ಮಂಗಳೂರು: ಮಂಗಳೂರು ಕಂಬಳ ಸಮಿತಿಯಿಂದ ನಗರದ ಬಂಗ್ರಕುಳೂರಿನಲ್ಲಿ ಆಯೋಜಿಸಿದ್ದ 5ನೇ ವರ್ಷದ ಹೊನಲು-ಬೆಳಕಿನ ರಾಮ-ಲಕ್ಷ್ಮಣ ಜೋಡುಕರೆ ಕಂಬಳವು ಭಾನುವಾರ ಮಧ್ಯಾಹ್ನ ಸಂಪನ್ನವಾಯಿತು. ಕಂಬಳದಲ್ಲಿ ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ ಅವರ ಕೋಣಗಳು ಹಗ್ಗ ಹಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿತು.
ಮಿಜಾರು ಪ್ರಸಾದ್ನಿಲಯ ಶಕ್ತಿಪ್ರಸಾದ್ ಶೆಟ್ಟಿಯವರ ಕೋಣಗಳನ್ನು ಯಡ್ತರೆಗುತ್ತು ಭರತ್ ಶೆಟ್ಟಿ ಅವರ ಹೆಸರಿನಲ್ಲಿ ಓಡಿಸಲಾಗಿತ್ತು. ಹಗ್ಗ ಹರಿಯ ವಿಭಾಗದಲ್ಲಿ ‘ಎ’ ಮತ್ತು ‘ಬಿ’ ಹೆಸರಿನಲ್ಲಿ ಎರಡು ಜತೆ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸಿತ್ತು. ‘ಬಿ’ ಹೆಸರಿನ ಕೋಣಗಳು ಪ್ರಥಮ ಬಹುಮಾನ ಪಡೆದಿವೆ. ಈ ಕೋಣಗಳನ್ನು ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಓಡಿಸಿದರು. ದ್ವಿತೀಯ ಬಹುಮಾನವನ್ನು ಪದವು ಕಾನಡ್ಕ ಫ್ಲೇವಿ ಡಿಸೋಜ ‘ಎ’ ಕೋಣಗಳು ಪಡೆದಿವೆ. ಅದನ್ನು ಓಡಿಸಿದವರು ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ.
ಕಂಬಳ ಫಲಿತಾಂಶ: ಕೂಟದಲ್ಲಿ ಒಟ್ಟು 142 ಜೊತೆ ಕೋಣಗಳು ಭಾಗವಹಿಸಿದ್ದವು.