ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸೆಂಟರ್ ಅಧ್ಯಕ್ಷ ಬಿ. ಝಕಾರಿಯಾ ಜೋಕಟ್ಟೆ ಅವರು, ‘ಹಲವು ಸಭಾಂಗಣಗಳ ಸಂಕೀರ್ಣವಾಗಿರುವ ಕನ್ವೆನ್ಶನ್ ಸೆಂಟರ್ನಲ್ಲಿ ವೈಫೈ ಸೌಲಭ್ಯ, ವರ್ಟಿಕಲ್ ಗಾರ್ಡನ್ ಸೇರಿದಂತೆ ಸಕಲ ವ್ಯವಸ್ಥೆಗಳು ಇವೆ. ಮುಸ್ಲಿಂ ಧಾರ್ಮಿಕ ಮುಖಂಡ ಎ.ಪಿ. ಅಬೂಬಕರ್ ಮುಸ್ಲಿಯಾರ್, ಜಿಲ್ಲಾ ಖಾಜಿ ತ್ವಾಕಾ ಅಹ್ಮದ್ ಮುಸ್ಲಿಯಾರ್, ಉಡುಪಿ ಜಿಲ್ಲಾ ಖಾಜಿ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್, ಡಿಕೆಎಸ್ಸಿ ಅಧ್ಯಕ್ಷ ಕೆ.ಎಸ್. ಆಟಕೋಯ ತಂಗಳ್ ಸಭಾಂಗಣ ಉದ್ಘಾಟಿಸುವರು’ ಎಂದರು.