ಗಂಡ ಹೆಂಡತಿ ಮಧ್ಯೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದ್ದು ಗುರುವಾರ ಸಂಜೆ ಕೆಲಸ ಮುಗಿಸಿಕೊಂಡು ಬಂದ ಲಕ್ಷ್ಮಿ, ಮಕ್ಕಳು ಕಾಣದಿದ್ದಾಗ ಹುಡುಕಿದ್ದು ಆಗ ಬಾವಿಯಲ್ಲಿ ಮುಳುಗಿ ಏಳುತ್ತಿದ್ದುದು ಕಂಡು ಚೀರಾಡಿದ್ದಾರೆ. ತಕ್ಷಣ ಅಲ್ಲಿಗೆ ಬಂದ ಹಿತೇಶ್ ಪತ್ನಿಯನ್ನು ಬಾವಿಗೆ ತಳ್ಳಿ ತಾನೂ ಜಿಗಿದಿದ್ದಾನೆ. ಅಗ್ನಿಶಾಮಕ ದಳದವರ ನೆರವಿನೊಂದಿಗೆ ಸ್ಥಳೀಯರು ಬಾವಿಗೆ ಇಳಿದು ಎಲ್ಲರನ್ನು ಮೇಲೆತ್ತಿದ್ದಾರೆ. ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮಕ್ಕಳು ಮೃತಪಟ್ಟಿವೆ. ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.