ಅಷ್ಟಬಂಧಕ್ಕಿಂತ ಮುಂಚಿತವಾಗಿ ಗರ್ಭಗುಡಿಯ ಮೇಲ್ಚಾವಣಿ ದುರಸ್ತಿ, ತಾಮ್ರದ ಹೊದಿಕೆ, ನೂತನ ಧ್ವಜಸ್ತಂಭ ಸ್ಥಾಪನೆ ನಡೆಯಲಿದೆ. ಎರಡು ವರ್ಷಗಳಿಂದ ಧ್ವಜಸ್ತಂಭವನ್ನು ತೈಲಭಾಂಡದಲ್ಲಿಟ್ಟು ತೆಗೆಯಲಾಗಿದೆ. ಹೊರಗಡೆಯಲ್ಲಿ ರಕ್ತೇಶ್ವರಿ ಸನ್ನಿಧಿಯ ಜೀರ್ಣೋದ್ಧಾರ, ಒಳಗಿನ ಶಾಸ್ತಾರ, ನಾಗಸನ್ನಿಧಿ ಜೀರ್ಣೋದ್ಧಾರ, ಗಣಪತಿ ದೇವರ ಎದುರಿನ ದಳಿಯ ದುರಸ್ತಿ ಕಾರ್ಯಗಳು ಅಷ್ಟಬಂಧದ ಒಳಗೆ ನಡೆಯಲಿವೆ.