‘ಆಸ್ತಿ ನೋಂದಣಿ ಸಂದರ್ಭ ಶೀರ್ಷಿಕೆಯ ಪರಿಶೀಲನೆ, ಪರಿಗಣನೆಯ ಪಾವತಿ, ನೋಂದಣಿ ಶುಲ್ಕ ಪಾವತಿ, ಮುದ್ರಾಂಕ ಶುಲ್ಕ ಪಾವತಿ, ಸಂಬಂಧಪಟ್ಟವರ ಸಹಿ ಮೊದಲಾದ ಹಲವಾರು ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ. ಆದರೆ, ಹೊಸ ತಂತ್ರಾಂಶ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಯದು. ನಮ್ಮ ಹಲವು ಪ್ರಶ್ನೆಗಳಿಗೆ ಉತ್ತರವೇ ಸಿಕ್ಕಿಲ್ಲ. ಪ್ರಾತ್ಯಕ್ಷಿಕೆ ವೇಳೆ ಬೆಂಗಳೂರಿನಲ್ಲಿ ಕುಳಿತ ಮಹಿಳೆಯೊಬ್ಬರು ಅಸ್ಪಷ್ಟ ಉತ್ತರ ನೀಡಿದ್ದರು’ ಎಂದು ಅವರು ದೂರಿದರು.
‘ಕಾವೇರಿ 2.0 ಜಾರಿಗೊಂಡರೆ, ಅದಕ್ಕೆ ಹೊಂದಿಕೊಳ್ಳುವುದಕ್ಕೆ ಜನರಿಗೆ ಕಷ್ಟವಾಗಲಿದೆ. ಈಗಿರುವ ಕಾವೇರಿ 1.0 ವ್ಯವಸ್ಥೆಯಲ್ಲೇ ಪಾವತಿಸಿದ ಹಣ ಹಿಂದಕ್ಕೆ ಪಡೆಯಲು ವರ್ಷಗಟ್ಟಲೆ ಕಾಯುವ ಪರಿಸ್ಥಿತಿ ಇದೆ. ಆನ್ಲೈನ್ನಲ್ಲಿ ತಪ್ಪಾಗಿ ಪಾವತಿಸಿದ ಮೊತ್ತದ ಮರುಪಾವತಿ ವಿಧಾನವೂ ಸ್ಪಷ್ಟವಾಗಿಲ್ಲ’ ಎಂದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಎಣ್ಮಕಜೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಈಶ್ವರ್ ಕೊಟ್ಟಾರಿ, ವಿಕ್ರಮ್ ಪಡುವೆಟ್ನಾಯ ಸುದ್ದಿಗೋಷ್ಠಿಯಲ್ಲಿದ್ದರು.