ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಹಾರ್ದ ಸಾಮೂಹಿಕ ವಿವಾಹ 27ಕ್ಕೆ

Last Updated 24 ಡಿಸೆಂಬರ್ 2021, 2:07 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು– ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಗಂಜಿಮಠದಲ್ಲಿ ನಿರ್ಮಾಣವಾಗುತ್ತಿರುವ ‘ಝಾರಾ ಕನ್ವೆನ್ಶನ್ ಸೆಂಟರ್‌’ ಉದ್ಘಾಟನೆ ಡಿ.26ರ ಸಂಜೆ 6.30ಕ್ಕೆ ನಡೆಯಲಿದೆ. ಇದರ ಅಂಗವಾಗಿ ಝರಾ ಚಾರಿಟಬಲ್ ಫೌಂಡೇಷನ್ ಡಿ.27ರಂದು ಬೆಳಿಗ್ಗೆ 10 ಗಂಟೆಗೆ ‘ಸೌಹಾರ್ದ ಸಾಮೂಹಿಕ ವಿವಾಹ’ವನ್ನು ಆಯೋಜಿಸಿದೆ.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸೆಂಟರ್ ಅಧ್ಯಕ್ಷ ಬಿ. ಝಕಾರಿಯಾ ಜೋಕಟ್ಟೆ ಅವರು, ‘ಹಲವು ಸಭಾಂಗಣಗಳ ಸಂಕೀರ್ಣವಾಗಿರುವ ಕನ್ವೆನ್ಶನ್ ಸೆಂಟರ್‌ನಲ್ಲಿ ವೈಫೈ ಸೌಲಭ್ಯ, ವರ್ಟಿಕಲ್ ಗಾರ್ಡನ್ ಸೇರಿದಂತೆ ಸಕಲ ವ್ಯವಸ್ಥೆಗಳು ಇವೆ. ಮುಸ್ಲಿಂ ಧಾರ್ಮಿಕ ಮುಖಂಡ ಎ.ಪಿ. ಅಬೂಬಕರ್ ಮುಸ್ಲಿಯಾರ್, ಜಿಲ್ಲಾ ಖಾಜಿ ತ್ವಾಕಾ ಅಹ್ಮದ್ ಮುಸ್ಲಿಯಾರ್, ಉಡುಪಿ ಜಿಲ್ಲಾ ಖಾಜಿ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್, ಡಿಕೆಎಸ್‌ಸಿ ಅಧ್ಯಕ್ಷ ಕೆ.ಎಸ್. ಆಟಕೋಯ ತಂಗಳ್ ಸಭಾಂಗಣ ಉದ್ಘಾಟಿಸುವರು’ ಎಂದರು.

ಆರ್ಥಿಕ ತೊಂದರೆಯಲ್ಲಿರುವ ಕುಟುಂಬದ ಹೆಣ್ಣು ಮಕ್ಕಳ ಮದುವೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈಗಾಗಲೇ 400ಕ್ಕೂ ಹೆಚ್ಚು ಮದುವೆಗಳನ್ನು ಝಕಾರಿಯಾ ಜೋಕಟ್ಟೆ ಮಾಡಿಸಿದ್ದಾರೆ. ಈ ಬಾರಿಯ ಸಾಮೂಹಿಕ ವಿವಾಹದಲ್ಲಿ 15 ಜೋಡಿಗಳು ಮದುವೆಯಾಗಲಿವೆ. ವಧು–ವರರ ವಸ್ತ್ರ, ನಗದು, ಚಿನ್ನದ ಆಭರಣವನ್ನು ಫೌಂಡೇಷನ್ ಉಚಿತವಾಗಿ ನೀಡಲಿದೆ ಎಂದು ನಿರ್ದೇಶಕ ಝಹೀರ್ ಝಕಾರಿಯಾ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ನಿರ್ದೇಶಕರಾದ ನಝೀರ್ ಝಕಾರಿಯಾ, ಝಾಹಿದ್ ಝಕಾರಿಯಾ, ಸಾಮೂಹಿಕ ವಿವಾಹ ಸಂಘಟನಾ ಸಮಿತಿ ಸಂಚಾಲಕ ಉಮರ್ ಯು.ಎಚ್. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT