<p>ಮಂಗಳೂರು: ಮಾರುಕಟ್ಟೆಯಲ್ಲಿ ತರಕಾರಿ ದರ ಏರಿಕೆಯಾಗಿದ್ದು, ಬೀನ್ಸ್ ಕೆ.ಜಿ.ಯೊಂದಕ್ಕೆ ₹130ರಿಂದ ₹160ರವರೆಗೆ ತಲುಪಿದೆ. ಕ್ಯಾರೆಟ್ ಕೆ.ಜಿ.ಗೆ ₹70ರಿಂದ ₹80 ಹಾಗೂ ಟೊಮೆಟೊ ಕೆ.ಜಿ.ಗೆ ₹45–₹50ಕ್ಕೆ ಮಾರಾಟವಾಗುತ್ತಿದೆ.</p>.<p>ಅಲಸಂಡೆ ಕೆ.ಜಿ.ಗೆ ₹75–₹80, ಹಸಿ ಮೆಣಸು ₹60–₹65, ದಪ್ಪ ಮೆಣಸು ₹70, ಹೀರೆಕಾಯಿ ₹65–₹70, ಹೂಕೋಸು ₹60–₹65, ತೊಂಡೆಕಾಯಿ ₹60–₹70, ಬೆಂಡೆಕಾಯಿ ₹60–₹65, ಮೂಲಂಗಿ ₹50, ಮುಳ್ಳು ಸೌತೆ ₹40, ಬೆಳ್ಳುಳ್ಳಿ ₹170–₹180, ನುಗ್ಗೆಕಾಯಿ ₹80–₹90, ಈರುಳ್ಳಿ ₹35–₹40, ಬೀಟರೂಟ್ ₹45–₹50 ದರದಲ್ಲಿ ಮಾರಾಟವಾಗುತ್ತಿದೆ.</p>.<p>ಬೆಳ್ಳುಳ್ಳಿ ಕೆ.ಜಿ.ಗೆ ₹₹180–₹190 ಇದ್ದರೆ, ಶುಂಠಿ ಕೆ.ಜಿ.ಗೆ ₹140–₹150 ಇದೆ. ಬೇಸಿಗೆಯಲ್ಲಿ ಬೇಡಿಕೆಯಲ್ಲಿರುವ ಲಿಂಬೆಹಣ್ಣು ಕೆ.ಜಿ.ಗೆ ₹150–₹160 ದರವಿದೆ. ತೆಂಗಿನಕಾಯಿ ಕೆ.ಜಿ.ಗೆ ₹80–₹90ರ ದರದಲ್ಲಿ ಮಾರಾಟವಾಗುತ್ತಿದೆ.</p>.<p>‘ಬಿರು ಬಿಸಿಲಿನ ಕಾರಣಕ್ಕೆ ತರಕಾರಿ ಬೆಳೆ ಕಡಿಮೆಯಾಗಿದ್ದು, ಒಂದು ವಾರದಿಂದ ಎಲ್ಲ ತರಕಾರಿಗಳ ಬೆಲೆಯೂ ಹೆಚ್ಚಳವಾಗಿದ್ದು, ಬೀನ್ಸ್, ಕ್ಯಾರೆಟ್, ಟೊಮೆಟೊ ಕೆ.ಜಿ.ಯೊಂದಕ್ಕೆ ₹20ರಿಂದ ₹30ರಷ್ಟು ಹೆಚ್ಚಾಗಿದೆ’ ಎನ್ನುತ್ತಾರೆ ತರಕಾರಿ ವ್ಯಾಪಾರಿ ಸುರೇಶ್.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-29-1649703920</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಗಳೂರು: ಮಾರುಕಟ್ಟೆಯಲ್ಲಿ ತರಕಾರಿ ದರ ಏರಿಕೆಯಾಗಿದ್ದು, ಬೀನ್ಸ್ ಕೆ.ಜಿ.ಯೊಂದಕ್ಕೆ ₹130ರಿಂದ ₹160ರವರೆಗೆ ತಲುಪಿದೆ. ಕ್ಯಾರೆಟ್ ಕೆ.ಜಿ.ಗೆ ₹70ರಿಂದ ₹80 ಹಾಗೂ ಟೊಮೆಟೊ ಕೆ.ಜಿ.ಗೆ ₹45–₹50ಕ್ಕೆ ಮಾರಾಟವಾಗುತ್ತಿದೆ.</p>.<p>ಅಲಸಂಡೆ ಕೆ.ಜಿ.ಗೆ ₹75–₹80, ಹಸಿ ಮೆಣಸು ₹60–₹65, ದಪ್ಪ ಮೆಣಸು ₹70, ಹೀರೆಕಾಯಿ ₹65–₹70, ಹೂಕೋಸು ₹60–₹65, ತೊಂಡೆಕಾಯಿ ₹60–₹70, ಬೆಂಡೆಕಾಯಿ ₹60–₹65, ಮೂಲಂಗಿ ₹50, ಮುಳ್ಳು ಸೌತೆ ₹40, ಬೆಳ್ಳುಳ್ಳಿ ₹170–₹180, ನುಗ್ಗೆಕಾಯಿ ₹80–₹90, ಈರುಳ್ಳಿ ₹35–₹40, ಬೀಟರೂಟ್ ₹45–₹50 ದರದಲ್ಲಿ ಮಾರಾಟವಾಗುತ್ತಿದೆ.</p>.<p>ಬೆಳ್ಳುಳ್ಳಿ ಕೆ.ಜಿ.ಗೆ ₹₹180–₹190 ಇದ್ದರೆ, ಶುಂಠಿ ಕೆ.ಜಿ.ಗೆ ₹140–₹150 ಇದೆ. ಬೇಸಿಗೆಯಲ್ಲಿ ಬೇಡಿಕೆಯಲ್ಲಿರುವ ಲಿಂಬೆಹಣ್ಣು ಕೆ.ಜಿ.ಗೆ ₹150–₹160 ದರವಿದೆ. ತೆಂಗಿನಕಾಯಿ ಕೆ.ಜಿ.ಗೆ ₹80–₹90ರ ದರದಲ್ಲಿ ಮಾರಾಟವಾಗುತ್ತಿದೆ.</p>.<p>‘ಬಿರು ಬಿಸಿಲಿನ ಕಾರಣಕ್ಕೆ ತರಕಾರಿ ಬೆಳೆ ಕಡಿಮೆಯಾಗಿದ್ದು, ಒಂದು ವಾರದಿಂದ ಎಲ್ಲ ತರಕಾರಿಗಳ ಬೆಲೆಯೂ ಹೆಚ್ಚಳವಾಗಿದ್ದು, ಬೀನ್ಸ್, ಕ್ಯಾರೆಟ್, ಟೊಮೆಟೊ ಕೆ.ಜಿ.ಯೊಂದಕ್ಕೆ ₹20ರಿಂದ ₹30ರಷ್ಟು ಹೆಚ್ಚಾಗಿದೆ’ ಎನ್ನುತ್ತಾರೆ ತರಕಾರಿ ವ್ಯಾಪಾರಿ ಸುರೇಶ್.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-29-1649703920</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>