ಮಂಗಳೂರು: ‘ಸ್ವಾತಂತ್ರ್ಯ ಚಳವಳಿಯಲ್ಲಿ ತೆರೆಮರೆಯಲ್ಲಿ ಕೆಲಸ ಮಾಡಿದ ಸಾವಿರಾರು ಹೆಸರುಗಳು ವಿಸ್ಮೃತಿಗೆ ಒಳಗಾಗಿವೆ. ಪ್ರಾದೇಶಿಕತೆ, ಭಾಷೆ, ಜಾತೀಯತೆಗಳ ಅಸಮಾನತೆಯಿಂದಾಗಿ ಮಹಿಳೆಯರ ಬರಹಗಳನ್ನು ವಿಸ್ಮೃತಿಗೆ ತಳ್ಳುವ ಪರಿಸ್ಥಿತಿ ಇದೆ’ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವೆ ಡಾ.ಆರ್.ಸುನಂದಮ್ಮ ಹೇಳಿದರು.