ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳಾ ಬ್ಯಾಡ್ಮಿಂಟನ್ ಸಂಸ್ಥೆಗೆ ಸುಪ್ರೀತ್ ಅಧ್ಯಕ್ಷ

Last Updated 4 ಅಕ್ಟೋಬರ್ 2022, 6:10 IST
ಅಕ್ಷರ ಗಾತ್ರ

ಮಂಗಳೂರು: ಅತ್ತಾವರದ ಮಂಗಳಾ ಬ್ಯಾಡ್ಮಿಂಟನ್ ಸಂಸ್ಥೆಯ ಅಧ್ಯಕ್ಷರಾಗಿ ಸುಪ್ರೀತ್ ಆಳ್ವ ಆಯ್ಕೆಯಾಗಿದ್ದಾರೆ. ಅಶೋಕ್ ಕುಮಾರ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ವಾರ್ಷಿಕ ಸಭೆಯಲ್ಲಿ ಹೊಸ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಮೊಹಮ್ಮದ್ ಹುಸೇನ್‌ ಮತ್ತು ಸೈಮನ್ ಲೋಬೊ, ಕಾರ್ಯದರ್ಶಿಯಾಗಿ ದೀಪಕ್ ಕುಮಾರ್ ಆಯ್ಕೆಯಾದರು. ಶರತ್ ಕುಮಾರ್ (ಜೊತೆ ಕಾರ್ಯದರ್ಶಿ), ಲಕ್ಷ್ಮಿ ಸುವರ್ಣ (ಕೋಶಾಧಿಕಾರಿ), ಟೆರೆನ್ಸ್ ಅಜಯ್ (ಕ್ರೀಡಾ ಸಮಿತಿಯ ಮೇಲ್ವಿಚಾರಕ), ಸಂತೋಷ್ ಕುಮಾರ್ ಶೆಟ್ಟಿ (ಅಭಿವೃದ್ಧಿ ಸಮಿತಿ ಮೇಲ್ವಿಚಾರಕ), ಸಿ.ಎಸ್.ಭಂಡಾರಿ (ಸಂಘಟನಾ ಕಾರ್ಯದರ್ಶಿ), ಅಬ್ದುಲ್ ಖಾದರ್ ನಿಯಾಜ್, ಅಶೋಕ್ ಕುಮಾರ್ ಹೆಗ್ಡೆ, ರಿಯಾಜ್ ಹಸನ್‌, ಅನಿಲ್ ರಾವ್ ಬಿ.ಎಸ್ ಮತ್ತು ದೇವದಾಸ್ ಆರ್ಕೋಟ್ (ಕಾರ್ಯಕಾರಿ ಸಮಿತಿ ಸದಸ್ಯರು) ಆಯ್ಕೆಯಾದರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT