<p>ಮಂಗಳೂರು: ಕಲಾಭಿ ವತಿಯಿಂದ ರಂಗ ಅಧ್ಯಯನ ಕೇಂದ್ರ, ಸೇಂಟ್ ಅಲೋಶಿಯಸ್ ಸಹಯೋಗದಲ್ಲಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ರಂಗೋತ್ಸವ ‘ಕಿಶೋರ ರಂಗಪಯಣ 2026’ ಸಮಾರೋಪಗೊಂಡಿತು.</p>.<p>‘ಮಂಥನ – ಶಿಕ್ಷಣ, ಕಲೆ ಮತ್ತು ಮಗು’ ವಿಷಯದ ಕುರಿತು ಸಂವಾದದಲ್ಲಿ ಇಂದಿನ ಪೀಳಿಗೆ, ಪೋಷಕರ ಪಾತ್ರ ಹಾಗೂ ಶಿಕ್ಷಣ ವ್ಯವಸ್ಥೆಯ ಬದಲಾವಣೆಗಳ ಕುರಿತು ಚರ್ಚೆ ನಡೆಯಿತು.</p>.<p>ಸಂವಾದದಲ್ಲಿ ರಂಗಕರ್ಮಿ, ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲ್, ಮೂಡುಬಿದಿರೆಯ ‘ಮೈಟ್’ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿ ದೀಪ್ತಿ ಶೆಟ್ಟಿ, ತರಬೇತುದಾರ ಮಹೇಶ್ ಕಾಮತ್, ಶಿಕ್ಷಣ ತಜ್ಞೆ ಸಚಿತಾ ನಂದಗೋಪಾಲ್ ಅನುಭವಗಳನ್ನು ಹಂಚಿಕೊಂಡರು. ಯೂಟ್ಯೂಬರ್ ಶರಣ್ ಚಿಲಿಂಬಿ ಸಂವಾದವನ್ನು ಸಂಯೋಜಿಸಿದರು.</p>.<p>ಪಠ್ಯೇತರ ಚಟುವಟಿಕೆಯ ಮಹತ್ವ, ರಂಗಕಲೆಯು ಮಕ್ಕಳ ಆತ್ಮವಿಶ್ವಾಸ, ಸೃಜನಶೀಲತೆ ಮತ್ತು ಭಾವನಾತ್ಮಕ ಬೆಳವಣಿಗೆಗೆ ಹೇಗೆ ಪೂರಕವಾಗುತ್ತದೆ ಎಂಬುದನ್ನು ತಿಳಿಸಲಾಯಿತು.</p>.<p>ಕಾರ್ಯಕ್ರಮದ ಸಮಾರೋಪವಾಗಿ ‘ಐ ಶಭಾಶ್’ ನಾಟಕವನ್ನು ಚರಿತ್ ಸುವರ್ಣ ಅವರ ನಿರ್ದೇಶನದಲ್ಲಿ ಮಕ್ಕಳಿಂದ ಪ್ರದರ್ಶಿಸಲಾಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260507-29-1986794940</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಗಳೂರು: ಕಲಾಭಿ ವತಿಯಿಂದ ರಂಗ ಅಧ್ಯಯನ ಕೇಂದ್ರ, ಸೇಂಟ್ ಅಲೋಶಿಯಸ್ ಸಹಯೋಗದಲ್ಲಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ರಂಗೋತ್ಸವ ‘ಕಿಶೋರ ರಂಗಪಯಣ 2026’ ಸಮಾರೋಪಗೊಂಡಿತು.</p>.<p>‘ಮಂಥನ – ಶಿಕ್ಷಣ, ಕಲೆ ಮತ್ತು ಮಗು’ ವಿಷಯದ ಕುರಿತು ಸಂವಾದದಲ್ಲಿ ಇಂದಿನ ಪೀಳಿಗೆ, ಪೋಷಕರ ಪಾತ್ರ ಹಾಗೂ ಶಿಕ್ಷಣ ವ್ಯವಸ್ಥೆಯ ಬದಲಾವಣೆಗಳ ಕುರಿತು ಚರ್ಚೆ ನಡೆಯಿತು.</p>.<p>ಸಂವಾದದಲ್ಲಿ ರಂಗಕರ್ಮಿ, ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲ್, ಮೂಡುಬಿದಿರೆಯ ‘ಮೈಟ್’ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿ ದೀಪ್ತಿ ಶೆಟ್ಟಿ, ತರಬೇತುದಾರ ಮಹೇಶ್ ಕಾಮತ್, ಶಿಕ್ಷಣ ತಜ್ಞೆ ಸಚಿತಾ ನಂದಗೋಪಾಲ್ ಅನುಭವಗಳನ್ನು ಹಂಚಿಕೊಂಡರು. ಯೂಟ್ಯೂಬರ್ ಶರಣ್ ಚಿಲಿಂಬಿ ಸಂವಾದವನ್ನು ಸಂಯೋಜಿಸಿದರು.</p>.<p>ಪಠ್ಯೇತರ ಚಟುವಟಿಕೆಯ ಮಹತ್ವ, ರಂಗಕಲೆಯು ಮಕ್ಕಳ ಆತ್ಮವಿಶ್ವಾಸ, ಸೃಜನಶೀಲತೆ ಮತ್ತು ಭಾವನಾತ್ಮಕ ಬೆಳವಣಿಗೆಗೆ ಹೇಗೆ ಪೂರಕವಾಗುತ್ತದೆ ಎಂಬುದನ್ನು ತಿಳಿಸಲಾಯಿತು.</p>.<p>ಕಾರ್ಯಕ್ರಮದ ಸಮಾರೋಪವಾಗಿ ‘ಐ ಶಭಾಶ್’ ನಾಟಕವನ್ನು ಚರಿತ್ ಸುವರ್ಣ ಅವರ ನಿರ್ದೇಶನದಲ್ಲಿ ಮಕ್ಕಳಿಂದ ಪ್ರದರ್ಶಿಸಲಾಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260507-29-1986794940</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>