<p><strong>ಮಂಗಳೂರು</strong>: ‘ಹೆಣ್ಣು ಇಲ್ಲದ ಜಗತ್ತನ್ನು ಊಹಿಸಲು ಸಾಧ್ಯವಿಲ್ಲ. ಹೆಣ್ಣು ಜಗತ್ತಿನ ಅವಿಭಾಜ್ಯ ಅಂಗ. ಆಕೆ ಗಂಡಿಗೆ ಜನ್ಮ ನೀಡಿ ವ್ಯಕ್ತಿತ್ವ ರೂಪಿಸುತ್ತಾಳೆ. ನಾನಾ ರೀತಿಯ ಪಾತ್ರ ವಹಿಸುವ ಹೆಣ್ಣಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್. ಆರ್. ತಿಮ್ಮಯ್ಯ ಹೇಳಿದರು.</p>.<p>ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಕಾಲೇಜಿನ ಮಹಿಳಾ ವಿಭಾಗ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಘೋರ್ ಗ್ರೂಪ್ಸ್ ಹಾಗೂ ಆಂತರಿಕ ಗುಣಮಟ್ಟ ಖಾತ್ರಿ ಕೋಶದ ಸಹಯೋಗದಲ್ಲಿ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಯಾವುದೇ ಸರ್ಕಾರಿ ಸಂಸ್ಥೆ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಹತ್ತು ಜನಕ್ಕಿಂತ ಹೆಚ್ಚಿನ ಮಹಿಳೆಯರು ಕೆಲಸದಲ್ಲಿ ಇದ್ದಲ್ಲಿ ಅಲ್ಲಿ ಕಡ್ಡಾಯವಾಗಿ ಆಂತರಿಕ ದೂರು ಸಮಿತಿ ರಚಿಸಬೇಕು. ಮಹಿಳೆ ಲೈಂಗಿಕ ಕಿರುಕುಳಕ್ಕೆ ಒಳಗಾದರೆ ಈ ಸಮಿತಿಗೆ ದೂರು ಸಲ್ಲಿಸಬಹುದು. ಲೈಂಗಿಕ ಕಿರುಕುಳ ದೈಹಿಕವಾಗಿ ಮಾತ್ರ ಇರಬೇಕೆಂದಿಲ್ಲ. ಜಾಲತಾಣಗಳ ಮೂಲಕ ಪ್ರಚೋದನಾತ್ಮಕ ಚಿತ್ರ ಕಳಿಸುವುದು ಅಥವಾ ಸಂದೇಶ ಕಳುಹಿಸುವುದು, ಕೆಟ್ಟನೋಟ ಇವೆಲ್ಲವೂ ಲೈಂಗಿಕ ಕಿರುಕುಳದ ಭಾಗವೇ ಆಗಿವೆ. ಇಂತಹ ವಿಷಯಗಳ ಕುರಿತು ದೂರು ಸಲ್ಲಿಸುವ ಮೂಲಕ ದೌರ್ಜನ್ಯಕ್ಕೆ ತಡೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.</p>.<p>ಮಹಿಳೆಯರಲ್ಲಿ ಹೆಚ್ಚಾಗುತ್ತಿರುವ ಕ್ಯಾನ್ಸರ್ ರೋಗ ತಡೆಗಟ್ಟಲು ಕೇಂದ್ರ ಸರ್ಕಾರ 14 ವರ್ಷ ಮೇಲ್ಪಟ್ಟ ಹೆಣ್ಣು ಮಕ್ಕಳಿಗೆ ಉಚಿತವಾಗಿ ಎಚ್ಪಿವಿ ಲಸಿಕೆ ನೀಡುತ್ತಿದ್ದು, ಈ ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.</p>.<p>ಮಹಿಳಾ ವಿಭಾಗದ ಸಹ ನಿರ್ದೇಶಕಿ ಪ್ರೊ. ಸುಭಾಷಿಣಿ ಶ್ರೀವತ್ಸ, ಗಂಡು, ಹೆಣ್ಣು ಇಬ್ಬರೂ ಸಮಾಜದ ಕಣ್ಣುಗಳಿದ್ದ ಹಾಗೆ. ಕುಟುಂಬ ಸೇರಿದಂತೆ ಸಮಾಜದ ಸಮತೋಲನಕ್ಕೆ ಇಬ್ಬರ ಪಾತ್ರವೂ ಪ್ರಮುಖವಾಗಿರುತ್ತದೆ. ಸಮಾಜದಲ್ಲಿ ಪ್ರಕೃತಿ ಮತ್ತು ಪುರುಷ ಎರಡು ಕೊಂಡಿಗಳು ಒಟ್ಟಿಗೆ ಸಾಗಬೇಕು ಎಂದರು.</p>.<p>ಅಘೋರ ಗ್ರೂಪ್ಸ್, ಕಾಲೇಜಿಗೆ ಇನ್ಸಿನರೇಟರ್ ಯಂತ್ರವನ್ನು ಕೊಡುಗೆಯಾಗಿ ನೀಡಿತು. ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆ ಹೇಮಾ ಮಲ್ಯ, ಕಾಲೇಜಿನ ಸೂಕ್ಷ್ಮಾಣು ಜೀವವಿಜ್ಞಾನ ವಿಭಾಗದ ಮುಖ್ಯಸ್ಥೆ ಭಾರತಿ ಪ್ರಕಾಶ್, ಮಹಿಳಾ ವೇದಿಕೆ ಸಂಯೋಜಕಿ ಪ್ರೊ. ನಾಗರತ್ನಾ ರಾವ್, ಎಸ್.ಎಲ್. ಶೇಟ್ ವಜ್ರಾಭರಣ ಅಂಗಡಿಯ ದೀಪ್ತಿ ಶರತ್ ಶೇಟ್ ಹಾಗೂ ದಿವ್ಯಾ ಶೇಟ್ ಉಪಸ್ಥಿತರಿದ್ದರು.</p>.<p>ಸರ್ಕಾರಿ ಕಚೇರಿಗಳಲ್ಲಿ ಆಂತರಿಕ ದೂರು ಸಮಿತಿ ರಚನೆ ಹೆಣ್ಣು ಮಕ್ಕಳಿಗೆ ಉಚಿತವಾಗಿ ಎಚ್ಪಿವಿ ಲಸಿಕೆ ಸಮಾಜದ ಸಮತೋಲನಕ್ಕೆ ಹೆಣ್ಣು– ಗಂಡಿನ ಪಾತ್ರ ಮುಖ್ಯ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ‘ಹೆಣ್ಣು ಇಲ್ಲದ ಜಗತ್ತನ್ನು ಊಹಿಸಲು ಸಾಧ್ಯವಿಲ್ಲ. ಹೆಣ್ಣು ಜಗತ್ತಿನ ಅವಿಭಾಜ್ಯ ಅಂಗ. ಆಕೆ ಗಂಡಿಗೆ ಜನ್ಮ ನೀಡಿ ವ್ಯಕ್ತಿತ್ವ ರೂಪಿಸುತ್ತಾಳೆ. ನಾನಾ ರೀತಿಯ ಪಾತ್ರ ವಹಿಸುವ ಹೆಣ್ಣಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್. ಆರ್. ತಿಮ್ಮಯ್ಯ ಹೇಳಿದರು.</p>.<p>ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಕಾಲೇಜಿನ ಮಹಿಳಾ ವಿಭಾಗ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಘೋರ್ ಗ್ರೂಪ್ಸ್ ಹಾಗೂ ಆಂತರಿಕ ಗುಣಮಟ್ಟ ಖಾತ್ರಿ ಕೋಶದ ಸಹಯೋಗದಲ್ಲಿ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಯಾವುದೇ ಸರ್ಕಾರಿ ಸಂಸ್ಥೆ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಹತ್ತು ಜನಕ್ಕಿಂತ ಹೆಚ್ಚಿನ ಮಹಿಳೆಯರು ಕೆಲಸದಲ್ಲಿ ಇದ್ದಲ್ಲಿ ಅಲ್ಲಿ ಕಡ್ಡಾಯವಾಗಿ ಆಂತರಿಕ ದೂರು ಸಮಿತಿ ರಚಿಸಬೇಕು. ಮಹಿಳೆ ಲೈಂಗಿಕ ಕಿರುಕುಳಕ್ಕೆ ಒಳಗಾದರೆ ಈ ಸಮಿತಿಗೆ ದೂರು ಸಲ್ಲಿಸಬಹುದು. ಲೈಂಗಿಕ ಕಿರುಕುಳ ದೈಹಿಕವಾಗಿ ಮಾತ್ರ ಇರಬೇಕೆಂದಿಲ್ಲ. ಜಾಲತಾಣಗಳ ಮೂಲಕ ಪ್ರಚೋದನಾತ್ಮಕ ಚಿತ್ರ ಕಳಿಸುವುದು ಅಥವಾ ಸಂದೇಶ ಕಳುಹಿಸುವುದು, ಕೆಟ್ಟನೋಟ ಇವೆಲ್ಲವೂ ಲೈಂಗಿಕ ಕಿರುಕುಳದ ಭಾಗವೇ ಆಗಿವೆ. ಇಂತಹ ವಿಷಯಗಳ ಕುರಿತು ದೂರು ಸಲ್ಲಿಸುವ ಮೂಲಕ ದೌರ್ಜನ್ಯಕ್ಕೆ ತಡೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.</p>.<p>ಮಹಿಳೆಯರಲ್ಲಿ ಹೆಚ್ಚಾಗುತ್ತಿರುವ ಕ್ಯಾನ್ಸರ್ ರೋಗ ತಡೆಗಟ್ಟಲು ಕೇಂದ್ರ ಸರ್ಕಾರ 14 ವರ್ಷ ಮೇಲ್ಪಟ್ಟ ಹೆಣ್ಣು ಮಕ್ಕಳಿಗೆ ಉಚಿತವಾಗಿ ಎಚ್ಪಿವಿ ಲಸಿಕೆ ನೀಡುತ್ತಿದ್ದು, ಈ ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.</p>.<p>ಮಹಿಳಾ ವಿಭಾಗದ ಸಹ ನಿರ್ದೇಶಕಿ ಪ್ರೊ. ಸುಭಾಷಿಣಿ ಶ್ರೀವತ್ಸ, ಗಂಡು, ಹೆಣ್ಣು ಇಬ್ಬರೂ ಸಮಾಜದ ಕಣ್ಣುಗಳಿದ್ದ ಹಾಗೆ. ಕುಟುಂಬ ಸೇರಿದಂತೆ ಸಮಾಜದ ಸಮತೋಲನಕ್ಕೆ ಇಬ್ಬರ ಪಾತ್ರವೂ ಪ್ರಮುಖವಾಗಿರುತ್ತದೆ. ಸಮಾಜದಲ್ಲಿ ಪ್ರಕೃತಿ ಮತ್ತು ಪುರುಷ ಎರಡು ಕೊಂಡಿಗಳು ಒಟ್ಟಿಗೆ ಸಾಗಬೇಕು ಎಂದರು.</p>.<p>ಅಘೋರ ಗ್ರೂಪ್ಸ್, ಕಾಲೇಜಿಗೆ ಇನ್ಸಿನರೇಟರ್ ಯಂತ್ರವನ್ನು ಕೊಡುಗೆಯಾಗಿ ನೀಡಿತು. ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆ ಹೇಮಾ ಮಲ್ಯ, ಕಾಲೇಜಿನ ಸೂಕ್ಷ್ಮಾಣು ಜೀವವಿಜ್ಞಾನ ವಿಭಾಗದ ಮುಖ್ಯಸ್ಥೆ ಭಾರತಿ ಪ್ರಕಾಶ್, ಮಹಿಳಾ ವೇದಿಕೆ ಸಂಯೋಜಕಿ ಪ್ರೊ. ನಾಗರತ್ನಾ ರಾವ್, ಎಸ್.ಎಲ್. ಶೇಟ್ ವಜ್ರಾಭರಣ ಅಂಗಡಿಯ ದೀಪ್ತಿ ಶರತ್ ಶೇಟ್ ಹಾಗೂ ದಿವ್ಯಾ ಶೇಟ್ ಉಪಸ್ಥಿತರಿದ್ದರು.</p>.<p>ಸರ್ಕಾರಿ ಕಚೇರಿಗಳಲ್ಲಿ ಆಂತರಿಕ ದೂರು ಸಮಿತಿ ರಚನೆ ಹೆಣ್ಣು ಮಕ್ಕಳಿಗೆ ಉಚಿತವಾಗಿ ಎಚ್ಪಿವಿ ಲಸಿಕೆ ಸಮಾಜದ ಸಮತೋಲನಕ್ಕೆ ಹೆಣ್ಣು– ಗಂಡಿನ ಪಾತ್ರ ಮುಖ್ಯ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>