ಕಲ್ಚರಲ್ ಥಿಯೇಟರ್, ಆವರಣಗೋಡೆ, ಪುರಾತನ ತುಳು ಸಂಸ್ಕೃತಿಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯ, ರಂಗಮಂದಿರ, ತುಳು ಸಾಹಿತಿಗಳಿಗೆ ಪ್ರೋತ್ಸಾಹ, ಪುಸ್ತಕ ಪ್ರಕಟಣೆ, ತುಳು ಸಾಹಿತ್ಯ ಗೋಷ್ಠಿಗಳು, ತುಳು ಭಾಷಾ ಕಲಿಕಾ ಶಿಬಿರ, ಕಂಬಳ, ಗ್ರಾಮೋತ್ಸವಗಳಿಗೆ ಪ್ರೋತ್ಸಾಹ, ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ತುಳು ಲಿಪಿ ಕಲಿಕಾ ಶಿಬಿರಗಳು, ತುಳು ಹಬ್ಬ ಹರಿದಿನಗಳ ಆಚರಣೆಗೆ ಯೋಜನೆ ಮುಂಗಡಪತ್ರದಲ್ಲಿ ಸಿದ್ಧಪಡಿಸಲಾಗಿದೆ. ಇವುಗಳಬಗ್ಗೆ ಚರ್ಚೆ ನಡೆಸಿ ಅಂಗೀಕಾರ ಮತ್ತು ಅನುದಾನಕ್ಕಾಗಿ
ಸರಕಾರಕ್ಕೆ ಸಲ್ಲಿಸಲು ತೀರ್ಮಾನಿಸಲಾಗಿದೆ. ಡಿಸೆಂಬರ್ ತಿಂಗಳ ಕೊನೆಯಲ್ಲಿ ಬೆಳ್ಳೂರು ಪ್ರದೇಶದಲ್ಲಿ ದಿ.ವೆಂಕಟರಾಜ ಪುಣಿಂಚಿತ್ತಾಯ ಅವರ ಸಂಸ್ಮರಣೆ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ.