<p>ಮಂಗಳೂರು: ಮಾದಕ ದ್ರವ್ಯ ವ್ಯಸನ ವಿರೋಧಿ ಜಾಗೃತಿ ರ್ಯಾಲಿಯನ್ನು ನಗರದ ಕಂಕನಾಡಿಯ ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಗಳ ಆಶ್ರಯದಲ್ಲಿ ಇದೇ 3 ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಫಾ.ಮೈಕೆಲ್ ಸಂತುಮಾಯೋರ್ ತಿಳಿಸಿದರು.</p>.<p>ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ‘ಬೆಳಿಗ್ಗೆ 7ಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಹಾಗೂ ಉದ್ಯಮಿ ಮೈಕೆಲ್ ಡಿಸೋಜ ರ್ಯಾಲಿಯನ್ನು ಉದ್ಘಾಟಿಸುವರು. ಎಫ್ಎಂಸಿಐ ಚಾಪೆಲ್, ಫಾದರ್ ಮುಲ್ಲರ್ ವೃತ್, ಕರಾವಳಿ ವೃತ್ತ, ಮಹಾವೀರ ವೃತ್ತ (ಪಂಪ್ವೆಲ್) , ಫಾದರ್ ಮುಲ್ಲರ್ ಸಮಾವೇಶ ಕೇಂದ್ರ ಮೂಲಕ ಸಾಗುವ ರ್ಯಾಲಿ ಫಾದರ್ ಮುಲ್ಲರ್ ಮೈದಾನದವರೆಗೆ ರ್ಯಾಲಿ ನಡೆಯಲಿದೆ.</p>.<p>ಸಮಾರೋಪದಲ್ಲಿ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಡಿಸಿಪಿ ಮಿಥುನ್ ಎಚ್.ಎನ್., ಸಿಸಿಆರ್ಬಿ ಎಸಿಪಿ ಗೀತಾ ಕುಲಕರ್ಣಿ ಹಾಗೂ ಎಸಿಪಿ ರವೀಶ್ ನಾಯ್ಕ್ ಭಾಗವಹಿಸಲಿದ್ದಾರೆ. ಎಫ್ಎಂಸಿಐನ ಕಾಲೇಜುಗಳ ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿ ಸುಮಾರು 3 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ’ ಎಂದರು.</p>.<p>ಸುದ್ದಿಗೋಷ್ಠಿಯಲ್ಲಿ ಎಫ್ಎಂಸಿಒಪಿ ಪ್ರಾಂಶುಪಾಲ ಪ್ರೊ. ಛರಿಷ್ಮಾ ಡಿಸಿಲ್ವ, ಎಫ್ಎಂಸಿಒಎಎಚ್ಎಸ್ ಪ್ರಾಂಶುಪಾಲ ಡಾ.ಶಿವಶಂಕರ ಎ.ಆರ್, ಎಫ್ಎಂಸಿಯ ಸಂಪರ್ಕಾಧಿಕಾರಿ ಕೆಲ್ವಿನ್ ಪಾಯಸ್, ಎಫ್ಎಂಎಂಸಿಎಚ್ ರೋಗಪತ್ತೆ ವಿಜ್ಞಾನ ವಿಭಾಗದ ಡಾ.ಸುಯೆಲ್ಲನ್ ಡಿಸೋಜ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260603-29-895428497</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಗಳೂರು: ಮಾದಕ ದ್ರವ್ಯ ವ್ಯಸನ ವಿರೋಧಿ ಜಾಗೃತಿ ರ್ಯಾಲಿಯನ್ನು ನಗರದ ಕಂಕನಾಡಿಯ ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಗಳ ಆಶ್ರಯದಲ್ಲಿ ಇದೇ 3 ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಫಾ.ಮೈಕೆಲ್ ಸಂತುಮಾಯೋರ್ ತಿಳಿಸಿದರು.</p>.<p>ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ‘ಬೆಳಿಗ್ಗೆ 7ಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಹಾಗೂ ಉದ್ಯಮಿ ಮೈಕೆಲ್ ಡಿಸೋಜ ರ್ಯಾಲಿಯನ್ನು ಉದ್ಘಾಟಿಸುವರು. ಎಫ್ಎಂಸಿಐ ಚಾಪೆಲ್, ಫಾದರ್ ಮುಲ್ಲರ್ ವೃತ್, ಕರಾವಳಿ ವೃತ್ತ, ಮಹಾವೀರ ವೃತ್ತ (ಪಂಪ್ವೆಲ್) , ಫಾದರ್ ಮುಲ್ಲರ್ ಸಮಾವೇಶ ಕೇಂದ್ರ ಮೂಲಕ ಸಾಗುವ ರ್ಯಾಲಿ ಫಾದರ್ ಮುಲ್ಲರ್ ಮೈದಾನದವರೆಗೆ ರ್ಯಾಲಿ ನಡೆಯಲಿದೆ.</p>.<p>ಸಮಾರೋಪದಲ್ಲಿ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಡಿಸಿಪಿ ಮಿಥುನ್ ಎಚ್.ಎನ್., ಸಿಸಿಆರ್ಬಿ ಎಸಿಪಿ ಗೀತಾ ಕುಲಕರ್ಣಿ ಹಾಗೂ ಎಸಿಪಿ ರವೀಶ್ ನಾಯ್ಕ್ ಭಾಗವಹಿಸಲಿದ್ದಾರೆ. ಎಫ್ಎಂಸಿಐನ ಕಾಲೇಜುಗಳ ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿ ಸುಮಾರು 3 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ’ ಎಂದರು.</p>.<p>ಸುದ್ದಿಗೋಷ್ಠಿಯಲ್ಲಿ ಎಫ್ಎಂಸಿಒಪಿ ಪ್ರಾಂಶುಪಾಲ ಪ್ರೊ. ಛರಿಷ್ಮಾ ಡಿಸಿಲ್ವ, ಎಫ್ಎಂಸಿಒಎಎಚ್ಎಸ್ ಪ್ರಾಂಶುಪಾಲ ಡಾ.ಶಿವಶಂಕರ ಎ.ಆರ್, ಎಫ್ಎಂಸಿಯ ಸಂಪರ್ಕಾಧಿಕಾರಿ ಕೆಲ್ವಿನ್ ಪಾಯಸ್, ಎಫ್ಎಂಎಂಸಿಎಚ್ ರೋಗಪತ್ತೆ ವಿಜ್ಞಾನ ವಿಭಾಗದ ಡಾ.ಸುಯೆಲ್ಲನ್ ಡಿಸೋಜ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260603-29-895428497</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>