<p><strong>ಕಾಸರಗೋಡು:</strong> ಜಿಲ್ಲೆಯ ಮುಳ್ಳೇರಿಯ ಸಹಿತ ವಿವಿಧೆಡೆ ಚಿರತೆಯ ಹಾವಳಿಯಿಂದಾಗಿ ಸ್ಥಳೀಯರು ಭಯಗೊಂಡಿದ್ದಾರೆ.</p>.<p>ಪೂವಡ್ಕದಲ್ಲಿ ಶನಿವಾರ ನಾಯಿಯೊಂದನ್ನು ಚಿರತೆ ಕೊಂದು ಹಾಕಿದೆ. ತೀಯಡ್ಕ ತಂಗತ್ತಡ್ಕ ಎಂಬಲ್ಲಿನ ಕುಂಞಂಬು ಎಂಬುವರ ಹಟ್ಟಿಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದೆ. ಹಸುವಿನ ಕೂಗು ಕೇಳಿ ಮನೆಮಂದಿ ಓಡಿಬಂದಾಗ ಚಿರತೆ ಪರಾರಿಯಾಗಿದೆ.</p>.<p>ಇರಿಯಣ್ಣಿ ಮುಂಡಕ್ಕಾಡು ಎಂಬಲ್ಲಿ ಕಾಡುಕೋಣವೊಂದನ್ನು ಚಿರತೆ ಬೇಟೆಯಾಡಿರುವುದಾಗಿ ಸಾರ್ವಜನಿಕರು ತಿಳಿಸಿದ್ದಾರೆ.</p>.<h2>ನದಿಯಲ್ಲಿ ಶವ ಪತ್ತೆ</h2>.<p>ಕಾಸರಗೋಡು: ನೀಲೇಶ್ವರ ಪೇರೋಲ್ ಪೋಡಾತುರ್ತಿ ನದಿಯಲ್ಲಿ ಸ್ಥಳೀಯ ಪುಳ್ಕೂರು ಎಂಬಲ್ಲಿನ ನಿವಾಸಿ ಕುಂಞಿಕಣ್ಣನ್ (72) ಎಂಬುವರ ಶವ ಪತ್ತೆಯಾಗಿದೆ. ನೀಲೇಶ್ವರ ಪೊಲೀಸರು ಮಹಜರು ನಡೆಸಿದರು.</p>.<h2>ಅಪಘಾತ: ಸಾವು</h2>.<p>ಕಾಸರಗೋಡು: ಕೊಲ್ಲಿರಾಷ್ಟ್ರದ ಅಜ್ಮಾನ್ ಎಂಬಲ್ಲಿ ನಡೆದ ವಾಹನ ಅಪಘಾತದಲ್ಲಿ ಮೋನಚ್ಚ ನಿವಾಸಿ ಭೀಮ್ ಕಕ್ಕಾಣನ್ (45) ಎಂಬುವರು ಬಲಿಯಾಗಿದ್ದಾರೆ. ಊರಿಗೆ ಬಂದಿದ್ದ ಅವರು 2 ತಿಂಗಳ ಹಿಂದೆ ವಾಪಸಾಗಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ.</p>.<h2>ಯೂತ್ ಲೀಗ್ ಮುತ್ತಿಗೆ</h2>.<p>ಕಾಸರಗೋಡು: ಪೆರಿಯ ಕಲ್ಯೋಟ್ ಜೋಡಿಕೊಲೆಗೆ ಸಂಬಂಧಿಸಿ ಸಜೆಗೊಳಗಾದ ಆರೋಪಿ, ಕಾಞಂಗಾಡ್ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಕೆ.ಮಣಿಕಂಠನ್ ಅವರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಂತೆ ಆಗ್ರಹಿಸಿ ಯೂತ್ ಲೀಗ್ ವತಿಯಿಂದ ಬ್ಲಾಕ್ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಲಾಯಿತು.</p>.<p>ಕಚೇರಿ ಬಳಿ ಪೊಲೀಸರು ತಡೆದಾಗ ಕೊಂಚ ಹೊತ್ತು ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಈ ಸಂಬಂಧ 20 ಮಂದಿ ಕಾರ್ಯಕರ್ತರ ವಿರುದ್ಧ ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಸರಗೋಡು:</strong> ಜಿಲ್ಲೆಯ ಮುಳ್ಳೇರಿಯ ಸಹಿತ ವಿವಿಧೆಡೆ ಚಿರತೆಯ ಹಾವಳಿಯಿಂದಾಗಿ ಸ್ಥಳೀಯರು ಭಯಗೊಂಡಿದ್ದಾರೆ.</p>.<p>ಪೂವಡ್ಕದಲ್ಲಿ ಶನಿವಾರ ನಾಯಿಯೊಂದನ್ನು ಚಿರತೆ ಕೊಂದು ಹಾಕಿದೆ. ತೀಯಡ್ಕ ತಂಗತ್ತಡ್ಕ ಎಂಬಲ್ಲಿನ ಕುಂಞಂಬು ಎಂಬುವರ ಹಟ್ಟಿಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದೆ. ಹಸುವಿನ ಕೂಗು ಕೇಳಿ ಮನೆಮಂದಿ ಓಡಿಬಂದಾಗ ಚಿರತೆ ಪರಾರಿಯಾಗಿದೆ.</p>.<p>ಇರಿಯಣ್ಣಿ ಮುಂಡಕ್ಕಾಡು ಎಂಬಲ್ಲಿ ಕಾಡುಕೋಣವೊಂದನ್ನು ಚಿರತೆ ಬೇಟೆಯಾಡಿರುವುದಾಗಿ ಸಾರ್ವಜನಿಕರು ತಿಳಿಸಿದ್ದಾರೆ.</p>.<h2>ನದಿಯಲ್ಲಿ ಶವ ಪತ್ತೆ</h2>.<p>ಕಾಸರಗೋಡು: ನೀಲೇಶ್ವರ ಪೇರೋಲ್ ಪೋಡಾತುರ್ತಿ ನದಿಯಲ್ಲಿ ಸ್ಥಳೀಯ ಪುಳ್ಕೂರು ಎಂಬಲ್ಲಿನ ನಿವಾಸಿ ಕುಂಞಿಕಣ್ಣನ್ (72) ಎಂಬುವರ ಶವ ಪತ್ತೆಯಾಗಿದೆ. ನೀಲೇಶ್ವರ ಪೊಲೀಸರು ಮಹಜರು ನಡೆಸಿದರು.</p>.<h2>ಅಪಘಾತ: ಸಾವು</h2>.<p>ಕಾಸರಗೋಡು: ಕೊಲ್ಲಿರಾಷ್ಟ್ರದ ಅಜ್ಮಾನ್ ಎಂಬಲ್ಲಿ ನಡೆದ ವಾಹನ ಅಪಘಾತದಲ್ಲಿ ಮೋನಚ್ಚ ನಿವಾಸಿ ಭೀಮ್ ಕಕ್ಕಾಣನ್ (45) ಎಂಬುವರು ಬಲಿಯಾಗಿದ್ದಾರೆ. ಊರಿಗೆ ಬಂದಿದ್ದ ಅವರು 2 ತಿಂಗಳ ಹಿಂದೆ ವಾಪಸಾಗಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ.</p>.<h2>ಯೂತ್ ಲೀಗ್ ಮುತ್ತಿಗೆ</h2>.<p>ಕಾಸರಗೋಡು: ಪೆರಿಯ ಕಲ್ಯೋಟ್ ಜೋಡಿಕೊಲೆಗೆ ಸಂಬಂಧಿಸಿ ಸಜೆಗೊಳಗಾದ ಆರೋಪಿ, ಕಾಞಂಗಾಡ್ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಕೆ.ಮಣಿಕಂಠನ್ ಅವರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಂತೆ ಆಗ್ರಹಿಸಿ ಯೂತ್ ಲೀಗ್ ವತಿಯಿಂದ ಬ್ಲಾಕ್ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಲಾಯಿತು.</p>.<p>ಕಚೇರಿ ಬಳಿ ಪೊಲೀಸರು ತಡೆದಾಗ ಕೊಂಚ ಹೊತ್ತು ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಈ ಸಂಬಂಧ 20 ಮಂದಿ ಕಾರ್ಯಕರ್ತರ ವಿರುದ್ಧ ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>