ಮಂಗಳೂರು: ನಗರದ ಯುನಿಟಿ ಆಸ್ಪತ್ರೆ ಸಮೀಪ ಸೋಮವಾರ ರಾತ್ರಿ ಯುವಕನೊಬ್ಬನ ಮೇಲೆ ತಲವಾರು ದಾಳಿ ನಡೆದಿದೆ.
ನೌಶಾದ್ (30) ಗಾಯಗೊಂಡ ಯುವಕ.
ಇತ್ತೀಚೆಗೆ ಕಂದಾವರ ಮಸೀದಿ ಸಮೀಪ ಚೂರಿ ಇರಿತಕ್ಕೊಳಗಾಗಿದ್ದ ಅಬ್ದುಲ್ ಅಝೀಝ್ ಅವರ ಅಳಿಯ ನೌಶಾದ್ ಅವರ ಮೇಲೆ ತಲವಾರಿನಿಂದದಾಳಿ ಮಾಡಲಾಗಿದೆ. ಅವರ ಎದೆ ಭಾಗಕ್ಕೆ ಗಾಯವಾಗಿದ್ದು, ಕಾರಿನಲ್ಲಿ ಬಂದಿದ್ದ ತಂಡ ಈ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.