<p><strong>ಉಳ್ಳಾಲ:</strong> ಕೊಂಡಾಣ ಪಿಲಿ ಚಾಮುಂಡಿ, ಬಂಟ ಮತ್ತು ಮುಂಡತ್ತಾಯ ದೈವಸ್ಥಾನದಲ್ಲಿ ವಾರ್ಷಿಕ ಕೊಂಡಾಣ ಬಂಡಿ ಉತ್ಸವವು ಮೇ 23 ಮತ್ತು 24ರಂದು ನಡೆಯಲಿದೆ.</p>.<p>ತುಳುನಾಡಿನ ಕಾರ್ಣಿಕ ಕ್ಷೇತ್ರಗಳಲ್ಲಿ ವಿಶೇಷ ಸ್ಥಾನ ಹೊಂದಿರುವ ಈ ಜಾತ್ರೆಯು, ದೈವಗಳ ನೇಮೋತ್ಸವದೊಂದಿಗೆ ತುಳುನಾಡಿನ ಕೊನೆಯ ಜಾತ್ರೆ ಎಂದು ಹೇಳಲಾಗುತ್ತದೆ. ಕ್ಷೇತ್ರದ ಕಾರ್ಣಿಕ ದೈವಗಳಾದ ಪಿಲಿ ಚಾಮುಂಡಿ, ಬಂಟ ಹಾಗೂ ವೈದ್ಯನಾಥ ದೈವಗಳ ನೇಮೋತ್ಸವಗಳು ನಡೆಯಲಿದ್ದು, ಜಾತ್ರೋತ್ಸವಕ್ಕೆ ಅಧಿಕೃತ ತೆರೆ ಬೀಳಲಿದೆ.</p>.<p>ಜಾತ್ರೆಯ ಬಳಿಕ ತುಳುನಾಡಿನ ಹಲವು ಭಾಗಗಳಲ್ಲಿ ದೈವಸ್ಥಾನಗಳ ಜಾತ್ರೋತ್ಸವಗಳು ನಡೆಯುವುದಿಲ್ಲ ಎನ್ನುವುದು ಪಾರಂಪರಿಕ ನಂಬಿಕೆ. ಜಿಲ್ಲೆಯ ವಿವಿಧ ಭಾಗಗಳ ಜೊತೆಗೆ ಹೊರ ಜಿಲ್ಲೆಗಳ ಭಕ್ತರು ದೈವದ ನೇಮೋತ್ಸವವನ್ನು ಕಣ್ತುಂಬಿಕೊಳ್ಳಲಿದ್ದಾರೆ. ಕೊಂಡಾಣ ಜಾತ್ರೆಯಲ್ಲಿ ಮಲ್ಲಿಗೆ ಹೂವಿಗೆ ವಿಶೇಷ ಸ್ಥಾನಮಾನವಿದೆ. ಸಂಕಷ್ಟ ನಿವಾರಣೆ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಮಲ್ಲಿಗೆ ಹೂವನ್ನು ಹರಕೆಯಾಗಿ ಸಮರ್ಪಿಸುವ ಸಂಪ್ರದಾಯ ತಲೆ ತಲಾಂತರಗಳಿಂದ ನಡೆದುಕೊಂಡು ಬಂದಿದೆ. ಜಾತ್ರೆಯ ಎರಡನೇ ದಿನ ನಡೆಯುವ ಬಂಟ ದೈವದ ನೇಮೋತ್ಸವದ ವೇಳೆ ರಸ್ತೆಯುದ್ದಕ್ಕೂ ಮಲ್ಲಿಗೆ ಹೂವಿನ ವ್ಯಾಪಾರ ಜೋರಾಗಿರುತ್ತದೆ. ಚಿನ್ನದ ನಾಣ್ಯ, ಚಿನ್ನದ ವಿಮಾನ, ಬೆಳ್ಳಿಯ ಕೋಳಿ, ಬೆಳ್ಳಿಯ ನಾಲಗೆ ಸೇರಿದಂತೆ ವಿವಿಧ ಹರಕೆಗಳೊಂದಿಗೆ ಮಲ್ಲಿಗೆಯ ಮಹಾಪೂರವೇ ದೈವಕ್ಕೆ ಹರಿದು ಬರುತ್ತದೆ.</p>.<p>ಕಾರ್ಣಿಕ ಕ್ಷೇತ್ರದ ವಿಶೇಷತೆ ಮಾತು ಬಾರದ ಮಕ್ಕಳಿಗೆ ಇಲ್ಲಿ ಹರಕೆ ಹೇಳಿದ ಬಳಿಕ ಮಾತು ಬಂದ ಹಲವು ಘಟನೆಗಳು ನಡೆದಿವೆ ಎಂಬ ನಂಬಿಕೆ ಭಕ್ತರಲ್ಲಿ ಇದೆ. ಕ್ಷೇತ್ರದ ಒಳಗೆ ವಿಡಿಯೊ ಹಾಗೂ ಚಿತ್ರ ತೆಗೆಯಲು ನಿರ್ಬಂಧವಿದ್ದು, ಪಾರಂಪರಿಕ ವಿಧಿವಿಧಾನಗಳ ಮೂಲಕ ನೇಮೋತ್ಸವ ನಡೆಯುತ್ತದೆ. ಜಾತ್ರೆಯ ಎರಡನೇ ದಿನ ರಾತ್ರಿ ಪಿಲಿ ಚಾಮುಂಡಿ ದೈವದ ಬಂಡಿ ಉತ್ಸವ ನಡೆಯಲಿದೆ. ಪ್ರಾತಃಕಾಲದಲ್ಲಿ ಕಂಚಿಲ ಸೇವೆಯೂ ನಡೆಯಲಿದೆ. ಮಂಗಳೂರಿನಿಂದ ಸುಮಾರು 16 ಕಿ.ಮೀ ದೂರದಲ್ಲಿರುವ ಕೊಂಡಾಣಕ್ಕೆ ರಾಷ್ಟ್ರೀಯ ಹೆದ್ದಾರಿ 66 ಮೂಲಕ ತೊಕ್ಕೊಟ್ಟು – ಬೀರಿ ಜಂಕ್ಷನ್ ಮಾರ್ಗವಾಗಿ ತಲುಪಬಹುದು. ಬೀರಿ ಜಂಕ್ಷನ್ನಿಂದ ಎಡಕ್ಕೆ ತಿರುಗಿ ಸುಮಾರು 3 ಕಿ.ಮೀ ಸಾಗಿದರೆ ಕ್ಷೇತ್ರ ತಲುಪಬಹುದು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260521-29-2010364436</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಳ್ಳಾಲ:</strong> ಕೊಂಡಾಣ ಪಿಲಿ ಚಾಮುಂಡಿ, ಬಂಟ ಮತ್ತು ಮುಂಡತ್ತಾಯ ದೈವಸ್ಥಾನದಲ್ಲಿ ವಾರ್ಷಿಕ ಕೊಂಡಾಣ ಬಂಡಿ ಉತ್ಸವವು ಮೇ 23 ಮತ್ತು 24ರಂದು ನಡೆಯಲಿದೆ.</p>.<p>ತುಳುನಾಡಿನ ಕಾರ್ಣಿಕ ಕ್ಷೇತ್ರಗಳಲ್ಲಿ ವಿಶೇಷ ಸ್ಥಾನ ಹೊಂದಿರುವ ಈ ಜಾತ್ರೆಯು, ದೈವಗಳ ನೇಮೋತ್ಸವದೊಂದಿಗೆ ತುಳುನಾಡಿನ ಕೊನೆಯ ಜಾತ್ರೆ ಎಂದು ಹೇಳಲಾಗುತ್ತದೆ. ಕ್ಷೇತ್ರದ ಕಾರ್ಣಿಕ ದೈವಗಳಾದ ಪಿಲಿ ಚಾಮುಂಡಿ, ಬಂಟ ಹಾಗೂ ವೈದ್ಯನಾಥ ದೈವಗಳ ನೇಮೋತ್ಸವಗಳು ನಡೆಯಲಿದ್ದು, ಜಾತ್ರೋತ್ಸವಕ್ಕೆ ಅಧಿಕೃತ ತೆರೆ ಬೀಳಲಿದೆ.</p>.<p>ಜಾತ್ರೆಯ ಬಳಿಕ ತುಳುನಾಡಿನ ಹಲವು ಭಾಗಗಳಲ್ಲಿ ದೈವಸ್ಥಾನಗಳ ಜಾತ್ರೋತ್ಸವಗಳು ನಡೆಯುವುದಿಲ್ಲ ಎನ್ನುವುದು ಪಾರಂಪರಿಕ ನಂಬಿಕೆ. ಜಿಲ್ಲೆಯ ವಿವಿಧ ಭಾಗಗಳ ಜೊತೆಗೆ ಹೊರ ಜಿಲ್ಲೆಗಳ ಭಕ್ತರು ದೈವದ ನೇಮೋತ್ಸವವನ್ನು ಕಣ್ತುಂಬಿಕೊಳ್ಳಲಿದ್ದಾರೆ. ಕೊಂಡಾಣ ಜಾತ್ರೆಯಲ್ಲಿ ಮಲ್ಲಿಗೆ ಹೂವಿಗೆ ವಿಶೇಷ ಸ್ಥಾನಮಾನವಿದೆ. ಸಂಕಷ್ಟ ನಿವಾರಣೆ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಮಲ್ಲಿಗೆ ಹೂವನ್ನು ಹರಕೆಯಾಗಿ ಸಮರ್ಪಿಸುವ ಸಂಪ್ರದಾಯ ತಲೆ ತಲಾಂತರಗಳಿಂದ ನಡೆದುಕೊಂಡು ಬಂದಿದೆ. ಜಾತ್ರೆಯ ಎರಡನೇ ದಿನ ನಡೆಯುವ ಬಂಟ ದೈವದ ನೇಮೋತ್ಸವದ ವೇಳೆ ರಸ್ತೆಯುದ್ದಕ್ಕೂ ಮಲ್ಲಿಗೆ ಹೂವಿನ ವ್ಯಾಪಾರ ಜೋರಾಗಿರುತ್ತದೆ. ಚಿನ್ನದ ನಾಣ್ಯ, ಚಿನ್ನದ ವಿಮಾನ, ಬೆಳ್ಳಿಯ ಕೋಳಿ, ಬೆಳ್ಳಿಯ ನಾಲಗೆ ಸೇರಿದಂತೆ ವಿವಿಧ ಹರಕೆಗಳೊಂದಿಗೆ ಮಲ್ಲಿಗೆಯ ಮಹಾಪೂರವೇ ದೈವಕ್ಕೆ ಹರಿದು ಬರುತ್ತದೆ.</p>.<p>ಕಾರ್ಣಿಕ ಕ್ಷೇತ್ರದ ವಿಶೇಷತೆ ಮಾತು ಬಾರದ ಮಕ್ಕಳಿಗೆ ಇಲ್ಲಿ ಹರಕೆ ಹೇಳಿದ ಬಳಿಕ ಮಾತು ಬಂದ ಹಲವು ಘಟನೆಗಳು ನಡೆದಿವೆ ಎಂಬ ನಂಬಿಕೆ ಭಕ್ತರಲ್ಲಿ ಇದೆ. ಕ್ಷೇತ್ರದ ಒಳಗೆ ವಿಡಿಯೊ ಹಾಗೂ ಚಿತ್ರ ತೆಗೆಯಲು ನಿರ್ಬಂಧವಿದ್ದು, ಪಾರಂಪರಿಕ ವಿಧಿವಿಧಾನಗಳ ಮೂಲಕ ನೇಮೋತ್ಸವ ನಡೆಯುತ್ತದೆ. ಜಾತ್ರೆಯ ಎರಡನೇ ದಿನ ರಾತ್ರಿ ಪಿಲಿ ಚಾಮುಂಡಿ ದೈವದ ಬಂಡಿ ಉತ್ಸವ ನಡೆಯಲಿದೆ. ಪ್ರಾತಃಕಾಲದಲ್ಲಿ ಕಂಚಿಲ ಸೇವೆಯೂ ನಡೆಯಲಿದೆ. ಮಂಗಳೂರಿನಿಂದ ಸುಮಾರು 16 ಕಿ.ಮೀ ದೂರದಲ್ಲಿರುವ ಕೊಂಡಾಣಕ್ಕೆ ರಾಷ್ಟ್ರೀಯ ಹೆದ್ದಾರಿ 66 ಮೂಲಕ ತೊಕ್ಕೊಟ್ಟು – ಬೀರಿ ಜಂಕ್ಷನ್ ಮಾರ್ಗವಾಗಿ ತಲುಪಬಹುದು. ಬೀರಿ ಜಂಕ್ಷನ್ನಿಂದ ಎಡಕ್ಕೆ ತಿರುಗಿ ಸುಮಾರು 3 ಕಿ.ಮೀ ಸಾಗಿದರೆ ಕ್ಷೇತ್ರ ತಲುಪಬಹುದು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260521-29-2010364436</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>