್ತು. ಆದರೆ, ಕೆರೆಯಲ್ಲಿ ನೀರು ತಳಹಿಡಿದು ಕೆಲವು ಮೀನುಗಳು ಮೃತಪಟ್ಟಿವೆ. ಬದುಕಿರುವ ಮೀನುಗಳು ಪಕ್ಷಿಗಳಿಗೆ ಆಹಾರವಾಗುತ್ತಿವೆ.</p>.<p>ಅಭಿವೃದ್ಧಿ ಪಡಿಸುವ ಬಗ್ಗೆ ಸರ್ಕಾರಕ್ಕೆ ಪತ್ರ: ಪೊಟ್ಟುಕೆರೆ, ಹೊಸಕೆರೆಯಲ್ಲಿ ನೀರು ಬರಿದಾಗುದೆ. ಹೂಳೆತ್ತಿ ಅಭಿವೃದ್ಧಿಪಡಿಸುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಭವಿಷ್ಯದಲ್ಲಿ ಕೆರೆಯಲ್ಲಿ ನೀರನ್ನು ಉಳಿಸಿಕೊಳ್ಳುವ ಸಂಬಂಧ ಹೆಚ್ಚುವರಿ ನೀರು ಹರಿದು ಹೋಗುವ ಘಟಕವನ್ನು ಎತ್ತರಿಸಲಾಗುತ್ತಿದೆ ಎಂದು ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ಪಿಡಿಒ ಆನಂದ ಗೌಡ ಪಿಜಕಳ ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260510-29-2039351951</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>