ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಕ್ಸಲ್ ನಿಗ್ರಹ ಪಡೆಯ ಎಸ್ಪಿ ಆರ್.ಚೇತನ್, ‘ಸತ್ತವರಲ್ಲಿ ಇಬ್ಬರು ಚಿಕ್ಕಮಗಳೂರು ಜಿಲ್ಲೆಯವರು ಎಂಬ ಮಾಹಿತಿಯನ್ನು ಕೇರಳ ಪೊಲೀಸರು ಮೊದಲು ನೀಡಿದ್ದರು. ಆದರೆ, ಸತ್ತವರೆಲ್ಲರೂ ತಮಿಳುನಾಡಿನವರು ಎಂಬುದಾಗಿ ಈಗ ಖಚಿತಪಡಿಸಿದ್ದಾರೆ. ಮೃತ ವ್ಯಕ್ತಿಗಳ ಕುಟುಂಬದವರು ಬಂದು ಗುರುತು ಪತ್ತೆ ಮಾಡಿದ ಬಳಿಕವೇ ಅಂತಿಮ ವರದಿ ಲಭ್ಯವಾಗಲಿದೆ’ ಎಂದರು.