ಬಂಟ್ವಾಳ: ಪಂಜಿಕಲ್ಲು ಗ್ರಾಮದ ಮುಕ್ಕುಡದಲ್ಲಿ ಭೂಕುಸಿತ ಉಂಟಾಗಿ ಕೇರಳ ಮೂಲದ ಬಿಜು ಎಂಬ ಕಾರ್ಮಿಕ ಸಾವಿಗೀಡಾಗಿದ್ದಾರೆ. ಸಂತೋಷ್, ಜಾನಿ ಮತ್ತು ಬಾಬು ಗಂಭೀರ ಗಾಯಗೊಂಡಿದ್ದಾರೆ.
ಹೆನ್ರಿ ಕಾರ್ಲೊ ಎಂಬವರ ರಬ್ಬರ್ ತೋಟದಲ್ಲಿ ಕೆಲಸಕ್ಕೆ ಅಖಿಲ್ ಎಂಬ ಗುತ್ತಿಗೆದಾರರು ನಾಲ್ವರನ್ನು ಕರೆತಂದಿದ್ದರು. ಅವರೆಲ್ಲರೂ ಮನೆಯ ಸಮೀಪದ ಶೆಡ್ನಲ್ಲಿ ವಾಸವಾಗಿದ್ದರು. ಇಲ್ಲಿ, ಎರಡು ದಿನಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದು ಅದನ್ನು ಜೆಸಿಬಿ ಮೂಲಕ ತೆರವುಗೊಳಿಸಿದ್ದರು ಎನ್ನಲಾಗಿದೆ.
ಬುಧವಾರ ಕೆಲಸ ಮುಗಿಸಿ ಶೆಡ್ನಲ್ಲಿದ್ದ ವೇಳೆ ಭೂಕುಸಿತ ಉಂಟಾಗಿದೆ. ಬಂಟ್ವಾಳ ಗ್ರಾಮಾಂತರ ಠಾಣೆಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದವರು ಸ್ಥಳೀಯರ ಸಹಾಯದೊಂದಿಗೆ ರಕ್ಷಣಾ ಕಾರ್ಯ ನಡೆಸಿದ್ದಾರೆ.