ಸೋಮವಾರ ದೇವರ ಉತ್ಸವ ಶ್ರದ್ಧಾ ಭಕ್ತಿಯಿಂದ ನಡೆಯಿತು. ಪೂಜೆಯ ನಂತರ ದೇವರ ಹೊರಾಂಗಣ ಉತ್ಸವಗಳು ಆರಂಭವಾದವು. ಬಂಡಿ ಉತ್ಸವ, ಪಲ್ಲಕ್ಕಿ ಉತ್ಸವ ನೆರವೇರಿತು. ಮಯೂರ ವಾಹನೋತ್ಸವ ನಡೆಯಿತು. ಸವಾರಿ ಮಂಟಪದಲ್ಲಿರುವ ಸವಾರಿ ಕಟ್ಟೆಯಲ್ಲಿ ದೇವರ ಕಟ್ಟೆಪೂಜೆ ನೆರವೇರಿತು. ಜಾತ್ರಾ ಮಹೋತ್ಸವದ ಭದ್ರತೆಯ ಅಂಗವಾಗಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಾದ್ಯಂತ ಸಿಸಿ ಟಿವಿ ಕಣ್ಗಾವಲು ಹಾಕಲಾಗಿದೆ. ಹೆಲಿಪ್ಯಾಡ್, ಪದವಿಪೂರ್ವ ಕಾಲೇಜಿನ ಮೇಲಿನ ಕ್ರೀಡಾಂಗಣ, ಪೋಲೀಸ್ ಕವಾಯತು ಮೈದಾನ, ಕೆ.ಎಸ್.ಎಸ್.ಕಾಲೇಜು ಕ್ರೀಡಾಂಗಣ, ವಲ್ಲೀಶ ಸಭಾಭವನದ ಬಳಿಯ ನಿಲ್ದಾಣ, ಬಿಲದ್ವಾರ, ಸವಾರಿ ಮಂಟಪ, ಹನುಮಂತ ಗುಡಿ, ಹಳೆಯ ಅರಣ್ಯಾಧಿಕಾರಿ ಕಚೇರಿ, ಪ್ರಾಥಮಿಕ ಶಾಲೆ ಸಮೀಪದ ಬಸ್ ನಿಲ್ದಾಣ ಸೇರಿದಂತೆ ವಾಹನ ನಿಲುಗಡೆ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ.