<p><strong>ಮಂಗಳೂರು:</strong> ‘ತುಳುನಾಡಿನ ಮೂಲ ಸಂಸ್ಕೃತಿಯಲ್ಲೇ ಸೌಹಾರ್ದ ಅಡಕವಾಗಿದೆ. ಈ ನೆಲದ್ದೇ ಆದ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರಜ್ಞಾಪೂರ್ವಕವಾಗಿ ಹಮ್ಮಿಕೊಂಡು ಸೌಹಾರ್ದವನ್ನು ಇಲ್ಲಿ ಮರುಸ್ಥಾಪಿಸಬಹುದು. ಇದಕ್ಕಾಗಿ ವೈಚಾರಿಕ ಮನಸ್ಸುಗಳನ್ನು ಕಟ್ಟುವ ಕಾರ್ಯ ಸಂಘಟಿತವಾಗಿ ನಡೆಯಬೇಕು’ ಎಂದು ಜಾನಪದ ವಿದ್ವಾಂಸ ಗಣನಾಥ ಎಕ್ಕಾರು ಹೇಳಿದರು.</p>.<p>ಶ್ರೀನಿವಾಸ್ ಬಜಾಲ್ ಹುತಾತ್ಮ ದಿನದ ಅಂಗವಾಗಿ ಡಿವೈಎಫ್ಐ ಇಲ್ಲಿ ಮಂಗಳವಾರ ಏರ್ಪಡಿಸಿದ್ದ ‘ತುಳುನಾಡಿನ ಸೌಹಾರ್ದ ಪರಂಪರೆಗೆ ಕೋಮುವಾದದ ಸವಾಲು’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>‘ಈ ನೆಲದ್ದಲ್ಲದ ವೈದಿಕತೆ ತುಳುವರ ಆಚರಣೆಗಳಲ್ಲಿ ನುಸುಳಿದ್ದು, ವಿದ್ಯಾರ್ಥಿ, ಕಾರ್ಮಿಕ ಹಾಗೂ ಎಡಪಂಥೀಯ ಚಳವಳಿಗಳ ಅವಸಾನ, ಧಾರ್ಮಿಕ ಕೇಂದ್ರಗಳಲ್ಲಿ ರಾಜಕೀಯ ಬೆರೆತದ್ದು ಇಲ್ಲಿನ ಸೌಹಾರ್ದ ಪರಂಪರೆಯ ಅವಸಾನಕ್ಕೆ ಕಾರಣಗಳು‘ ಎಂದು ಅವರು ವಿಶ್ಲೇಷಿಸಿದರು.</p>.<p>‘ಬೇರೆ ಧರ್ಮವನ್ನು ಒಪ್ಪಿಕೊಂಡೂ ತಮ್ಮ ಧರ್ಮವನ್ನು ಪಾಲಿಸುವ ಪರಿಪಾಟ ತುಳುನಾಡಿನದು. ದೈವಾರಾಧನೆಯಲ್ಲಿ ಮುಸ್ಲಿಮರಿಗೆ ಗೌರವ ಸಲ್ಲಿಸುವ, ದೈವಗಳು ಮಸೀದಿಗೆ ಭೇಟಿ ನೀಡುವ ಸಂಪ್ರದಾಯಗಳು ಇಲ್ಲಿವೆ’ ಎಂದರು. </p>.<p>ಪತ್ರಕರ್ತ ನವೀನ್ ಸೂರಿಂಜೆ, ‘ಕರಾವಳಿಯಲ್ಲಿ ದ್ವೇಷದ ಮಾತುಗಳಿಗೆ ಸಂಬಂಧಿಸಿದ 39 ಪ್ರಕರಣಗಳಲ್ಲಿ ಆರೋಪಿಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಅವುಗಳನ್ನು ತೆರವುಗೊಳಿಸಲು ಪೊಲೀಸ್ ಇಲಾಖೆ ಕ್ರಮವಹಿಸಿಲ್ಲ. ದ್ವೇಷ ಬಾಷಣ ಮಾಡಿದಕ್ಕೆ 2 ವರ್ಷ ಜೈಲು ಶಿಕ್ಷೆಯಾಗಿ ಉತ್ತರ ಪ್ರದೇಶದ ಶಾಸಕರೊಬ್ಬರು ತಮ್ಮ ಶಾಸಕತ್ವ ಕಳೆದುಕೊಂಡರು. ಇಲ್ಲಿನ ಶಾಸಕರಿಗೂ ಅದೇರೀತಿ ಶಿಕ್ಷೆಯಾದರೆ ಕರಾವಳಿಯಲ್ಲೂ ಕೋಮುವಾದ ಕಡಿಮೆಯಾಗಬಹುದು’ ಎಂದರು. </p>.<p>ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ‘ಕರಾವಳಿಯಲ್ಲಿ ಕೋಮುವಾದವನ್ನು ಪೋಷಿಸುತ್ತಿರುವುದು ಶಿಕ್ಷಣ ಮಾಫಿಯಾ. ತಮಗೆ ಅಗತ್ಯಬಿದ್ದಾಗ ಜಗಳ ಮಾಡಿಸುವ, ನಷ್ಟವಾಗುತ್ತದೆ ಎಂದಾದರೆ ಜಗಳ ನಿಲ್ಲಿಸುವ ಕಲೆ ಅವರಿಗೆ ತಿಳಿದಿದೆ. ಇಲ್ಲಿ ನಡೆಯುತ್ತಿರುವುದು ಹಿಂದೂ–ಮುಸ್ಲಿಂ ಸಂಘರ್ಷವಲ್ಲ. ಜಾತ್ಯತೀತ ಹಾಗೂ ಕೋಮುವಾದದ ಸಂಘರ್ಷವಿದು. ಈ ಸ್ಪಷ್ಟತೆ ಇಲ್ಲದೇ ಇಲ್ಲಿ ಸೌಹಾರ್ದ ಮರುಸ್ಥಾಪನೆಯ ಆಶಯ ಈಡೇರದು’ ಎಂದರು.</p>.<p>ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ.ಇಮ್ತಿಯಾಜ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.</p>.<p>Cut-off box - </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ‘ತುಳುನಾಡಿನ ಮೂಲ ಸಂಸ್ಕೃತಿಯಲ್ಲೇ ಸೌಹಾರ್ದ ಅಡಕವಾಗಿದೆ. ಈ ನೆಲದ್ದೇ ಆದ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರಜ್ಞಾಪೂರ್ವಕವಾಗಿ ಹಮ್ಮಿಕೊಂಡು ಸೌಹಾರ್ದವನ್ನು ಇಲ್ಲಿ ಮರುಸ್ಥಾಪಿಸಬಹುದು. ಇದಕ್ಕಾಗಿ ವೈಚಾರಿಕ ಮನಸ್ಸುಗಳನ್ನು ಕಟ್ಟುವ ಕಾರ್ಯ ಸಂಘಟಿತವಾಗಿ ನಡೆಯಬೇಕು’ ಎಂದು ಜಾನಪದ ವಿದ್ವಾಂಸ ಗಣನಾಥ ಎಕ್ಕಾರು ಹೇಳಿದರು.</p>.<p>ಶ್ರೀನಿವಾಸ್ ಬಜಾಲ್ ಹುತಾತ್ಮ ದಿನದ ಅಂಗವಾಗಿ ಡಿವೈಎಫ್ಐ ಇಲ್ಲಿ ಮಂಗಳವಾರ ಏರ್ಪಡಿಸಿದ್ದ ‘ತುಳುನಾಡಿನ ಸೌಹಾರ್ದ ಪರಂಪರೆಗೆ ಕೋಮುವಾದದ ಸವಾಲು’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>‘ಈ ನೆಲದ್ದಲ್ಲದ ವೈದಿಕತೆ ತುಳುವರ ಆಚರಣೆಗಳಲ್ಲಿ ನುಸುಳಿದ್ದು, ವಿದ್ಯಾರ್ಥಿ, ಕಾರ್ಮಿಕ ಹಾಗೂ ಎಡಪಂಥೀಯ ಚಳವಳಿಗಳ ಅವಸಾನ, ಧಾರ್ಮಿಕ ಕೇಂದ್ರಗಳಲ್ಲಿ ರಾಜಕೀಯ ಬೆರೆತದ್ದು ಇಲ್ಲಿನ ಸೌಹಾರ್ದ ಪರಂಪರೆಯ ಅವಸಾನಕ್ಕೆ ಕಾರಣಗಳು‘ ಎಂದು ಅವರು ವಿಶ್ಲೇಷಿಸಿದರು.</p>.<p>‘ಬೇರೆ ಧರ್ಮವನ್ನು ಒಪ್ಪಿಕೊಂಡೂ ತಮ್ಮ ಧರ್ಮವನ್ನು ಪಾಲಿಸುವ ಪರಿಪಾಟ ತುಳುನಾಡಿನದು. ದೈವಾರಾಧನೆಯಲ್ಲಿ ಮುಸ್ಲಿಮರಿಗೆ ಗೌರವ ಸಲ್ಲಿಸುವ, ದೈವಗಳು ಮಸೀದಿಗೆ ಭೇಟಿ ನೀಡುವ ಸಂಪ್ರದಾಯಗಳು ಇಲ್ಲಿವೆ’ ಎಂದರು. </p>.<p>ಪತ್ರಕರ್ತ ನವೀನ್ ಸೂರಿಂಜೆ, ‘ಕರಾವಳಿಯಲ್ಲಿ ದ್ವೇಷದ ಮಾತುಗಳಿಗೆ ಸಂಬಂಧಿಸಿದ 39 ಪ್ರಕರಣಗಳಲ್ಲಿ ಆರೋಪಿಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಅವುಗಳನ್ನು ತೆರವುಗೊಳಿಸಲು ಪೊಲೀಸ್ ಇಲಾಖೆ ಕ್ರಮವಹಿಸಿಲ್ಲ. ದ್ವೇಷ ಬಾಷಣ ಮಾಡಿದಕ್ಕೆ 2 ವರ್ಷ ಜೈಲು ಶಿಕ್ಷೆಯಾಗಿ ಉತ್ತರ ಪ್ರದೇಶದ ಶಾಸಕರೊಬ್ಬರು ತಮ್ಮ ಶಾಸಕತ್ವ ಕಳೆದುಕೊಂಡರು. ಇಲ್ಲಿನ ಶಾಸಕರಿಗೂ ಅದೇರೀತಿ ಶಿಕ್ಷೆಯಾದರೆ ಕರಾವಳಿಯಲ್ಲೂ ಕೋಮುವಾದ ಕಡಿಮೆಯಾಗಬಹುದು’ ಎಂದರು. </p>.<p>ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ‘ಕರಾವಳಿಯಲ್ಲಿ ಕೋಮುವಾದವನ್ನು ಪೋಷಿಸುತ್ತಿರುವುದು ಶಿಕ್ಷಣ ಮಾಫಿಯಾ. ತಮಗೆ ಅಗತ್ಯಬಿದ್ದಾಗ ಜಗಳ ಮಾಡಿಸುವ, ನಷ್ಟವಾಗುತ್ತದೆ ಎಂದಾದರೆ ಜಗಳ ನಿಲ್ಲಿಸುವ ಕಲೆ ಅವರಿಗೆ ತಿಳಿದಿದೆ. ಇಲ್ಲಿ ನಡೆಯುತ್ತಿರುವುದು ಹಿಂದೂ–ಮುಸ್ಲಿಂ ಸಂಘರ್ಷವಲ್ಲ. ಜಾತ್ಯತೀತ ಹಾಗೂ ಕೋಮುವಾದದ ಸಂಘರ್ಷವಿದು. ಈ ಸ್ಪಷ್ಟತೆ ಇಲ್ಲದೇ ಇಲ್ಲಿ ಸೌಹಾರ್ದ ಮರುಸ್ಥಾಪನೆಯ ಆಶಯ ಈಡೇರದು’ ಎಂದರು.</p>.<p>ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ.ಇಮ್ತಿಯಾಜ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.</p>.<p>Cut-off box - </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>