<p>ಮಂಗಳೂರು: ಮಧ್ಯಪ್ರಾಚ್ಯದ ಸಂಘರ್ಷ ಅಂತ್ಯವಾಗಿ ವಿಶ್ವಶಾಂತಿ ನೆಲೆಸಲಿ ಎಂಬ ಆಶಯದಿಂದ ನಿರಂತರ 40 ಗಂಟೆಗಳ ದಿವ್ಯ ಪ್ರಸಾದ ಆರಾಧನೆಯು ನಗರದ ಬಿಕರ್ನಕಟ್ಟೆಯ ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ಮಂಗಳವಾರ ಮುಂಜಾನೆ ಆರಂಭವಾಯಿತು.</p>.<p>ಸೇಂಟ್ ಜೋಸೆಫ್ ಆಶ್ರಮದ ಸುಪೀರಿಯರ್ ಫಾ.ಮೆಲ್ವಿನ್ ಡಿಕುನ್ಹಾ ನೇತೃತ್ವದಲ್ಲಿ ನಡೆದ ಪವಿತ್ರ ಬಲಿಪೂಜೆಯೊಂದಿಗೆ ಈ ಆರಾಧನೆಗೆ ಚಾಲನೆ ದೊರೆಯಿತು. ಆಶೀರ್ವಚನ ನೀಡಿದ ಫಾ.ಜಾನ್ ಪಿಂಟೊ, ‘ಬೈಬಲ್ನಲ್ಲಿ 40 ಸಂಖ್ಯೆಗೆ ಮಹತ್ವವಿದೆ. ಇದು ಇಸ್ರೇಲಿಯನ್ನರು ಮರುಭೂಮಿಯಲ್ಲಿ ಕಳೆದ 40 ವರ್ಷ ಗಳು ಮತ್ತು ಯೇಸು ಕ್ರಿಸ್ತರು ಸಾರ್ವಜನಿಕ ಸೇವೆಗೂ ಮುನ್ನ ಕೈಗೊಂಡ 40 ದಿನಗಳ ಉಪವಾಸವನ್ನು ಸಂಕೇತಿಸುತ್ತದೆ’ ಎಂದರು.</p>.<p>ಪುಣ್ಯಕ್ಷೇತ್ರದ ನಿರ್ದೇಶಕ ಫಾ. ಸ್ಟೀಫನ್ ಪಿರೇರಾ ಭಕ್ತರನ್ನು ಸ್ವಾಗತಿಸಿದರು.</p>.<p>ವಿವಿಧ ತಂಡಗಳು ಪ್ರಾರ್ಥನಾ ವಿಧಿ ಗಳನ್ನು ಮುನ್ನಡೆಸಿದವು. ಬಜ್ಜೋಡಿಯ ಇನ್ಫೆಂಟ್ ಮೇರಿ ಚರ್ಚ್ನ ಭಕ್ತರು, ಸೆಕ್ಯುಲರ್ ಕಾರ್ಮೆಲೈಟ್ಸ್ ಮತ್ತು ಬೆಥನಿ ಭಗಿನಿಯರು ಪಾಲ್ಗೊಂಡರು. ಧರ್ಮಪ್ರಾಂತ್ಯದ ಮಕ್ಕಳ ವರ್ಷದ ಅಂಗವಾಗಿ ಮಕ್ಕಳಿಗಾಗಿ ಮೀಸಲಾದ 1 ಗಂಟೆಯ ವಿಶೇಷ ಆರಾಧನೆ ಗಮನ ಸೆಳೆಯಿತು.</p>.<p>ಕೊಂಕಣಿ ಸಮುದಾಯದ ಸಾಂಪ್ರದಾಯಿಕ ಗುಮ್ಟಾ ಸಂಗೀತ, ಕನ್ನಡ ಭಜನೆಗಳು ಮತ್ತು ವಾದ್ಯಸಂಗೀತ ಈ ಸಲದ ಆರಾಧನೆಗೆ ವಿಶೇಷ ಮೆರುಗು ತುಂಬಿದವು. ಏ. 1ರಂದು ರಾತ್ರಿ ತೈಜೆ ಪ್ರಾರ್ಥನೆ ಮತ್ತು ಕೃತಜ್ಞತಾ ಬಲಿಪೂಜೆಯೊಂದಿಗೆ ಈ 40 ಗಂಟೆಗಳ ನಿರಂತರ ಆರಾಧನಾ ಕಾರ್ಯಕ್ರಮವು ಮುಕ್ತಾಯಗೊಳ್ಳಲಿದೆ.</p>.<p>16 ವರ್ಷಗಳಿಂದ ಈ ಆಧ್ಯಾತ್ಮಿಕ ಸಂಪ್ರದಾಯವನ್ನು ಆಚರಿಸಲಾಗುತ್ತಿದ್ದು, ಸಾವಿರಾರು ಭಕ್ತರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಭಕ್ತರ ಆಧ್ಯಾತ್ಮಿಕ ಪುನರುತ್ಥಾನ, ಪಾಪ ಕ್ಷಮೆ ಹಾಗೂ ಸಂಸ್ಕಾರ ವೃದ್ಧಿಗಾಗಿ ಈ ಆರಾಧನೆ ನೆರವೇರಿಸಲಾಗುತ್ತದೆ ಎಂದು ಚರ್ಚ್ನ ಪ್ರಕಟಣೆ ತಿಳಿಸಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-29-1526942167</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಗಳೂರು: ಮಧ್ಯಪ್ರಾಚ್ಯದ ಸಂಘರ್ಷ ಅಂತ್ಯವಾಗಿ ವಿಶ್ವಶಾಂತಿ ನೆಲೆಸಲಿ ಎಂಬ ಆಶಯದಿಂದ ನಿರಂತರ 40 ಗಂಟೆಗಳ ದಿವ್ಯ ಪ್ರಸಾದ ಆರಾಧನೆಯು ನಗರದ ಬಿಕರ್ನಕಟ್ಟೆಯ ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ಮಂಗಳವಾರ ಮುಂಜಾನೆ ಆರಂಭವಾಯಿತು.</p>.<p>ಸೇಂಟ್ ಜೋಸೆಫ್ ಆಶ್ರಮದ ಸುಪೀರಿಯರ್ ಫಾ.ಮೆಲ್ವಿನ್ ಡಿಕುನ್ಹಾ ನೇತೃತ್ವದಲ್ಲಿ ನಡೆದ ಪವಿತ್ರ ಬಲಿಪೂಜೆಯೊಂದಿಗೆ ಈ ಆರಾಧನೆಗೆ ಚಾಲನೆ ದೊರೆಯಿತು. ಆಶೀರ್ವಚನ ನೀಡಿದ ಫಾ.ಜಾನ್ ಪಿಂಟೊ, ‘ಬೈಬಲ್ನಲ್ಲಿ 40 ಸಂಖ್ಯೆಗೆ ಮಹತ್ವವಿದೆ. ಇದು ಇಸ್ರೇಲಿಯನ್ನರು ಮರುಭೂಮಿಯಲ್ಲಿ ಕಳೆದ 40 ವರ್ಷ ಗಳು ಮತ್ತು ಯೇಸು ಕ್ರಿಸ್ತರು ಸಾರ್ವಜನಿಕ ಸೇವೆಗೂ ಮುನ್ನ ಕೈಗೊಂಡ 40 ದಿನಗಳ ಉಪವಾಸವನ್ನು ಸಂಕೇತಿಸುತ್ತದೆ’ ಎಂದರು.</p>.<p>ಪುಣ್ಯಕ್ಷೇತ್ರದ ನಿರ್ದೇಶಕ ಫಾ. ಸ್ಟೀಫನ್ ಪಿರೇರಾ ಭಕ್ತರನ್ನು ಸ್ವಾಗತಿಸಿದರು.</p>.<p>ವಿವಿಧ ತಂಡಗಳು ಪ್ರಾರ್ಥನಾ ವಿಧಿ ಗಳನ್ನು ಮುನ್ನಡೆಸಿದವು. ಬಜ್ಜೋಡಿಯ ಇನ್ಫೆಂಟ್ ಮೇರಿ ಚರ್ಚ್ನ ಭಕ್ತರು, ಸೆಕ್ಯುಲರ್ ಕಾರ್ಮೆಲೈಟ್ಸ್ ಮತ್ತು ಬೆಥನಿ ಭಗಿನಿಯರು ಪಾಲ್ಗೊಂಡರು. ಧರ್ಮಪ್ರಾಂತ್ಯದ ಮಕ್ಕಳ ವರ್ಷದ ಅಂಗವಾಗಿ ಮಕ್ಕಳಿಗಾಗಿ ಮೀಸಲಾದ 1 ಗಂಟೆಯ ವಿಶೇಷ ಆರಾಧನೆ ಗಮನ ಸೆಳೆಯಿತು.</p>.<p>ಕೊಂಕಣಿ ಸಮುದಾಯದ ಸಾಂಪ್ರದಾಯಿಕ ಗುಮ್ಟಾ ಸಂಗೀತ, ಕನ್ನಡ ಭಜನೆಗಳು ಮತ್ತು ವಾದ್ಯಸಂಗೀತ ಈ ಸಲದ ಆರಾಧನೆಗೆ ವಿಶೇಷ ಮೆರುಗು ತುಂಬಿದವು. ಏ. 1ರಂದು ರಾತ್ರಿ ತೈಜೆ ಪ್ರಾರ್ಥನೆ ಮತ್ತು ಕೃತಜ್ಞತಾ ಬಲಿಪೂಜೆಯೊಂದಿಗೆ ಈ 40 ಗಂಟೆಗಳ ನಿರಂತರ ಆರಾಧನಾ ಕಾರ್ಯಕ್ರಮವು ಮುಕ್ತಾಯಗೊಳ್ಳಲಿದೆ.</p>.<p>16 ವರ್ಷಗಳಿಂದ ಈ ಆಧ್ಯಾತ್ಮಿಕ ಸಂಪ್ರದಾಯವನ್ನು ಆಚರಿಸಲಾಗುತ್ತಿದ್ದು, ಸಾವಿರಾರು ಭಕ್ತರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಭಕ್ತರ ಆಧ್ಯಾತ್ಮಿಕ ಪುನರುತ್ಥಾನ, ಪಾಪ ಕ್ಷಮೆ ಹಾಗೂ ಸಂಸ್ಕಾರ ವೃದ್ಧಿಗಾಗಿ ಈ ಆರಾಧನೆ ನೆರವೇರಿಸಲಾಗುತ್ತದೆ ಎಂದು ಚರ್ಚ್ನ ಪ್ರಕಟಣೆ ತಿಳಿಸಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-29-1526942167</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>