<p>ಮಂಗಳೂರು: ಕಳೆದ ಆರ್ಥಿಕ ವರ್ಷದಲ್ಲಿ ಮಹಾನಗರಪಾಲಿಕೆ ತೆರಿಗೆ ಸಂಗ್ರಹದಲ್ಲಿ ಗುರಿ ಮೀರಿದ, ಈ ವರೆಗಿನ ಅತ್ಯಧಿಕ ಮೊತ್ತ ಸಂಗ್ರಹದ ಸಾಧನೆ ಮಾಡಿದೆ ಎಂದು ಆಯುಕ್ತ ರವಿಚಂದ್ರ ನಾಯಕ್ ತಿಳಿಸಿದರು.</p>.<p>ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 2025– 26ನೇ ಸಾಲಿನಲ್ಲಿ ₹112 ಕೋಟಿ ಸಂಗ್ರಹಿಸುವ ಗುರಿ ಇತ್ತು. ₹149.68 ಕೋಟಿ ಸಂಗ್ರಹವಾಗಿದೆ. 2024– 25ನೇ ಸಾಲಿನಲ್ಲಿ ₹137 ಕೋಟಿ ಮತ್ತು ಅದರ ಹಿಂದಿನ ಸಾಲಿನಲ್ಲಿ ₹117 ಕೋಟಿ ಮಾತ್ರ ಸಂಗ್ರಹವಾಗಿತ್ತು ಎಂದು ಹೇಳಿದರು.</p>.<p>ಅತ್ತಾವರ, ಪದವು ಮತ್ತು ಹಂಪನಕಟ್ಟೆ ವಾರ್ಡ್ಗಳಲ್ಲಿ ಮಹಾನಗರಪಾಲಿಕೆ ಪ್ರಯೋಗಿಕವಾಗಿ ಸರ್ವೆ ಮಾಡಿ, ಆಸ್ತಿಗಳ ಬಳಿಗೆ ಭೇಟಿ ನೀಡಿ ತೆರಿಗೆ ಸಂಗ್ರಹಿಸಲಾಗಿದೆ. ಶೇಕಡ 50ರಷ್ಟು ಆಸ್ತಿಗಳಲ್ಲಿ ಮಾತ್ರ ಸರ್ವೆ ನಡೆಸಲು ಸಾಧ್ಯವಾಗಿತ್ತು. ಆದರೂ ₹55.33 ಲಕ್ಷ ಸಂಗ್ರಹಿಸಲಾಗಿದೆ. ಹೀಗಾಗಿ ಈ ಪ್ರಯೋಗವನ್ನು ಎಲ್ಲ ವಾರ್ಡ್ಗಳಿಗೂ ವಿಸ್ತರಿಸಲು ಚಿಂತನೆ ನಡೆಸಲಾಗಿದೆ ಎಂದು ಅವರು ವಿವರಿಸಿದರು.</p>.<p>ಏ.30ರ ಒಳಗೆ ಉಳಿಕೆ ತೆರಿಗೆ ಪಾವತಿಸಲು ಕಟ್ಟಡ ಮಾಲೀಕರು ಮುಂದೆ ಬಂದರೆ ಶೇಕಡ 5ರಷ್ಟು ರಿಯಾಯಿತಿ ಸಿಗಲಿದೆ ಎಂದ ಅವರು ಪಾಲಿಕೆಯ ವಾಣಿಜ್ಯ ಮಳಿಗೆಗಳನ್ನು ಮತ್ತೆ ಹರಾಜು ಹಾಕಲು ಮುಂದಾಗಿದ್ದು 2002ರಲ್ಲಿ ₹17.96 ಲಕ್ಷ ಮೊತ್ತಕ್ಕೆ ಹರಾಜಾಗಿದ್ದ ಲಾಲ್ಬಾಗ್ನಲ್ಲಿರುವ ಕಟ್ಟಡ ಈ ಬಾರಿ ₹71.43 ಲಕ್ಷಕ್ಕೆ ಹರಾಜಾಗಿದೆ ಎಂದರು. ಉಪ ಆಯುಕ್ತೆ ಅಕ್ಷತಾ ಪಾಲ್ಗೊಂಡಿದ್ದರು.</p>.<p>ಜಾಹೀರಾತು ಫಲಕಗಳಿಗೆ ಕ್ಯುಆರ್ ಕೋಡ್: ಮಹಾನಗರಪಾಲಿಕೆಯ ಆದಾಯ ಹೆಚ್ಚಿಸಲು ಜಾಹೀರಾತುಗಳ ಮೇಲೆ ಗಮನ ನೀಡಲಾಗುತ್ತಿದ್ದು ಅನುಮತಿ ದುರ್ಬಳಕೆ ಆಗದಂತೆ ಮಾಡಲು ಇನ್ನು ಮುಂದೆ ಜಾಹೀರಾತು ಫಲಕಗಳ ಮೇಲೆ ಕ್ಯುಆರ್ ಕೋಡ್ ಬಳಸಲಾಗುವುದು ಎಂದು ರವಿಚಂದ್ರ ನಾಯಕ್ ತಿಳಿಸಿದರು. ಇದಕ್ಕಾಗಿ ಸಾಫ್ಟ್ವೇರ್ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ವಿವರಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260411-29-121809580</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಗಳೂರು: ಕಳೆದ ಆರ್ಥಿಕ ವರ್ಷದಲ್ಲಿ ಮಹಾನಗರಪಾಲಿಕೆ ತೆರಿಗೆ ಸಂಗ್ರಹದಲ್ಲಿ ಗುರಿ ಮೀರಿದ, ಈ ವರೆಗಿನ ಅತ್ಯಧಿಕ ಮೊತ್ತ ಸಂಗ್ರಹದ ಸಾಧನೆ ಮಾಡಿದೆ ಎಂದು ಆಯುಕ್ತ ರವಿಚಂದ್ರ ನಾಯಕ್ ತಿಳಿಸಿದರು.</p>.<p>ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 2025– 26ನೇ ಸಾಲಿನಲ್ಲಿ ₹112 ಕೋಟಿ ಸಂಗ್ರಹಿಸುವ ಗುರಿ ಇತ್ತು. ₹149.68 ಕೋಟಿ ಸಂಗ್ರಹವಾಗಿದೆ. 2024– 25ನೇ ಸಾಲಿನಲ್ಲಿ ₹137 ಕೋಟಿ ಮತ್ತು ಅದರ ಹಿಂದಿನ ಸಾಲಿನಲ್ಲಿ ₹117 ಕೋಟಿ ಮಾತ್ರ ಸಂಗ್ರಹವಾಗಿತ್ತು ಎಂದು ಹೇಳಿದರು.</p>.<p>ಅತ್ತಾವರ, ಪದವು ಮತ್ತು ಹಂಪನಕಟ್ಟೆ ವಾರ್ಡ್ಗಳಲ್ಲಿ ಮಹಾನಗರಪಾಲಿಕೆ ಪ್ರಯೋಗಿಕವಾಗಿ ಸರ್ವೆ ಮಾಡಿ, ಆಸ್ತಿಗಳ ಬಳಿಗೆ ಭೇಟಿ ನೀಡಿ ತೆರಿಗೆ ಸಂಗ್ರಹಿಸಲಾಗಿದೆ. ಶೇಕಡ 50ರಷ್ಟು ಆಸ್ತಿಗಳಲ್ಲಿ ಮಾತ್ರ ಸರ್ವೆ ನಡೆಸಲು ಸಾಧ್ಯವಾಗಿತ್ತು. ಆದರೂ ₹55.33 ಲಕ್ಷ ಸಂಗ್ರಹಿಸಲಾಗಿದೆ. ಹೀಗಾಗಿ ಈ ಪ್ರಯೋಗವನ್ನು ಎಲ್ಲ ವಾರ್ಡ್ಗಳಿಗೂ ವಿಸ್ತರಿಸಲು ಚಿಂತನೆ ನಡೆಸಲಾಗಿದೆ ಎಂದು ಅವರು ವಿವರಿಸಿದರು.</p>.<p>ಏ.30ರ ಒಳಗೆ ಉಳಿಕೆ ತೆರಿಗೆ ಪಾವತಿಸಲು ಕಟ್ಟಡ ಮಾಲೀಕರು ಮುಂದೆ ಬಂದರೆ ಶೇಕಡ 5ರಷ್ಟು ರಿಯಾಯಿತಿ ಸಿಗಲಿದೆ ಎಂದ ಅವರು ಪಾಲಿಕೆಯ ವಾಣಿಜ್ಯ ಮಳಿಗೆಗಳನ್ನು ಮತ್ತೆ ಹರಾಜು ಹಾಕಲು ಮುಂದಾಗಿದ್ದು 2002ರಲ್ಲಿ ₹17.96 ಲಕ್ಷ ಮೊತ್ತಕ್ಕೆ ಹರಾಜಾಗಿದ್ದ ಲಾಲ್ಬಾಗ್ನಲ್ಲಿರುವ ಕಟ್ಟಡ ಈ ಬಾರಿ ₹71.43 ಲಕ್ಷಕ್ಕೆ ಹರಾಜಾಗಿದೆ ಎಂದರು. ಉಪ ಆಯುಕ್ತೆ ಅಕ್ಷತಾ ಪಾಲ್ಗೊಂಡಿದ್ದರು.</p>.<p>ಜಾಹೀರಾತು ಫಲಕಗಳಿಗೆ ಕ್ಯುಆರ್ ಕೋಡ್: ಮಹಾನಗರಪಾಲಿಕೆಯ ಆದಾಯ ಹೆಚ್ಚಿಸಲು ಜಾಹೀರಾತುಗಳ ಮೇಲೆ ಗಮನ ನೀಡಲಾಗುತ್ತಿದ್ದು ಅನುಮತಿ ದುರ್ಬಳಕೆ ಆಗದಂತೆ ಮಾಡಲು ಇನ್ನು ಮುಂದೆ ಜಾಹೀರಾತು ಫಲಕಗಳ ಮೇಲೆ ಕ್ಯುಆರ್ ಕೋಡ್ ಬಳಸಲಾಗುವುದು ಎಂದು ರವಿಚಂದ್ರ ನಾಯಕ್ ತಿಳಿಸಿದರು. ಇದಕ್ಕಾಗಿ ಸಾಫ್ಟ್ವೇರ್ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ವಿವರಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260411-29-121809580</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>