ರಾಜಕೀಯ ಮೇಲಾಟಕ್ಕೆ ಬಲಿ: ರಾಜ್ಯದಲ್ಲಿ ಸರ್ಕಾರಗಳು ಬದಲಾದಂತೆ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳೂ ಬದಲಾಗುತ್ತಲೇ ಹೋಗುತ್ತಿವೆ. 2018ರಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕುದ್ರೋಳಿ ಕಸಾಯಿಖಾನೆ ಅಭಿವೃದ್ಧಿಯನ್ನು ಸ್ಮಾರ್ಟ್ ಸಿಟಿ ಅಡಿ ಸೇರಿಸಲಾಯಿತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಈ ಯೋಜನೆಯನ್ನು ಕೈಬಿಟ್ಟು, ಪಡೀಲ್ ರಸ್ತೆ ಅಭಿವೃದ್ಧಿಯನ್ನು ಸೇರಿಸಲಾಯಿತು. ಪಾಲಿಕೆಯಲ್ಲೂ ಅಧಿಕಾರ ಬದಲಾಗಿದ್ದು, ಕಾಮಗಾರಿಯ ಪಟ್ಟಿಯೂ ಬೆಳೆಯುತ್ತಲೇ ಹೋಗುತ್ತಿದೆ.ವೃದ್ಧಿಗೆ ಪೂರಕ ಯೋಜನೆ’: ‘ನಗರದ ಅಭಿವೃದ್ಧಿಗೆ ಪೂರಕ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದರ ಜತೆಗೆ ದೇರೆಬೈಲ್ನಲ್ಲಿ 2 ಲಕ್ಷ ಚದರ ಅಡಿಯಲ್ಲಿ ₹ 60 ಕೋಟಿ ವೆಚ್ಚದ ಮಾಹಿತಿ ತಂತ್ರಜ್ಞಾನ ಪಾರ್ಕ್ಗೆ ಪ್ರಸ್ತಾವ ಮಂಡಿಸಿದ್ದು, ಇದಕ್ಕೆ ತಾತ್ವಿಕ ಒಪ್ಪಿಗೆ ಸಿಕ್ಕಿದೆ’ ಎಂದು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಐಸಾಕ್ ವಾಸ್ ಹೇಳುತ್ತಾರೆ.