<p><strong>ಮಂಗಳೂರು:</strong> ಕೊರಗಜ್ಜ, ಬ್ರಹ್ಮ ಬೊಬ್ಬರ್ಯ, ಕಲ್ಲುರ್ಟಿ, ಜಾರಂದಾಯ ಸೇರಿದಂತೆ ಅಲ್ಲಲ್ಲಿ ದೈವಸ್ಥಾನಗಳನ್ನು ಹೊಂದಿರುವ, ರಾಮಮಂದಿರ ಅಯ್ಯಪ್ಪ ಸ್ವಾಮಿ ಸೇರಿದಂತೆ ಮಂದಿರಗಳಿಗೂ ಹೆಸರಾದ, ‘ಚರ್ಚ್ಗೇಟ್’ ಪ್ರಮುಖ ಲ್ಯಾಂಡ್ ಮಾರ್ಕ್ ಆಗಿರುವ, ನಾಗಕಟ್ಟೆಗಳನ್ನೂ ಹೊಂದಿರುವ ವಿಸ್ತಾರದ ಪ್ರದೇಶ, ಬೆಳವಣಿಗೆಗೆ ಅವಕಾಶಗಳ ಬಾಗಿಲುಗಳನ್ನು ತೆರೆದುಕೊಂಡಿರುವ ವಾರ್ಡ್ ಬೋಳೂರು.</p>.<p>ಹಿನ್ನೀರು, ನದಿಮುಖ, ಸಮುದ್ರದ ಗಂಧವನ್ನು ಹೊಂದಿರುವ ವಾರ್ಡ್ನಲ್ಲಿ ಸುಲ್ತಾನ್ ಬತ್ತೇರಿ–ಉರ್ವ ರಸ್ತೆ ಕಾಂಕ್ರಿಟ್ ಹೊದ್ದು ಸುಂದರವಾಗಿ ಕಂಗೊಳಿಸುತ್ತಿದ್ದರೆ ಸುಲ್ತಾನ್ ಬತ್ತೇರಿ–ಬೊಕ್ಕಪಟ್ಣ ಸಂಪರ್ಕದ ಉದ್ದರ ರಸ್ತೆ ಸಮಸ್ಯೆಗಳ ಪರಿಹಾರಕ್ಕಾಗಿ ಕಾಯುತ್ತಿದೆ. </p>.<p>ಒಂದು ಅಂಚನ್ನು ಫಲ್ಗುಣಿ ನದಿಯೊಂದಿಗೆ ಹಂಚಿಕೊಂಡಿರುವ, ಮತ್ತೊಂದು ಅಂಚನ್ನು ಉರ್ವ–ಬೊಕ್ಕಪಟ್ಣ ರಸ್ತೆಯ ರಸ್ತೆಗೆ ಹೊಂದಿಕೊಂಡಿರುವ ಬೋಳೂರು ವಾರ್ಡ್ ಈಚೆಗೆ ಅಭಿವೃದ್ಧಿಯ ಹಾದಿಯಲ್ಲಿದೆ. ಖಾಸಗಿ ಸಂಸ್ಥೆಗಳು, ವ್ಯಕ್ತಿಗಳು ಕೂಡ ಇಲ್ಲಿ ದೊಡ್ಡ ದೊಡ್ಡ ಮಳಿಗೆ, ಕಟ್ಟಡಗಳನ್ನು ನಿರ್ಮಿಸುತ್ತಿದ್ದು ಈ ಎಲ್ಲ ಕಾಮಗಾರಿಗಳಿಂದಾಗಿ ದೂಳು–ಮಣ್ಣು ತುಂಬಿಕೊಂಡು ಕೆಲವು ಪ್ರದೇಶಗಳಲ್ಲಿ ವಾಸವೇ ಕಷ್ಟಕರವಾಗಿದೆ. ಖಾಲಿ ಜಾಗಗಳಲ್ಲಿ ಕಸ, ಕಲ್ಲು ಮಣ್ಣು ಸುರಿದಿರುವುದು ಕೂಡ ಕಾಣಸಿಗುತ್ತದೆ. </p>.<p>ಬೊಕ್ಕಪಟ್ಣದಿಂದ ಸುಲ್ತಾನ್ ಬತ್ತೇರಿಗೆ ಹೋಗುವ ಉದ್ದದ ರಸ್ತೆಯಲ್ಲಿ ಸಾಗಿದರೆ ಎಡಬಲದಲ್ಲಿ ವಾರ್ಡ್ನ ಎರಡು ಮುಖಗಳು ಗೋಚರಿಸುತ್ತವೆ. ನದಿಯ ಬದಿಯ ಅನೇಕ ಜಾಗಗಳು ಇನ್ನೂ ಅಭಿವೃದ್ಧಿಯಾಗಬೇಕಿವೆ. ಹಳೆಯ ಕಾಲದ ಮನೆಗಳು, ಕಿಷ್ಕಿಂದೆಯಂಥ ಜಾಗಗಳಲ್ಲಿ ಸಾಲು ಮನೆಗಳು, ಗುಂಪು ಮನೆಗಳು ಕಂಡುಬರುತ್ತವೆ. </p>.<p>ಇನ್ನೊಂದು ಬದಿಯಲ್ಲಿ ಹಳೆಯ, ಹೆಂಚಿನ ಮನೆಗಳು ಇವೆ. ಕಟ್ಟೆಗಳು ಇವೆ. ಸಂಜೆಯಾದರೆ ಹಳೆಯ ಸಣ್ಣ ಮನೆಗಳ ಅಂಗಳದಲ್ಲಿ ಕುಳಿತು ಮೋಜಿನ ಆಟವಾಡುವವರು ಕಾಣಸಿಗುತ್ತಾರೆ. ಈ ರಸ್ತೆಯ ಅಭಿವೃದ್ಧಿಗಾಗಿ ಇಲ್ಲಿನವರು ಕಾಯುತ್ತಿದ್ದಾರೆ. ಈ ರಸ್ತೆಯ ಅಭಿವೃದ್ಧಿಗೆ ಟೆಂಡರ್ ಅನುಮೋದನೆ ಸಿಕ್ಕಿದೆ. ಆದರೆ ಕಾಮಗಾರಿ ಆರಂಭಿಸಲು ಅಡ್ಡಿಗಳಾಗಿವೆ ಎಂದು ಮಹಾನಗರ ಪಾಲಿಕೆಯ ನಿಕಟಪೂರ್ವ ಸದಸ್ಯ ಜಗದೀಶ್ ಶೆಟ್ಟಿ ತಿಳಿಸಿದರು. </p>.<p>‘ಸುಲ್ತಾನ್ ಬತ್ತೇರಿ ರಸ್ತೆಯ ಗುಂಡಿಗಳನ್ನು ಮುಚ್ಚಿ ಅಗಲಗೊಳಿಸಿ ಸುಮಗ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಅನುಕೂಲ ಆಗುತ್ತಿತ್ತು’ ಎಂದು ಚರ್ಚ್ ಗೇಟ್ ಬಳಿ ಇರುವ ಆಟೊಸ್ಟ್ಯಾಂಡ್ನ ಆಟೊ ಚಾಲಕರು ಹೇಳಿದರು. </p>.<p>‘ವಾರ್ಡ್ ಚಿತ್ರಣ ಸಂಪೂರ್ಣ ಬದಲಾಗಿದೆ. ಸಮುದ್ರ ಮತ್ತು ನದಿಯ ಸಮೀಪದಲ್ಲಿರುವುದರಿಂದ ಇದು ಸೂಕ್ಷ್ಮ ಪ್ರದೇಶ. ಹಿಂದೆ ಇಲ್ಲಿ ಅವೈಜ್ಞಾನಿಕವಾಗಿ ಕೆಲಸಗಳನ್ನು ಮಾಡಲಾಗಿದೆ. ಈ ಬಾರಿ ಅದಕ್ಕೆ ಪರಿಹಾರ ಕಂಡುಕೊಳ್ಳಲಾಗಿದೆ. ಜೊತೆಯಲ್ಲಿ ಬಹಳಷ್ಟು ಅಭಿವೃದ್ಧಿ ಕಾಮಗಾರಿಗಳೂ ಆಗಿವೆ. ಯಾವ ಹಂತದಲ್ಲೂ ಅನವಶ್ಯಕವಾಗಿ ಹಣ ಪೋಲು ಮಾಡಲಿಲ್ಲ’ ಎಂದು ಜಗದೀಶ್ ಶೆಟ್ಟಿ ತಿಳಿಸಿದರು. </p>.<p>‘ಇಲ್ಲಿನ ತಗ್ಗು ಪ್ರದೇಶದಲ್ಲಿ ಇದ್ದ ದೊಡ್ಡ ಸಮಸ್ಯೆ ಅಪೂರ್ಣ ಒಳಚರಂಡಿ. ಬಂಡೆಕಲ್ಲುಗಳು ಇದ್ದ ಕಾರಣ ಕೆಲವು ಕಡೆಗಳಲ್ಲಿ ನೆಲ ಅಗೆಯಲು ಆಗಲಿಲ್ಲ. ಈ ಬಾರಿ ಅಮೃತ್ ಯೋಜನೆಯಡಿ ಆಧುನಿಕ ತಂತ್ರಜ್ಞಾನ ಬಳಸಿ ಕೆಲಸ ಮಾಡಿದ್ದು ಶೇಕಡ 80ರಷ್ಟು ಪೂರ್ತಿಯಾಗಿದೆ’ ಎಂದು ಅವರು ತಿಳಿಸಿದರು.</p>.<h3>ಅಗೆದರೆ ಮರಳು ಕುಸಿತ</h3>.<p>ಕೆಲವು ಕಡೆಗಳಲ್ಲಿ ಮೂರು ಅಡಿ ಆಳ ಅಗೆದರೆ ಮರಳು ಸಿಗುತ್ತಿತ್ತು. 5 ಅಡಿ ವಿಸ್ತೀರ್ಣದಲ್ಲಿ ಅಗೆದರೆ 15 ಅಡಿಗಳಷ್ಟು ಜಾಗ ಕುಸಿಯುವ ಭೀತಿ ಇತ್ತು. ಅಂಥ ಜಾಗದಲ್ಲಿ ಹೆಚ್ಚು ಕೆಲಸ ಆಗಲಿಲ್ಲ. ಅಲ್ಲಿ ನೆಲವನ್ನು ಸ್ಕ್ಯಾನ್ ಮಾಡಿ ಬಂಡೆಕಲ್ಲುಗಳ ವ್ಯಾಪ್ತಿಯನ್ನು ತಿಳಿದುಕೊಳ್ಳಲು ಎನ್ಐಟಿಕೆ ನೆರವು ಪಡೆಯಲಾಗಿತ್ತು. ಸಂಪೂರ್ಣ ಬಂಡೆ ಇದೆ ಎಂದು ವರದಿ ಬಂದಿದೆ. ಆದ್ದರಿಂದ ಸ್ಥಳೀಯ ನಿಧಿಯನ್ನು ಪಾಲಿಕೆಯ ವಿಶೇಷ ನಿಧಿಯ ಜೊತೆ ಹೊಂದಿಸಿಕೊಂಡು ಕಾಮಗಾರಿ ಮುಂದುವರಿಸುವ ಯೋಜನೆ ಇದೆ. ಇತರ ಪ್ರದೇಶಗಳ ಅಗತ್ಯ ಇರುವಲ್ಲಿ ಒಳಚಂಡಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಪಾಲಿಕೆಯ ನಿಕಟಪೂರ್ವ ಸದಸ್ಯ ಜಗದೀಶ್ ಶೆಟ್ಟಿ ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಕೊರಗಜ್ಜ, ಬ್ರಹ್ಮ ಬೊಬ್ಬರ್ಯ, ಕಲ್ಲುರ್ಟಿ, ಜಾರಂದಾಯ ಸೇರಿದಂತೆ ಅಲ್ಲಲ್ಲಿ ದೈವಸ್ಥಾನಗಳನ್ನು ಹೊಂದಿರುವ, ರಾಮಮಂದಿರ ಅಯ್ಯಪ್ಪ ಸ್ವಾಮಿ ಸೇರಿದಂತೆ ಮಂದಿರಗಳಿಗೂ ಹೆಸರಾದ, ‘ಚರ್ಚ್ಗೇಟ್’ ಪ್ರಮುಖ ಲ್ಯಾಂಡ್ ಮಾರ್ಕ್ ಆಗಿರುವ, ನಾಗಕಟ್ಟೆಗಳನ್ನೂ ಹೊಂದಿರುವ ವಿಸ್ತಾರದ ಪ್ರದೇಶ, ಬೆಳವಣಿಗೆಗೆ ಅವಕಾಶಗಳ ಬಾಗಿಲುಗಳನ್ನು ತೆರೆದುಕೊಂಡಿರುವ ವಾರ್ಡ್ ಬೋಳೂರು.</p>.<p>ಹಿನ್ನೀರು, ನದಿಮುಖ, ಸಮುದ್ರದ ಗಂಧವನ್ನು ಹೊಂದಿರುವ ವಾರ್ಡ್ನಲ್ಲಿ ಸುಲ್ತಾನ್ ಬತ್ತೇರಿ–ಉರ್ವ ರಸ್ತೆ ಕಾಂಕ್ರಿಟ್ ಹೊದ್ದು ಸುಂದರವಾಗಿ ಕಂಗೊಳಿಸುತ್ತಿದ್ದರೆ ಸುಲ್ತಾನ್ ಬತ್ತೇರಿ–ಬೊಕ್ಕಪಟ್ಣ ಸಂಪರ್ಕದ ಉದ್ದರ ರಸ್ತೆ ಸಮಸ್ಯೆಗಳ ಪರಿಹಾರಕ್ಕಾಗಿ ಕಾಯುತ್ತಿದೆ. </p>.<p>ಒಂದು ಅಂಚನ್ನು ಫಲ್ಗುಣಿ ನದಿಯೊಂದಿಗೆ ಹಂಚಿಕೊಂಡಿರುವ, ಮತ್ತೊಂದು ಅಂಚನ್ನು ಉರ್ವ–ಬೊಕ್ಕಪಟ್ಣ ರಸ್ತೆಯ ರಸ್ತೆಗೆ ಹೊಂದಿಕೊಂಡಿರುವ ಬೋಳೂರು ವಾರ್ಡ್ ಈಚೆಗೆ ಅಭಿವೃದ್ಧಿಯ ಹಾದಿಯಲ್ಲಿದೆ. ಖಾಸಗಿ ಸಂಸ್ಥೆಗಳು, ವ್ಯಕ್ತಿಗಳು ಕೂಡ ಇಲ್ಲಿ ದೊಡ್ಡ ದೊಡ್ಡ ಮಳಿಗೆ, ಕಟ್ಟಡಗಳನ್ನು ನಿರ್ಮಿಸುತ್ತಿದ್ದು ಈ ಎಲ್ಲ ಕಾಮಗಾರಿಗಳಿಂದಾಗಿ ದೂಳು–ಮಣ್ಣು ತುಂಬಿಕೊಂಡು ಕೆಲವು ಪ್ರದೇಶಗಳಲ್ಲಿ ವಾಸವೇ ಕಷ್ಟಕರವಾಗಿದೆ. ಖಾಲಿ ಜಾಗಗಳಲ್ಲಿ ಕಸ, ಕಲ್ಲು ಮಣ್ಣು ಸುರಿದಿರುವುದು ಕೂಡ ಕಾಣಸಿಗುತ್ತದೆ. </p>.<p>ಬೊಕ್ಕಪಟ್ಣದಿಂದ ಸುಲ್ತಾನ್ ಬತ್ತೇರಿಗೆ ಹೋಗುವ ಉದ್ದದ ರಸ್ತೆಯಲ್ಲಿ ಸಾಗಿದರೆ ಎಡಬಲದಲ್ಲಿ ವಾರ್ಡ್ನ ಎರಡು ಮುಖಗಳು ಗೋಚರಿಸುತ್ತವೆ. ನದಿಯ ಬದಿಯ ಅನೇಕ ಜಾಗಗಳು ಇನ್ನೂ ಅಭಿವೃದ್ಧಿಯಾಗಬೇಕಿವೆ. ಹಳೆಯ ಕಾಲದ ಮನೆಗಳು, ಕಿಷ್ಕಿಂದೆಯಂಥ ಜಾಗಗಳಲ್ಲಿ ಸಾಲು ಮನೆಗಳು, ಗುಂಪು ಮನೆಗಳು ಕಂಡುಬರುತ್ತವೆ. </p>.<p>ಇನ್ನೊಂದು ಬದಿಯಲ್ಲಿ ಹಳೆಯ, ಹೆಂಚಿನ ಮನೆಗಳು ಇವೆ. ಕಟ್ಟೆಗಳು ಇವೆ. ಸಂಜೆಯಾದರೆ ಹಳೆಯ ಸಣ್ಣ ಮನೆಗಳ ಅಂಗಳದಲ್ಲಿ ಕುಳಿತು ಮೋಜಿನ ಆಟವಾಡುವವರು ಕಾಣಸಿಗುತ್ತಾರೆ. ಈ ರಸ್ತೆಯ ಅಭಿವೃದ್ಧಿಗಾಗಿ ಇಲ್ಲಿನವರು ಕಾಯುತ್ತಿದ್ದಾರೆ. ಈ ರಸ್ತೆಯ ಅಭಿವೃದ್ಧಿಗೆ ಟೆಂಡರ್ ಅನುಮೋದನೆ ಸಿಕ್ಕಿದೆ. ಆದರೆ ಕಾಮಗಾರಿ ಆರಂಭಿಸಲು ಅಡ್ಡಿಗಳಾಗಿವೆ ಎಂದು ಮಹಾನಗರ ಪಾಲಿಕೆಯ ನಿಕಟಪೂರ್ವ ಸದಸ್ಯ ಜಗದೀಶ್ ಶೆಟ್ಟಿ ತಿಳಿಸಿದರು. </p>.<p>‘ಸುಲ್ತಾನ್ ಬತ್ತೇರಿ ರಸ್ತೆಯ ಗುಂಡಿಗಳನ್ನು ಮುಚ್ಚಿ ಅಗಲಗೊಳಿಸಿ ಸುಮಗ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಅನುಕೂಲ ಆಗುತ್ತಿತ್ತು’ ಎಂದು ಚರ್ಚ್ ಗೇಟ್ ಬಳಿ ಇರುವ ಆಟೊಸ್ಟ್ಯಾಂಡ್ನ ಆಟೊ ಚಾಲಕರು ಹೇಳಿದರು. </p>.<p>‘ವಾರ್ಡ್ ಚಿತ್ರಣ ಸಂಪೂರ್ಣ ಬದಲಾಗಿದೆ. ಸಮುದ್ರ ಮತ್ತು ನದಿಯ ಸಮೀಪದಲ್ಲಿರುವುದರಿಂದ ಇದು ಸೂಕ್ಷ್ಮ ಪ್ರದೇಶ. ಹಿಂದೆ ಇಲ್ಲಿ ಅವೈಜ್ಞಾನಿಕವಾಗಿ ಕೆಲಸಗಳನ್ನು ಮಾಡಲಾಗಿದೆ. ಈ ಬಾರಿ ಅದಕ್ಕೆ ಪರಿಹಾರ ಕಂಡುಕೊಳ್ಳಲಾಗಿದೆ. ಜೊತೆಯಲ್ಲಿ ಬಹಳಷ್ಟು ಅಭಿವೃದ್ಧಿ ಕಾಮಗಾರಿಗಳೂ ಆಗಿವೆ. ಯಾವ ಹಂತದಲ್ಲೂ ಅನವಶ್ಯಕವಾಗಿ ಹಣ ಪೋಲು ಮಾಡಲಿಲ್ಲ’ ಎಂದು ಜಗದೀಶ್ ಶೆಟ್ಟಿ ತಿಳಿಸಿದರು. </p>.<p>‘ಇಲ್ಲಿನ ತಗ್ಗು ಪ್ರದೇಶದಲ್ಲಿ ಇದ್ದ ದೊಡ್ಡ ಸಮಸ್ಯೆ ಅಪೂರ್ಣ ಒಳಚರಂಡಿ. ಬಂಡೆಕಲ್ಲುಗಳು ಇದ್ದ ಕಾರಣ ಕೆಲವು ಕಡೆಗಳಲ್ಲಿ ನೆಲ ಅಗೆಯಲು ಆಗಲಿಲ್ಲ. ಈ ಬಾರಿ ಅಮೃತ್ ಯೋಜನೆಯಡಿ ಆಧುನಿಕ ತಂತ್ರಜ್ಞಾನ ಬಳಸಿ ಕೆಲಸ ಮಾಡಿದ್ದು ಶೇಕಡ 80ರಷ್ಟು ಪೂರ್ತಿಯಾಗಿದೆ’ ಎಂದು ಅವರು ತಿಳಿಸಿದರು.</p>.<h3>ಅಗೆದರೆ ಮರಳು ಕುಸಿತ</h3>.<p>ಕೆಲವು ಕಡೆಗಳಲ್ಲಿ ಮೂರು ಅಡಿ ಆಳ ಅಗೆದರೆ ಮರಳು ಸಿಗುತ್ತಿತ್ತು. 5 ಅಡಿ ವಿಸ್ತೀರ್ಣದಲ್ಲಿ ಅಗೆದರೆ 15 ಅಡಿಗಳಷ್ಟು ಜಾಗ ಕುಸಿಯುವ ಭೀತಿ ಇತ್ತು. ಅಂಥ ಜಾಗದಲ್ಲಿ ಹೆಚ್ಚು ಕೆಲಸ ಆಗಲಿಲ್ಲ. ಅಲ್ಲಿ ನೆಲವನ್ನು ಸ್ಕ್ಯಾನ್ ಮಾಡಿ ಬಂಡೆಕಲ್ಲುಗಳ ವ್ಯಾಪ್ತಿಯನ್ನು ತಿಳಿದುಕೊಳ್ಳಲು ಎನ್ಐಟಿಕೆ ನೆರವು ಪಡೆಯಲಾಗಿತ್ತು. ಸಂಪೂರ್ಣ ಬಂಡೆ ಇದೆ ಎಂದು ವರದಿ ಬಂದಿದೆ. ಆದ್ದರಿಂದ ಸ್ಥಳೀಯ ನಿಧಿಯನ್ನು ಪಾಲಿಕೆಯ ವಿಶೇಷ ನಿಧಿಯ ಜೊತೆ ಹೊಂದಿಸಿಕೊಂಡು ಕಾಮಗಾರಿ ಮುಂದುವರಿಸುವ ಯೋಜನೆ ಇದೆ. ಇತರ ಪ್ರದೇಶಗಳ ಅಗತ್ಯ ಇರುವಲ್ಲಿ ಒಳಚಂಡಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಪಾಲಿಕೆಯ ನಿಕಟಪೂರ್ವ ಸದಸ್ಯ ಜಗದೀಶ್ ಶೆಟ್ಟಿ ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>