<p><strong>ಮಂಗಳೂರು</strong>: ಇಲ್ಲಿಯ ಎಕ್ಕೂರಿನಲ್ಲಿರುವ ರಾಜ್ಯದ ಏಕೈಕ ಮೀನುಗಾರಿಕಾ ಕಾಲೇಜು ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದು, ಹೊಸ ಬ್ಯಾಚ್ನಲ್ಲಿ ಬರುವ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಪ್ರಯೋಗಾಲಯ ವ್ಯವಸ್ಥೆಗೊಳಿಸುವುದೇ ಸವಾಲಾಗಿದೆ.</p>.<p>1969ರಲ್ಲಿ ಪ್ರಾರಂಭವಾದ ಕಾಲೇಜು 40 ವಿದ್ಯಾರ್ಥಿಗಳ ಪ್ರವೇಶ ಸಾಮರ್ಥ್ಯಕ್ಕೆ ಅನುಗುಣವಾಗಿ ವ್ಯವಸ್ಥೆಯನ್ನು ಹೊಂದಿದೆ. ಕಳೆದ ವರ್ಷದಿಂದ ಪ್ರವೇಶ ಸಂಖ್ಯೆ ಹೆಚ್ಚಳ ಮಾಡಲಾಗಿದ್ದು, 2025–26ನೇ ಸಾಲಿನಲ್ಲಿ 66 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮೂಲಕ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳುತ್ತಾರೆ.</p>.<p>ಈ ವರ್ಷ 70 ಸೀಟ್ಗಳನ್ನು ನಿಗದಿಪಡಿಸಲಾಗಿದ್ದು, ಸಿಇಟಿ ಮೂಲಕ 54, ಐಸಿಆರ್ (ಭಾರತೀಯ ಕೃಷಿ ಸಂಶೋಧನಾ ಮಂಡಳಿ) 11 ಹಾಗೂ ಎನ್ಆರ್ಐ ಕೋಟಾದಲ್ಲಿ 5 ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು. ಕಾಲೇಜಿನಲ್ಲಿ ಒಟ್ಟು ಏಳು ವಿಭಾಗಗಳು ಇದ್ದು, ವಿಭಾಗಕ್ಕೆ ಒಂದರಂತೆ ಏಳು ಪ್ರಯೋಗಾಲಯಗಳು ಇವೆ. ಇವು 40 ವಿದ್ಯಾರ್ಥಿಗಳ ಸಾಮರ್ಥ್ಯ ಹೊಂದಿದ್ದು, ಕಳೆದ ವರ್ಷ ಎರಡು ಬ್ಯಾಚ್ಗಳಲ್ಲಿ ಪ್ರಯೋಗಾಲಯ ಪಾಠ ಮಾಡಬೇಕಾಯಿತು. ತರಗತಿ ಕೊಠಡಿಗಳ ಸಂಖ್ಯೆಯೂ ಕಡಿಮೆ ಇದ್ದು, ವೇಳಾಪಟ್ಟಿ ಹೊಂದಾಣಿಕೆ ಮಾಡುವುದೇ ದೊಡ್ಡ ಸವಾಲಾಗಿದೆ ಎನ್ನುತ್ತಾರೆ ಕಾಲೇಜಿನ ಪ್ರಾಧ್ಯಾಪಕರೊಬ್ಬರು.</p>.<p>‘ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಮೀನುಗಾರಿಕಾ ಕಾಲೇಜಿನ ಕೊರತೆಗಳ ಪಟ್ಟಿಯನ್ನು ವಿವಿ ಮೂಲಕ ಸರ್ಕಾರದ ಗಮನಕ್ಕೆ ತರಲಾಗಿದೆ. ಕಾಲೇಜಿನಿಂದ ₹25 ಕೋಟಿ ವೆಚ್ಚದ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಮೊದಲ ಹಂತದಲ್ಲಿ ₹5 ಕೋಟಿ ಮಂಜೂರು ಆಗಿತ್ತು, ಆದರೆ, ವರ್ಷ ಕಳೆದರೂ ಹಣ ಬಿಡುಗಡೆಯಾಗಿಲ್ಲ’ ಎಂದು ಅವರು ಹೇಳುತ್ತಾರೆ.</p>.<p>‘59 ಪ್ರಾಧ್ಯಾಪಕರ ಹುದ್ದೆ ಮಂಜೂರು ಇದ್ದು, 39 ಹುದ್ದೆಗಳು ಖಾಲಿ ಇವೆ. ಬೋಧಕೇತರ ಸಿಬ್ಬಂದಿ 137 ಹುದ್ದೆ ಮಂಜೂರು ಇದ್ದು, 98 ಹುದ್ದೆಗಳು ಖಾಲಿ ಇವೆ. ನಾಲ್ಕು ವರ್ಷಗಳ ಮೀನುಗಾರಿಕಾ ಪದವಿ ಕೋರ್ಸ್ಗೆ ಸೇರಲು ಪೈಪೋಟಿ ಇದೆ. ಆದರೆ, ಕಾಲೇಜಿನ ಕೊರತೆಗಳ ಕಾರಣಕ್ಕೆ ವಿದ್ಯಾರ್ಥಿಗಳು ನಿರುತ್ಸಾಹ ತೋರುವಂತೆ ಆಗಬಾರದು’ ಎನ್ನುತ್ತಾರೆ ಅವರು. </p>.<p>‘ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಮತ್ಸ್ಯಮೇಳದಲ್ಲಿ ಮೀನುಗಾರಿಕೆ ವಿಶ್ವವಿದ್ಯಾಲಯ ಪ್ರಾರಂಭಿಸಲು ಸಿದ್ಧ ಇರುವುದಾಗಿ ಮುಖ್ಯಮಂತ್ರಿ ಹೇಳಿದ್ದರು. ವಿವಿ ರಚನೆಗೆ ಕನಿಷ್ಠ ಎರಡು ಕಾಲೇಜುಗಳು ಇರಬೇಕು. ಪ್ರಸ್ತುತ ನಾಲ್ಕು ಸಂಶೋಧನೆ ಮತ್ತು ಮಾಹಿತಿ ಕೇಂದ್ರಗಳು ಇದ್ದು, ಈ ಸಂಖ್ಯೆ ಎಂಟಕ್ಕೆ ಏರಿಕೆಯಾಗಬೇಕು. ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ 70ರಿಂದ 100ಕ್ಕೆ ಹೆಚ್ಚಳ ಆಗಬೇಕು. ಇವೆಲ್ಲ ಸಾಧ್ಯವಾಗಲು, ಸರ್ಕಾರ ಇರುವ ಏಕೈಕ ಕಾಲೇಜಿಗೆ ಮೂಲ ಸೌಕರ್ಯ ಒದಗಿಸಬೇಕು’ ಎಂದು ಮತ್ತೊಬ್ಬ ಪ್ರಾಧ್ಯಾಪಕರು ಹೇಳುತ್ತಾರೆ. </p>.<h2>ಮೀನುಗಾರರ ಮಕ್ಕಳಿಗಿಲ್ಲ ಮೀಸಲಾತಿ</h2><p>ಕರಾವಳಿಯಲ್ಲಿರುವ ಮೀನುಗಾರಿಕಾ ಕಾಲೇಜಿನಲ್ಲಿ ಮೀನುಗಾರರ ಮಕ್ಕಳಿಗೆ ಶೇ 10ರಷ್ಟು ಸೀಟ್ ಕಾಯ್ದಿಡಬೇಕು ಎಂಬುದು ಮೀನುಗಾರರ ಆಗ್ರಹ. ಆದರೆ ಈ ವರ್ಷವೂ ಮೀನುಗಾರರ ಮಕ್ಕಳಿಗೆ ಮೀಸಲಾತಿಯ ನಿರೀಕ್ಷೆ ಹುಸಿಯಾಗಿದೆ. ಇರುವ 70 ಸೀಟ್ಗಳ ಹಂಚಿಕೆ ಈಗಾಗಲೇ ನಿಗದಿಯಾಗಿದೆ. ‘ಕೃಷಿಕರ ಮಕ್ಕಳು ಕೋರ್ಸ್ಗಳಿಗೆ ಪ್ರವೇಶ ಪಡೆಯುವಾಗ ಕೃಷಿ ಜಮೀನಿನ ದಾಖಲೆ ಸಲ್ಲಿಸುತ್ತಾರೆ. ಆದರೆ ಮೀನುಗಾರಿಕೆಯನ್ನೇ ನೆಚ್ಚಿಕೊಂಡಿರುವ ಕೃಷಿ ಜಮೀನುರಹಿತ ಮೀನುಗಾರರು ಬಹುಸಂಖ್ಯೆಯಲ್ಲಿರುವ ಕಾರಣ ಅವರ ಮಕ್ಕಳಿಗೆ ದಾಖಲೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಮೀನು ಕೃಷಿ ಮಾಡುವ ಪ್ರಮಾಣಪತ್ರ (ಆರ್ಡಿ ಸಂಖ್ಯೆ ಸಹಿತ) ಅಥವಾ ತಹಶೀಲ್ದಾರ್ ನೀಡುವ ಜಾತಿ ಪ್ರಮಾಣ ಪತ್ರ ಪರಿಗಣಿಸಿ ಮೀಸಲಾತಿ ಕಲ್ಪಿಸಬೇಕು’ ಎಂಬುದು ಮೀನುಗಾರರ ಮುಖಂಡರ ಒತ್ತಾಯ. </p>.<div><blockquote>ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು ಹೊಸ ಬ್ಯಾಚ್ ವಿದ್ಯಾರ್ಥಿಗಳು ಕಾಲೇಜಿಗೆ ಬಂದು ಸೇರುವಷ್ಟರಲ್ಲಿ ಪ್ರಾಧ್ಯಾಪಕರ ನೇಮಕವಾಗುವ ನಿರೀಕ್ಷೆಯಲ್ಲಿದ್ದೇವೆ. </blockquote><span class="attribution">-ಎಚ್.ಎನ್. ಆಂಜನೇಯಪ್ಪ, ಮೀನುಗಾರಿಕಾ ಕಾಲೇಜಿನ ಡೀನ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ಇಲ್ಲಿಯ ಎಕ್ಕೂರಿನಲ್ಲಿರುವ ರಾಜ್ಯದ ಏಕೈಕ ಮೀನುಗಾರಿಕಾ ಕಾಲೇಜು ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದು, ಹೊಸ ಬ್ಯಾಚ್ನಲ್ಲಿ ಬರುವ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಪ್ರಯೋಗಾಲಯ ವ್ಯವಸ್ಥೆಗೊಳಿಸುವುದೇ ಸವಾಲಾಗಿದೆ.</p>.<p>1969ರಲ್ಲಿ ಪ್ರಾರಂಭವಾದ ಕಾಲೇಜು 40 ವಿದ್ಯಾರ್ಥಿಗಳ ಪ್ರವೇಶ ಸಾಮರ್ಥ್ಯಕ್ಕೆ ಅನುಗುಣವಾಗಿ ವ್ಯವಸ್ಥೆಯನ್ನು ಹೊಂದಿದೆ. ಕಳೆದ ವರ್ಷದಿಂದ ಪ್ರವೇಶ ಸಂಖ್ಯೆ ಹೆಚ್ಚಳ ಮಾಡಲಾಗಿದ್ದು, 2025–26ನೇ ಸಾಲಿನಲ್ಲಿ 66 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮೂಲಕ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳುತ್ತಾರೆ.</p>.<p>ಈ ವರ್ಷ 70 ಸೀಟ್ಗಳನ್ನು ನಿಗದಿಪಡಿಸಲಾಗಿದ್ದು, ಸಿಇಟಿ ಮೂಲಕ 54, ಐಸಿಆರ್ (ಭಾರತೀಯ ಕೃಷಿ ಸಂಶೋಧನಾ ಮಂಡಳಿ) 11 ಹಾಗೂ ಎನ್ಆರ್ಐ ಕೋಟಾದಲ್ಲಿ 5 ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು. ಕಾಲೇಜಿನಲ್ಲಿ ಒಟ್ಟು ಏಳು ವಿಭಾಗಗಳು ಇದ್ದು, ವಿಭಾಗಕ್ಕೆ ಒಂದರಂತೆ ಏಳು ಪ್ರಯೋಗಾಲಯಗಳು ಇವೆ. ಇವು 40 ವಿದ್ಯಾರ್ಥಿಗಳ ಸಾಮರ್ಥ್ಯ ಹೊಂದಿದ್ದು, ಕಳೆದ ವರ್ಷ ಎರಡು ಬ್ಯಾಚ್ಗಳಲ್ಲಿ ಪ್ರಯೋಗಾಲಯ ಪಾಠ ಮಾಡಬೇಕಾಯಿತು. ತರಗತಿ ಕೊಠಡಿಗಳ ಸಂಖ್ಯೆಯೂ ಕಡಿಮೆ ಇದ್ದು, ವೇಳಾಪಟ್ಟಿ ಹೊಂದಾಣಿಕೆ ಮಾಡುವುದೇ ದೊಡ್ಡ ಸವಾಲಾಗಿದೆ ಎನ್ನುತ್ತಾರೆ ಕಾಲೇಜಿನ ಪ್ರಾಧ್ಯಾಪಕರೊಬ್ಬರು.</p>.<p>‘ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಮೀನುಗಾರಿಕಾ ಕಾಲೇಜಿನ ಕೊರತೆಗಳ ಪಟ್ಟಿಯನ್ನು ವಿವಿ ಮೂಲಕ ಸರ್ಕಾರದ ಗಮನಕ್ಕೆ ತರಲಾಗಿದೆ. ಕಾಲೇಜಿನಿಂದ ₹25 ಕೋಟಿ ವೆಚ್ಚದ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಮೊದಲ ಹಂತದಲ್ಲಿ ₹5 ಕೋಟಿ ಮಂಜೂರು ಆಗಿತ್ತು, ಆದರೆ, ವರ್ಷ ಕಳೆದರೂ ಹಣ ಬಿಡುಗಡೆಯಾಗಿಲ್ಲ’ ಎಂದು ಅವರು ಹೇಳುತ್ತಾರೆ.</p>.<p>‘59 ಪ್ರಾಧ್ಯಾಪಕರ ಹುದ್ದೆ ಮಂಜೂರು ಇದ್ದು, 39 ಹುದ್ದೆಗಳು ಖಾಲಿ ಇವೆ. ಬೋಧಕೇತರ ಸಿಬ್ಬಂದಿ 137 ಹುದ್ದೆ ಮಂಜೂರು ಇದ್ದು, 98 ಹುದ್ದೆಗಳು ಖಾಲಿ ಇವೆ. ನಾಲ್ಕು ವರ್ಷಗಳ ಮೀನುಗಾರಿಕಾ ಪದವಿ ಕೋರ್ಸ್ಗೆ ಸೇರಲು ಪೈಪೋಟಿ ಇದೆ. ಆದರೆ, ಕಾಲೇಜಿನ ಕೊರತೆಗಳ ಕಾರಣಕ್ಕೆ ವಿದ್ಯಾರ್ಥಿಗಳು ನಿರುತ್ಸಾಹ ತೋರುವಂತೆ ಆಗಬಾರದು’ ಎನ್ನುತ್ತಾರೆ ಅವರು. </p>.<p>‘ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಮತ್ಸ್ಯಮೇಳದಲ್ಲಿ ಮೀನುಗಾರಿಕೆ ವಿಶ್ವವಿದ್ಯಾಲಯ ಪ್ರಾರಂಭಿಸಲು ಸಿದ್ಧ ಇರುವುದಾಗಿ ಮುಖ್ಯಮಂತ್ರಿ ಹೇಳಿದ್ದರು. ವಿವಿ ರಚನೆಗೆ ಕನಿಷ್ಠ ಎರಡು ಕಾಲೇಜುಗಳು ಇರಬೇಕು. ಪ್ರಸ್ತುತ ನಾಲ್ಕು ಸಂಶೋಧನೆ ಮತ್ತು ಮಾಹಿತಿ ಕೇಂದ್ರಗಳು ಇದ್ದು, ಈ ಸಂಖ್ಯೆ ಎಂಟಕ್ಕೆ ಏರಿಕೆಯಾಗಬೇಕು. ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ 70ರಿಂದ 100ಕ್ಕೆ ಹೆಚ್ಚಳ ಆಗಬೇಕು. ಇವೆಲ್ಲ ಸಾಧ್ಯವಾಗಲು, ಸರ್ಕಾರ ಇರುವ ಏಕೈಕ ಕಾಲೇಜಿಗೆ ಮೂಲ ಸೌಕರ್ಯ ಒದಗಿಸಬೇಕು’ ಎಂದು ಮತ್ತೊಬ್ಬ ಪ್ರಾಧ್ಯಾಪಕರು ಹೇಳುತ್ತಾರೆ. </p>.<h2>ಮೀನುಗಾರರ ಮಕ್ಕಳಿಗಿಲ್ಲ ಮೀಸಲಾತಿ</h2><p>ಕರಾವಳಿಯಲ್ಲಿರುವ ಮೀನುಗಾರಿಕಾ ಕಾಲೇಜಿನಲ್ಲಿ ಮೀನುಗಾರರ ಮಕ್ಕಳಿಗೆ ಶೇ 10ರಷ್ಟು ಸೀಟ್ ಕಾಯ್ದಿಡಬೇಕು ಎಂಬುದು ಮೀನುಗಾರರ ಆಗ್ರಹ. ಆದರೆ ಈ ವರ್ಷವೂ ಮೀನುಗಾರರ ಮಕ್ಕಳಿಗೆ ಮೀಸಲಾತಿಯ ನಿರೀಕ್ಷೆ ಹುಸಿಯಾಗಿದೆ. ಇರುವ 70 ಸೀಟ್ಗಳ ಹಂಚಿಕೆ ಈಗಾಗಲೇ ನಿಗದಿಯಾಗಿದೆ. ‘ಕೃಷಿಕರ ಮಕ್ಕಳು ಕೋರ್ಸ್ಗಳಿಗೆ ಪ್ರವೇಶ ಪಡೆಯುವಾಗ ಕೃಷಿ ಜಮೀನಿನ ದಾಖಲೆ ಸಲ್ಲಿಸುತ್ತಾರೆ. ಆದರೆ ಮೀನುಗಾರಿಕೆಯನ್ನೇ ನೆಚ್ಚಿಕೊಂಡಿರುವ ಕೃಷಿ ಜಮೀನುರಹಿತ ಮೀನುಗಾರರು ಬಹುಸಂಖ್ಯೆಯಲ್ಲಿರುವ ಕಾರಣ ಅವರ ಮಕ್ಕಳಿಗೆ ದಾಖಲೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಮೀನು ಕೃಷಿ ಮಾಡುವ ಪ್ರಮಾಣಪತ್ರ (ಆರ್ಡಿ ಸಂಖ್ಯೆ ಸಹಿತ) ಅಥವಾ ತಹಶೀಲ್ದಾರ್ ನೀಡುವ ಜಾತಿ ಪ್ರಮಾಣ ಪತ್ರ ಪರಿಗಣಿಸಿ ಮೀಸಲಾತಿ ಕಲ್ಪಿಸಬೇಕು’ ಎಂಬುದು ಮೀನುಗಾರರ ಮುಖಂಡರ ಒತ್ತಾಯ. </p>.<div><blockquote>ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು ಹೊಸ ಬ್ಯಾಚ್ ವಿದ್ಯಾರ್ಥಿಗಳು ಕಾಲೇಜಿಗೆ ಬಂದು ಸೇರುವಷ್ಟರಲ್ಲಿ ಪ್ರಾಧ್ಯಾಪಕರ ನೇಮಕವಾಗುವ ನಿರೀಕ್ಷೆಯಲ್ಲಿದ್ದೇವೆ. </blockquote><span class="attribution">-ಎಚ್.ಎನ್. ಆಂಜನೇಯಪ್ಪ, ಮೀನುಗಾರಿಕಾ ಕಾಲೇಜಿನ ಡೀನ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>